Homeಮುಖಪುಟಲೋಕಸಭೆ ಭದ್ರತಾ ಲೋಪ: 'ಶೂ' ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮೊದಲೇ ಗುರುತಿಸಿದ್ದ ಮನೋರಂಜನ್!

ಲೋಕಸಭೆ ಭದ್ರತಾ ಲೋಪ: ‘ಶೂ’ ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮೊದಲೇ ಗುರುತಿಸಿದ್ದ ಮನೋರಂಜನ್!

- Advertisement -
- Advertisement -

ಸಂಸತ್ ಭವನದ ಬಿಗಿ ಭದ್ರತೆ ದಾಟಿ ಲೋಕಸಭೆಯೊಳಗೆ ಪ್ರವೇಶಿಸಿ, ‘ಕಲರ್ ಸ್ಮೋಕ್’ ದಾಳಿ ನಡೆಸಿದ್ದವರಲ್ಲಿ ಒಬ್ಬನಾಗಿರುವ ಮೈಸೂರು ನಿವಾಸಿ ಮನೋರಂಜನ್, ಸಂಸತ್ತಿನಲ್ಲಿ ‘ಶೂ’ ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮೊದಲೇ ಗುರುತಿಸಿದ್ದ ಎಂದು ತಿಳಿದುಬಂದಿದೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಂದ ಪ್ರವೇಶ ಪಾಸ್ ಪಡೆದು ಬುಧವಾರ ಲೋಕಸಭೆ ಪ್ರವೇಶಿಸಿದ ಕರ್ನಾಟಕದ ಮನೋರಂಜನ್, ಸಂಸತ್ತಿನ ಪ್ರವೇಶದ ಸಮಯದಲ್ಲಿ ಶೂಗಳನ್ನು ಪರಿಶೀಲಿಸುವುದಿಲ್ಲ ಎಂಬುದನ್ನು ಕಳೆದ ಜುಲೈನಲ್ಲೆ ಕಂಡುಕೊಂಡಿದ್ದ. ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಮನೋರಂಜನ್ ‘ಕಂಡದ್ದು’ ಭದ್ರತಾ ಉಲ್ಲಂಘನೆಗೆ ಉಪಯುಕ್ತವಾಯಿತು. ‘ಜುಲೈನಲ್ಲಿ ದೆಹಲಿಗೆ ಬಂದಿದ್ದ ಮನೋರಂಜನ್, ಸಂಸದರ ಹೆಸರಿನಲ್ಲಿ ನೀಡಲಾದ ವಿಸಿಟರ್ ಪಾಸ್‌ನಲ್ಲಿ ಸಂಸತ್ ಪ್ರವೇಶಿಸಿದ್ದ ಎನ್ನಲಾಗಿದೆ. ಪರಿಶೀಲನೆ ವೇಳೆ ಬೂಟುಗಳನ್ನು ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮನೋರಂಜನ್ ತಿಳಿದುಕೊಂಡಿದ್ದ.

ಪ್ರಕರಣದಲ್ಲಿ ಒಟ್ಟು ಆರು ಜನ ಪಾಲ್ಗೊಂಡಿದ್ದಾರೆ ಎನ್ನಲಾಗಿದ್ದು, ರಾಜಸ್ಥಾನದಲ್ಲಿ ಪತ್ತೆಯಾಗಿರುವ ಲಲಿತ್ ಝಾ ಈ ಗುಂಪಿನ ನಾಯಕ ಎನ್ನಲಾಗುತ್ತಿದೆ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಲಲಿತ್ ಕೋಲ್ಕತ್ತಾದ ನಿವಾಸಿ. ಅವರೆಲ್ಲರೂ ‘ಭಗತ್ ಸಿಂಗ್ ಫ್ಯಾನ್ ಪೇಜ್’ ಅನ್ನು ನಿರ್ವಹಿಸುತ್ತಿದ್ದರು. ಹುತಾತ್ಮ ಭಗತ್ ಸಿಂಗನಂತೆ ಏನನ್ನಾದರೂ ಕ್ರಾಂತಿ ಮಾಡಲು ಬಯಸಿದ್ದರು ಎನ್ನಲಾಗಿದ್ದು, ಲಲಿತ್ ಝಾ, ಮನೋರಂಜನ್ ಡಿ, ಸಾಗರ್ ಶರ್ಮಾ, ನೀಲಂ ಆಜಾದ್, ಅಮೋಲ್ ಶಿಂಧೆ ಅವರು ಬುಧವಾರ ಸಂಸತ್ತಿನ ಆಸುಪಾಸಿನಲ್ಲಿದ್ದ ಐದು ಜನ ಪ್ರಮುಖ ಆರೋಪಿಗಳಾಗಿದ್ದಾರೆ.

ತಮ್ಮ ಯೋಜನೆಯಂತೆ, ಸಂಸತ್ ಪ್ರವೇಶಿಸುವ ಸಲುವಾಗಿ ಇವರೆಲ್ಲರೂ ಡಿಸೆಂಬರ್ 10 ರಂದು ದೆಹಲಿಯನ್ನು ತಲುಪಿದ್ದರು. ಅವರಿಗೆ ಗುರುಗ್ರಾಮದ ವಿಶಾಲ್ ಶರ್ಮಾ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಘಟನೆ ನಂತರ ಮನೋರಂಜನ್, ಸಾಗರ್, ನೀಲಂ ಮತ್ತು ಅನ್ಮೋಲ್ ಅವರನ್ನು ನಿನ್ನೆಯೇ ಬಂಧಿಸಲಾಗಿದ್ದು, ಅವರ ವಿರುದ್ಧ ಯುಎಪಿಎ ಆರೋಪವನ್ನು ಹೊರಿಸಲಾಗಿದೆ. ಇಂದು ವಿಶಾಲ್ ಶರ್ಮಾನನ್ನೂ ಕೂಡ ಬಂಧಿಸಲಾಗಿದೆ.
ಸುಮಾರು ಒಂದೂವರೆ ವರ್ಷದ ಹಿಂದೆ ಲಲಿತ್, ಸಾಗರ್ ಶರ್ಮಾ ಮತ್ತು ಮನೋರಂಜನ್ ಮೈಸೂರಿನಲ್ಲಿ ಭೇಟಿಯಾಗಿದ್ದರು. ಅಲ್ಲಿ ಅವರು ಸಂಸತ್ತಿಗೆ ನುಗ್ಗುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ನಂತರ ಅವರು ನೀಲಂ ಮತ್ತು ಅಮೋಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು.

ಘಟನೆ ನಂತರ ಲಲಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅದನ್ನು ಪಶ್ಚಿಮ ಬಂಗಾಳದ ವಿಶಾಲ್ ಶರ್ಮಾ ಮತ್ತು ನೀಲಾಕ್ಷ ಐಚ್ ಅವರಿಗೆ ಕಳುಹಿಸಿದ್ದಾರೆ. ಇಲ್ಲಿಯವರೆಗಿನ ತನಿಖೆಯಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಯ ಸಂಪರ್ಕ ಬಂಧಿತರಿಗೆ ಇರುವುದು ಪತ್ತೆಯಾಗಿಲ್ಲ. ಮನೋರಂಜನ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ. ಆದರೆ, ಆತನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನಿಸಿದರೆ ಆತ ‘ಕ್ರಾಂತಿಕಾರಿ’ಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ; ‘ನನ್ನ ಮಗ ಮೋದಿ ಅಭಿಮಾನಿ’ ಎಂದ ಲೋಕಸಭೆಗೆ ನುಗ್ಗಿದ ಮನೋರಂಜನ್ ತಂದೆ!

ಇನ್ನು ಅಮೋಲ್ ಡಿ. 9 ರಂದು ಸೇನಾ ನೇಮಕಾತಿಗಾಗಿ ದೆಹಲಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಈತ ಮಹಾರಾಷ್ಟ್ರದ ಕಲ್ಯಾಣ್‌ನಿಂದ ಸುಮಾರು ₹1,200 ಬೆಲೆಗೆ ಬಣ್ಣದ ಹೊಗೆ ಡಬ್ಬಿಗಳನ್ನು (ಸ್ಮೋಕ್ ಬಾಂಬ್) ಖರೀದಿಸಿದ್ದ ಎಂದು ತಿಳಿದುಬಂದಿದೆ.

ಆಶ್ರಯ ನೀಡಿದ್ದ ವಿಶಾಲ್ ಶರ್ಮಾ ಬಂಧನ:

ಲೋಕಸಭೆಯ ಭದ್ರತಾ ಲೋಪದ 5ನೇ ಶಂಕಿತ ಆರೋಪಿ ವಿಶಾಲ್ ಶರ್ಮಾ ಎಂಬಾತನನ್ನು ತನಿಖಾ ತಂಡ ಗುರುಗ್ರಾಮದಲ್ಲಿ ವಶಕ್ಕೆ ಪಡೆದಿದೆ. ಈತ ಯೋಜನೆ ರೂಪಿಸಿದ ನಾಲ್ವರಿಗೆ ಆಶ್ರಯ ನೀಡಿದ್ದಾನೆ ಎನ್ನಲಾಗಿದೆ. ಸಾಗರ್ ಶರ್ಮಾ ಮತ್ತು ಮನೋರಂಜನ್ ಅಧಿವೇಶನದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯೊಳಗೆ ಧುಮುಕಿ ಹಳದಿ ಬಣ್ಣದ ಹೊಗೆಯನ್ನು (ಸ್ಮೂಕ್ ಬಾಂಬ್) ಸ್ಪೋಟಿಸಿದರು. ಸಂಸತ್ತಿನ ಹೊರಗೆ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಕೂಡ ಹಳದಿ ಹೊಗೆ ಸ್ಪೋಟಿಸಿ ಘೋಷಣೆ ಕೂಗಿದರು. ಬಂಧಿತ ಐವರೂ ಕೂಡ ವಿಭಿನ್ನ ಹಿನ್ನೆಲೆಯವರಾಗಿದ್ದು, ಎಲ್ಲರೂ ನಿರುದ್ಯೋಗಿ ಯುವಕರು.

ಆರು ಆರೋಪಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದರೂ ಒಬ್ಬರಿಗೊಬ್ಬರು ಮೊದಲೇ ಪರಿಚಿತರಾಗಿದ್ದರು. ಬುಧವಾರ ಸಂಸತ್ತಿನಲ್ಲಿ ಅವರು ಏನು ಮಾಡುತ್ತಿದ್ದಾರೆಂಬುದು ಅವರ ಕುಟುಂಬದ ಸದಸ್ಯರಿಗೆ ತಿಳಿದಿರಲಿಲ್ಲ. ಬಂಧಿತರೆಲ್ಲರೂ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು ಮತ್ತು ನಿರುದ್ಯೋಗದ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ತನಿಖೆ ವೇಳೆ ಅಮೋಲ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಬಂಧಿತರು ಯಾವುದಾದರೂ ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದಿಲ್ಲ.

ಇದನ್ನೂ ಓದಿ; ಕಲಾಪಕ್ಕೆ ಅಡ್ಡಿ ಆರೋಪ; ಕಾಂಗ್ರೆಸ್-ಡಿಎಂಕೆ ಪಕ್ಷದ 14 ಸಂಸದರು ಲೋಕಸಭೆಯಿಂದ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಐಟಿ ಸೆಲ್‌ ಸಿಬ್ಬಂದಿಗೆ ಪೊಲೀಸರಿಂದ ಕಿರುಕುಳ: ಸುಪ್ರಿಯಾ ಶ್ರೀನಾಟೆ ಆರೋಪ

0
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪೊಲೀಸರು "ಕಿರುಕುಳ" ಮತ್ತು "ಬೆದರಿಕೆ" ಹಾಕುತ್ತಿದ್ದಾರೆ  ಎಂದು...