Homeಮುಖಪುಟನಿತೀಶ್ ಕುಮಾರ್ ಆಗಮನದಿಂದ ಬಿಜೆಪಿಗೆ ಹೆಚ್ಚಿನ ಲಾಭವಿಲ್ಲ: ಪ್ರಶಾಂತ್ ಕಿಶೋರ್

ನಿತೀಶ್ ಕುಮಾರ್ ಆಗಮನದಿಂದ ಬಿಜೆಪಿಗೆ ಹೆಚ್ಚಿನ ಲಾಭವಿಲ್ಲ: ಪ್ರಶಾಂತ್ ಕಿಶೋರ್

- Advertisement -
- Advertisement -

ನಿತೀಶ್ ಕುಮಾರ್ ಮತ್ತು ಅವರ ಜೆಡಿಯು ಪಕ್ಷವನ್ನು ಎನ್‌ಡಿಎ ತೆಕ್ಕೆಗೆ ಮರಳಿ ಕರೆತಂದಿರುವುದರಿಂದ ಬಿಜೆಪಿಗೆ ಹೆಚ್ಚಿನ ಲಾಭವಿಲ್ಲ ಎಂದು ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಹೇಳಿದರು.

ಬಿಹಾರದಿಂದ ಬಿಜೆಪಿಯ ಗೆಲ್ಲುವ ಸ್ಥಾನಗಳಲ್ಲಿ ಭಾರಿ ವ್ಯತ್ಯಾಸವಾಗುವುದಿಲ್ಲ. ಆದರೆ, ಈ ಬೆಳವಣಿಗೆ ಪ್ರತಿಪಕ್ಷಗಳ ಮಾನಸಿಕ ಸ್ಥೈರ್ಯವನ್ನು ಕಡಿಮೆಯಾಗಿಸಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಕಳೆದ ವರ್ಷ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ವಿರೋಧ ಪಕ್ಷಗಳನ್ನು ಮುನ್ನಡೆಸಿದ್ದ ನಿತೀಶ್ ಕುಮಾರ್ ಅವರು ಇಂಡಿಯಾ ಬಣವನ್ನು ತೊರೆದು ಎನ್‌ಡಿಎ ಸೇರಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಪರಸ್ಪರ ಕೆಸರೆರಚಾಟದ ಹೊರತಾಗಿಯೂ, ಜೆಡಿಯು ಮತ್ತು ಬಿಜೆಪಿ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ತೋರುತ್ತದೆ. ಆದರೆ, ನಿತೀಶ್ ಕುಮಾರ್ ಅವರು ಇಂಡಿಯಾ ಬಣದಿಂದ ನಿರ್ಗಮಿಸಿದ್ದರಿಂದ ಮೈತ್ರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಯಾರೊಂದಿಗೆ ಸ್ಪರ್ಧಿಸಿದರೂ, ಅದು 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ನಿತೀಶ್ ಕುಮಾರ್ ಅವರನ್ನು ಬಿಜೆಪಿಯು ವಾಪಸ್ ಕರೆಸಿಕೊಳ್ಳುವ ಮೂಲಕ ಗೆಲ್ಲುವ ಯುದ್ಧದಲ್ಲಿ ಸೋಲುವ ತಂತ್ರಕ್ಕೆ ಹೊರಟಿದೆ. ಬಿಜೆಪಿಯ ಸಂಖ್ಯೆಯೂ ಕಡಿಮೆಯಾಗಲಿದೆ. ಏಕೆಂದರೆ ಅವರು ಜೆಡಿಯು ಜೊತೆ ಸೀಟುಗಳನ್ನು ಹಂಚಿಕೊಳ್ಳುತ್ತಾರೆ. ಈ ನಿರ್ಧಾರದಿಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಲೆ ತೆರಬೇಕಾಗುತ್ತದೆ; ಇದು ಬಿಜೆಪಿಗೆ ತಿಳಿದಿದೆ’ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಯಾರು ಸಲಹೆ ನೀಡುತ್ತಿದ್ದಾರೊ ಗೊತ್ತಿಲ್ಲ:

ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ರಾಹುಲ್ ಗಾಂಧಿ ತೆಗೆದುಕೊಂಡಿರುವ ಸಮಯ ತಪ್ಪಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. “ಈಗ ಅವರು ಪ್ರಧಾನ ಕಚೇರಿಯಲ್ಲಿರಬೇಕು; ಅವರು ಫಿಲ್ಡ್‌ನಲ್ಲಿ ಇರಬೇಕಾದಾಗ, ಪ್ರಧಾನ ಕಚೇರಿಯಲ್ಲಿದ್ದರು. ಪ್ರಧಾನ ಕಚೇರಿಯಲ್ಲಿ ಅವರ ಅಗತ್ಯವಿದ್ದಾಗ, ಈಗ ಯಾತ್ರೆಯಲ್ಲಿದ್ದಾರೆ. ಇದು ಅವರ ಸಮಯದ ಉತ್ತಮ ಬಳಕೆ ಎಂದು ನಾನು ಭಾವಿಸುವುದಿಲ್ಲ’ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಇಂಡಿಯಾ ಬ್ಲಾಕ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆಂದರೆ, ಸಾಕಷ್ಟು ತಡವಾಗಿ ಅಸ್ತಿತ್ವಕ್ಕೆ ಬಂದಿತು. ‘2021 ಅಥವಾ 2022 ರಲ್ಲಿ ಅವರು ಒಟ್ಟಿಗೆ ಸೇರುವುದನ್ನು ಯಾವುದು ತಡೆಯಿತು? 2024 ರಲ್ಲಿ ಚುನಾವಣೆ ನಡೆಯಲಿದೆ ಮತ್ತು ಸೀಟು ಹಂಚಿಕೆ ನಡೆಯಲಿದೆ ಎಂದು ಅವರಿಗೆಲ್ಲ ಮೊದಲೆ ತಿಳಿದಿತ್ತು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2024ಕ್ಕೂ ಮೋದಿಯೆ ಪ್ರಧಾನಿ:

ರಾಮಮಂದಿರವು ಹೊಸ ಮತಗಳನ್ನು ಸೇರಿಸುವುದಿಲ್ಲ; ಆದರೆ ಮತಗಳನ್ನು ಕ್ರೋಢೀಕರಿಸುತ್ತದೆ. ನರೇಂದ್ರ ಮೋದಿ ಅವರ ಶಕ್ತಿ ಅವರು ಮತ್ತು ಅವರ ಕಾರ್ಯಸೂಚಿಗಳು ಪ್ರತಿ 5 ವರ್ಷಗಳಿಗೊಮ್ಮೆ ವಿಕಸನಗೊಳ್ಳುತ್ತವೆ. 2002ರಲ್ಲಿ ಅವರು ಹಿಂದೂ ಹೃದಯ ಸಾಮ್ರಾಟ್ ಆಗಿದ್ದರು. 2007ರ ಹೊತ್ತಿಗೆ ಅವರು ಗುಜರಾತ್‌ನಲ್ಲಿ ಅಭಿವೃದ್ಧಿಯನ್ನು ತರಬಲ್ಲ ಈ ಸಮರ್ಥ ಆಡಳಿತಗಾರರಾದರು. 2014ರ ಹೊತ್ತಿಗೆ ಅವರು ಭಾರತವನ್ನು ಬದಲಾಯಿಸಬಲ್ಲ ವ್ಯಕ್ತಿಯಾದರು. 2019, ಅವರು ಭಾರತದ ಕಥೆಗಳಿಗೆ ದೊಡ್ಡ ಹೆಮ್ಮೆ, ಧೈರ್ಯ ಮತ್ತು ದೃಢತೆಯನ್ನು ತರಬಲ್ಲ ವ್ಯಕ್ತಿಯಾದರು. 2024 ರಲ್ಲಿ ಅವರನ್ನು ದೇಶಕ್ಕೆ ರಾಮನನ್ನು ತಂದ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ಬಿಜೆಪಿ ಮಾಡುವುದೆಲ್ಲವೂ ಮೋದಿಯ ಈ ಬ್ರ್ಯಾಂಡಿಂಗ್‌ಗೆ ಅಧೀನವಾಗಿದೆ… ಅವರು ಬಿಜೆಪಿಯ ಇಂದಿರಾಗಾಂಧಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಇದನ್ನೂ ಓದಿ; ಚಂಡೀಗಢ ಮೇಯರ್ ಚುನಾವಣೆ: ಹೊಸದಾಗಿ ಮತದಾನ ನಡೆಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಎಎಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...