ಮಣಿಪುರ ಹಿಂಸಾಚಾರ ಮತ್ತು ಅಲ್ಲಿಯ ಬುಡುಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಕೃತ್ಯದ ಬಗ್ಗೆ ದೇಶವ್ಯಾಪಿ ಕೋಲಾಹಲ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷದ ಮೈತ್ರಿ INDIA ಆಗ್ರಹಿಸಿದೆ. ಪ್ರಧಾನಿ ಮೋದಿಯವರ ಹೇಳಿಕೆಯ ನಂತರವೇ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ
ಲೋಕಸಭೆಯಲ್ಲಿ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸಂಸದರು ”ಇಂಡಿಯಾ ಫಾರ್ ಮಣಿಪುರ” ಮತ್ತು ”ಭಾರತ ಮಣಿಪುರ ಕುರಿತು ಪ್ರಧಾನಿ ಹೇಳಿಕೆ ನೀಡಲೇಬೇಕು” ಎಂಬ ಫಲಕಗಳನ್ನು ಹಿಡಿದುಕೊಂಡಿದ್ದಾರೆ.
Opposition MPs with placards 'INDIA for Manipur' and 'INDIA demand PM statement on Manipur' in Lok Sabha as the session gets underway pic.twitter.com/uHcmyheJDI
— ANI (@ANI) July 24, 2023
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ”ನಾವು ಸಿದ್ಧರಿದ್ದೇವೆ…140 ಕೋಟಿ ಜನರ ನಾಯಕ(ಮೋದಿ) ಸಂಸತ್ತಿನ ಹೊರಗೆ ಹೇಳಿಕೆ ನೀಡಿದರೆ, ಜನಪ್ರತಿನಿಧಿಗಳು ಕುಳಿತುಕೊಳ್ಳುವ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು” ಎಂದು ರಾಜ್ಯಸಭೆ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
#WATCH | "We are ready…If the leader of 140 crore people makes a statement outside the Parliament, then he should make a statement in the Parliament where people's representatives sit," says LoP Rajya Sabha & Congress President Mallikarjun Kharge. pic.twitter.com/fxXJv5HByv
— ANI (@ANI) July 24, 2023
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ”ಸಂಸತ್ತಿನ 3ನೇ ದಿನದ ಮುಂಗಾರು ಅಧಿವೇಶನ ಇಂದು ಆರಂಭವಾಗಿದೆ. INDIAದ ಬೇಡಿಕೆ ನೇರವಾಗಿದೆ… ಮಣಿಪುರದಲ್ಲಿ ಮೇ 3ರ ನಂತರದ ಭೀಕರ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಸಮಗ್ರ ಹೇಳಿಕೆ ನೀಡಬೇಕು. ಆನಂತರ ನಮ್ಮ ಸಾಮೂಹಿಕ ನೋವು, ವೇದನೆ ಮತ್ತು ಸಾಮರಸ್ಯದ ಬಯಕೆಯನ್ನು ವ್ಯಕ್ತಪಡಿಸಲು ಚರ್ಚೆ ನಡೆಯಲಿದೆ” ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
”ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಧಾನಮಂತ್ರಿ ಮಾಡುವ ಯಾವುದೇ 5D ನಾಟಕ: ಮೊದಲು ಆ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ, ವಿಷಯವನ್ನು ತಿರುಚಲು ಯತ್ನಿಸುತ್ತಾರೆ, ವಿಷಯವನ್ನು ಬೇರೆಡೆಗೆ ತಿರುಗಿಸುತ್ತಾರೆ ಮತ್ತು ‘ಮಾನನಷ್ಟಗೊಳಿಸುತ್ತಾರೆ.” ಈ ವಿಚಾರದಲ್ಲೂ ಹಾಗೇ ಮಾಡುತ್ತಾರೆಯೇ? ಮಣಿಪುರ ಸೇರಿ ಇಡೀ ದೇಶ ಗಮನಿಸುತ್ತಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
The 3rd day of Monsoon session of Parliament begins today. INDIA's demand is straightforward. PM should make a comptehensive statement on the horrific post-May 3 developments in Manipur, after which a discussion would take place to express our collective sense of pain, anguish…
— Jairam Ramesh (@Jairam_Ramesh) July 24, 2023
ಎಎಪಿ ಸಂಸದ ರಾಘವ್ ಚಡ್ಡಾ ಮಾತನಾಡಿ, ”ದೇಶದಲ್ಲಿ ಶಾಂತಿಯನ್ನು ಮರುಸ್ಥಾಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಮಣಿಪುರದ ವಿಷಯದ ಬಗ್ಗೆ ಸರ್ಕಾರ ಮತ್ತು ಪ್ರಧಾನಿ ಮೋದಿ ಮಾತನಾಡಬೇಕು ಎಂದು ದೇಶವು ಒತ್ತಾಯಿಸುತ್ತದೆ” ಎಂದು ಹೇಳಿದ್ದಾರೆ.
”ನ್ಯಾಯಾಂಗ ಇದರಲ್ಲಿ ಮಧ್ಯಪ್ರವೇಶಿಸಬೇಕು, ಮಣಿಪುರದಲ್ಲಿ ಏನು ನಡೆಯುತ್ತಿದೆ ಮತ್ತು ದೇಶದ ಇತರ ಭಾಗಗಳಲ್ಲಿ ಏನು ನಡೆಯುತ್ತಿದೆ ಎಂಬುದರ ನಡುವೆ ವ್ಯತ್ಯಾಸವಿದೆ” ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಹಲವಾರು ವಿರೋಧ ಪಕ್ಷದ ನಾಯಕರು ನೋಟಿಸ್ ನೀಡಿದ್ದಾರೆ. ಯಾವುದೇ ನಿರ್ಬಂಧವಿಲ್ಲದೆ ಎಲ್ಲಾ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಬೇಕು ಮತ್ತು ಗುರುವಾರ ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಈ ವಿಚಾರವಾಗಿ ಪ್ರತಿಭಟನೆಗಳು ನಡೆಸುತ್ತಿವೆ.
ಇದನ್ನೂ ಓದಿ: ಸರ್ಕಾರದ ಮನವಿ ಧಿಕ್ಕರಿಸಿ ಮಣಿಪುರಕ್ಕೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್