Homeಸಾಮಾಜಿಕಅಂಬಿ ಎಂಬ ಚೌಕಟ್ಟಿನಾಚೆಯ ವ್ಯಕ್ತಿತ್ವ

ಅಂಬಿ ಎಂಬ ಚೌಕಟ್ಟಿನಾಚೆಯ ವ್ಯಕ್ತಿತ್ವ

- Advertisement -
- Advertisement -

ಡಿ.ಪಿ.ಗೌತಮ್ |

‘ಅಂಬಿ’, ‘ಅಂಬರೀಶ್’ ಎಂದು ಕರೆಯಲಾಗುತ್ತಿದ್ದ ರಾಜಕಾರಣಿಯಾಗಿ ಬದಲಾದ ನಟ ಅಮರನಾಥ್ ಬದುಕು ಚೌಕಟ್ಟಿನಾಚೆಯದು. ಯಾವುದೇ ಸೈಜಿನ ಕ್ಯಾನ್ವಾಸ್ ತೆಗೆದುಕೊಂಡರೂ ಅದರೊಳಗೆ ಸಮಂಜಸ ರೀತಿಯಲ್ಲಿ ಫಿಟ್ ಆಗದ ವ್ಯಕ್ತಿತ್ವ. ಕ್ಯಾನ್ವಾಸಿನಾಚೆಗೆ ಬೆಳೆದು ಬಿಡುತ್ತದೆ. ಅಥವಾ ಮಧ್ಯದಲ್ಲಿ ಅಥವಾ ಯಾವುದೋ ಒಂದು ಮೂಲೆಗೆ ಮಾತ್ರ ಸೀಮಿತವಾಗಿ ಬಿಡುತ್ತದೆ.

ವ್ಯಕ್ತಿಯೊಬ್ಬ ಮೃತನಾದಾಗ ಅವನ ಬಗೆಗಿನ ಎಲ್ಲ ಅಸಮಾಧಾನಗಳನ್ನು ಮರೆತು ಬಿಡುವುದು ಹಾಗೂ ಮೆಚ್ಚಿಗೆ-ಹೊಗಳಿಕೆ ಮಾತ್ರ ಉಳಿಸಿಕೊಳ್ಳುವ ಸತ್ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಬಹುತೇಕ ಅದು ಸರಿಯಾದ ಕ್ರಮ ಕೂಡ. ಆದರೆ, ವ್ಯಕ್ತಿಯೊಬ್ಬನ ಬದುಕು ಮುಗಿದಾಗ ‘ಮಾಡಬಹುದು’ ಎಂಬ ನಿರೀಕ್ಷೆಗಳೂ ಮುಗಿದು ಹೋಗುವುದರಿಂದ ಬರೀ ಧನಾತ್ಮಕ ಅಂಶಗಳಿಗೆ ಮಾತ್ರ ಸೀಮಿತ ಮಾಡಬೇಕಿಲ್ಲ. ಹಾಗಂತ ಇಡೀ ಬದುಕನ್ನು ಕಪ್ಪು-ಬಿಳುಪಿನ ದ್ವಿವರ್ಣದ ಛಾಯೆಯಲ್ಲಿ ವಿಭಾಗಿಸಿ ನೋಡುವುದು ಕೂಡ ಸರಿಯಲ್ಲ. ಬದುಕು ಬಹುತೇಕ ‘ಗ್ರೇ’ ಏರಿಯಾದಲ್ಲಿಯೇ ನಡೆಯುತ್ತದೆ. ಅರೆಬೆಳಕು-ಕತ್ತಲೆ, ಬೆಳಕು ಬೀಳದ- ಅರಿವಿಗೆ ಬಾರದ, ಹಾಗಂತ ಮುಚ್ಚಿ ಹೋಗುವಷ್ಟು ಕತ್ತಲೆಯೂ ಇಲ್ಲದ ಪ್ರದೇಶ. ಟೀಕೆ-ಹೊಗಳಿಕೆಗಳಿಗೆ ಮಾತ್ರ ಸೀಮಿತವಾಗದೇ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು. ಇದು ಅಂಬರೀಶ್ ಅವರ ವ್ಯಕ್ತಿತ್ವಕ್ಕೂ ಅನ್ವಯ ಆಗುತ್ತದೆ.

ಅಂಬರೀಶ್ ಅವರು ತಮ್ಮ 66ನೇ ವಯಸ್ಸಿನಲ್ಲಿ ತಮ್ಮ ಜೀವನದ ‘ಆಟ’ ಮುಗಿಸಿದ್ದಾರೆ. ಹೌದು 66 ಸಾಯುವ ವಯಸ್ಸೇನಲ್ಲ. ಹಾಗೆ ನೋಡಿದರೆ ಸಾವಿಗೂ ವಯಸ್ಸಿಗೂ ಯಾವುದೇ ರೀತಿಯ ನೇರ ಸಂಬಂಧ ಇಲ್ಲ. ಬದುಕು ನೀಡಿದ ‘ಅವಕಾಶ’ ಮುಗಿವ ಕ್ಷಣ ಯಾವಾಗಬೇಕಾದರೂ ಬರಬಹುದು. ಅವರ ‘ಆಪ್ತಮಿತ್ರ’ನಿಗೆ ಇವರಿಗಿಂತ ಬೇಗ ಬಂದಿತ್ತು. ನಾಲ್ಕುವರೆ ವರ್ಷಗಳ ಹಿಂದೆ ಸ್ವತಃ ಅಂಬರೀಶ್ ಅವರೇ ಸಾವಿಗೆ ಮುಖಾಮುಖಿ ಆಗಿ ಬಂದಿದ್ದರು. ಹೀಗೆ ಮರುಹುಟ್ಟು ಪಡೆದ ನಂತರವೂ ‘ಅಂಬಿ’ ಬದಲಾಗಲಿಲ್ಲ. ಹಲವರಿಗೆ ಬಹುತೇಕ ಅಸಾಧ್ಯವಾಗಿರುವ ಬದುಕು ನೀಡಿದ ಎರಡನೆ ಬೋನಸ್ ‘ಅವಕಾಶ’ವನ್ನು ಬಳಸಿಕೊಳ್ಳಬೇಕಾದ ರೀತಿಯಲ್ಲಿ ಬಳಸಲಿಲ್ಲ ಎಂಬುದು ಪ್ರೀತಿ ತುಂಬಿದ ಆಕ್ಷೇಪ. ಆರೂವರೆ ದಶಕಗಳ ಬದುಕಿನತ್ತ ಹಿಂತಿರುಗಿ ನೋಡಿದಾಗ ಕಾಣಿಸುವುದೇನು?

ಪಿಟೀಲು ಚೌಡಯ್ಯ ಅವರಂತಹ ದಿಗ್ಗಜ ಸಂಗೀತಗಾರರ ಕಲಾಪರಂಪರೆಯಿಂದ ಬಂದ ‘ಕಲಾವಿದ’ ಅಂಬರೀಶ್ ಕಟ್ಟಿಕೊಂಡದ್ದೇನು? ಗುರು- ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದ ಪುಟ್ಟ ಜಲೀಲನ ಪಾತ್ರಕ್ಕಾಗಿ ಬಣ್ಣ ಹಚ್ಚಿದ ‘ಅಂಬರೀಶ್’ ವೃತ್ತಿ ಬದುಕಿನ ಗ್ರಾಫ್ ಹಠಾತ್ ಆಗಿ ಮೇಲೇರಲಿಲ್ಲ. ಯಶಸ್ಸಿನ ಮುಖ ನೋಡುವುದಕ್ಕಾಗಿ ತುಂಬಾ ಹಾದಿ ಸವೆಸಬೇಕಾಯಿತು. ಪುಟ್ಟಣ್ಣ ನಿರ್ದೇಶನದ ‘ಪಡುವಾರಳ್ಳಿ ಪಾಂಡವರು’ ಮತ್ತು ‘ರಂಗನಾಯಕಿ’ ಚಿತ್ರಗಳಲ್ಲಿ ಅಂಬರೀಶ್‍ಗೆ ದೊರೆತ ಪಾತ್ರಗಳು ಅದನ್ನು ನಿಭಾಯಿಸಿದ ರೀತಿಯನ್ನು ಗಮನಿಸಬೇಕು. ಆದರೆ, ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ.

ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಅಂತ’ ನೀಡಿದ ಯಶಸ್ಸು ಕೇವಲ ಕಲಾವಿದ ಅಂಬರೀಶ್‍ಗೆ ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗದ ಚಲನೆಯ ಸ್ವರೂಪ ಮತ್ತೊಂದು ದಿಕ್ಕಿನೆಡೆಗೆ ಚಲಿಸಲು ಕಾರಣವಾಯಿತು. ಪುರಾಣ-ಇತಿಹಾಸ ಕಥೆಗಳನ್ನು ಆಧರಿಸಿ ನಿರ್ಮಾಣವಾಗಲು ಆರಂಭಿಸಿದ ಕನ್ನಡ ಚಿತ್ರಗಳು (ಭಾರತೀಯ ಕೂಡ) ನಂತರ ಸಾಹಿತ್ಯ ಕೃತಿ ಆಧಾರಿತ ಸಾಮಾಜಿಕ ನೆಲೆಗಟ್ಟಿನತ್ತ ಹೊರಳಿದ್ದವು. ಕೌಟುಂಬಿಕ-ಭಾವನಾತ್ಮಕ ಚಿತ್ರಗಳು ಮುಂಚೂಣಿಯಲ್ಲಿದ್ದ ದಿನಗಳಲ್ಲಿ `ರಾಜಕೀಯ’ ಕಥೆಯ ಕೇಂದ್ರವಾಗಿದ್ದು ವಿಶೇಷವಾಗಿತ್ತು. ‘ಅಂಬಿ’ಯ ನಟನಾ ಬದುಕು ಅರಳಲು ಈ ರಾಜಕೀಯ ‘ಸರಣಿ’ ಚಿತ್ರಗಳು ಕಾರಣವಾದವು. ‘ಚಕ್ರವ್ಯೂಹ’, `ಗಜೇಂದ್ರ’ ಸೇರಿದಂತೆ ಆ ಕಾಲದಲ್ಲಿ ಬಂದ ಚಿತ್ರಗಳು ಅಂಬರೀಶ್‍ರಿಗೆ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪಾತ್ರ ನಿರ್ವಹಿಸುವುದಕ್ಕೆ ಅನುವು ಮಾಡಿಕೊಟ್ಟವು.

ರಾಜಕೀಯ ಅಂಬರೀಶರ ಕೈ ಹಿಡಿದಿತ್ತು. ಯಶಸ್ಸು ಬಂದ ಮೇಲೆ ಸಹಜವಾಗಿಯೇ ಬದುಕು ಬದಲಾಗುತ್ತದೆ- ಆಯ್ಕೆಗಳು ಕೂಡ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡದ್ದು ಕೂಡ ರಾಜಕೀಯ ಚಿತ್ರಗಳ ಕಥಾನಕದ ಮುಂದುವರೆದ ಭಾಗವೇ ಆಗಿತ್ತು. ‘ಅಂಬಿ-ಅಂಬಿ’ (ಅಂಬರೀಶ್-ಅಂಬಿಕಾ) ಜೋಡಿ ಚಿತ್ರರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹೆಜ್ಜೆಜಾಡಿಗಿಂತ ಭಿನ್ನವಾದ ‘ಒಲವಿನ ಉಡುಗೊರೆ, ಮಣ್ಣಿನದೋಣಿ, ಸಪ್ತಪದಿ, ಹೃದಯ ಹಾಡಿತು’ ಮೊದಲಾದ ಚಿತ್ರಗಳು ಅಂಬರೀಶ್ ‘ಕಲಾವಿದ’ ಎಂದು ಒಪ್ಪಿಸುವಲ್ಲಿ ಯಶಸ್ವಿಯಾದವು. ರಾಜ್ ಮತ್ತು ವಿಷ್ಣುವರ್ಧನ ಜೊತೆಗೆ ನಟಿಸುವ ಮಲ್ಟಿಸ್ಟಾರ್ ಚಿತ್ರಗಳಲ್ಲಿ ನಟಿಸುವ ವೇಳೆಗಾಗಲೇ ಅಂಬರೀಶ್ ಅವರ ಇಮೇಜ್ ಬೆಳೆದುಬಿಟ್ಟಿತ್ತು.

ತೆರೆಯ ಮೇಲೆ ಯಶಸ್ಸಿನ ಕೊಂಡಿಯಾಗಿದ್ದ ರಾಜಕೀಯ, ಬದುಕಿಗೂ ತಿರುವು ನೀಡುವುದಕ್ಕೆ ಕಾಯುತ್ತಿತ್ತು. ಅದಕ್ಕೆ ಅಂಬರೀಶ್ ಸಿದ್ಧವಾಗಿದ್ದರಾ? ಹೌದು ಸಿದ್ಧವಾಗಿದ್ದರು. ಆದರೆ, ಆ ಸಿದ್ಧತೆಯ ಸ್ವರೂಪ ಎಂತಹುದಾಗಿತ್ತು? ಬಣ್ಣದ ಬದುಕು ತಂದಿತ್ತ ಜನಪ್ರಿಯತೆ ಮತ್ತು ಅವರ ಸ್ವಂತ ಆಯ್ಕೆಯಾಗಿರದಿದ್ದರೂ, ಹುಟ್ಟಿದ ಜಾತಿ ಮತ್ತು ಪ್ರದೇಶದ ಜನರ ಅಪಾರ ಪ್ರಮಾಣದ ಬೆಂಬಲ ನೀಡಿದರು. ಹಾಗೆ ದೊರೆತ ಬೆಂಬಲವನ್ನು ಅಂಬರೀಶ್ ಹೇಗೆ ಬಳಸಿದರು- ಬಳಸಿಕೊಂಡರು? ಎಂದು ನೋಡಿದರೆ ‘ರಾಜಕಾರಣಿ’ಯಾಗಿ ಅವರ ಸಾಧನೆ ಅರಿವಿಗೆ ಬರುತ್ತದೆ.

ಸರಿಸುಮಾರು ಎರಡೂವರೆ ದಶಕಗಳ ರಾಜಕೀಯ ಜೀವನದಲ್ಲಿ ಅಂಬರೀಶ್ ಅವರಿಗೆ ದೊರೆತ ಅವಕಾಶಗಳು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹವು. ಅವರಷ್ಟು ಸುದೈವಿ ರಾಜಕಾರಣಿ ಮತ್ತೊಬ್ಬರು ಇರಲಾರರು. ಅವರ ರಾಜಕಾರಣ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಷ್ಟ್ರ ರಾಜಕಾರಣದಲ್ಲಿಯೂ ಅವರಿಗೆ `ಸೇವೆ’ ಸಲ್ಲಿಸುವ `ಅವಕಾಶ’ವನ್ನು ಮಂಡ್ಯದ ಜನ ಒದಗಿಸಿದ್ದರು. ಅದಕ್ಕೆ ಮಂಡ್ಯದ ಬ್ರ್ಯಾಂಡ್ ಗೆ ಸಾಂಸ್ಕೃತಿಕ ಮನ್ನಣೆ ದೊರಕಿಸಿಕೊಟ್ಟದ್ದೂ ಒಂದು ಕಾರಣವಾಗಿತ್ತು. ಜನ ತೋರಿದ ಪ್ರೀತಿ- ವಿಶ್ವಾಸವನ್ನು ಅಂಬರೀಶ್ ಅವರು ಉಳಿಸಿಕೊಂಡರಾ? ಚಿತ್ರನಟನಾಗಿ ಅಂಬರೀಶ್‍ರ ವೃತ್ತಿ ಬದುಕು ಏರುಮುಖಿಯಾಗಿತ್ತು. ಮಾರುಕಟ್ಟೆಯ ಸೋಲು-ಗೆಲುವಿನ ಲೆಕ್ಕಾಚಾರಗಳಲ್ಲಿ ಹಿನ್ನಡೆಗಳಿದ್ದರೂ ಅದು ನೇರವಾಗಿ ಅಂಬರೀಶ್ ಅವರ ನಟನಾ ಬದುಕಿನ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಇರಲಿಲ್ಲ. ಆದರೆ, ರಾಜಕೀಯ ಕ್ಷೇತ್ರ ಹಾಗಲ್ಲ. ಇಲ್ಲಿನ ನಿರೀಕ್ಷೆಗಳೇ ಬೇರೆ. ಅಂಬರೀಶ್ ಅವರಿಗೆ ‘ಸೋಲು’ ದಯಪಾಲಿಸುವ ಮೂಲಕ ಮಂಡ್ಯದ ಜನ ಯಾವ ಸಂದೇಶವನ್ನು ನೀಡಿದ್ದರು? ಆ ಸಂದೇಶವನ್ನು ಅಂಬರೀಶ್ ಓದಿಕೊಂಡ ರೀತಿ ಯಾವ ರೀತಿಯದಾಗಿತ್ತು? ಇವು ಕೇವಲ ಪ್ರಶ್ನೆಗಳಲ್ಲ. ಈ ಪ್ರಶ್ನೆಗಳ ಒಳಗೇ ಉತ್ತರಗಳೂ ಅಡಗಿವೆ.

ಅಂಬರೀಶ್ ಅವರು ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯಂತಹ ಪ್ರಮುಖ ಮತ್ತು ಜನಪ್ರಿಯ ಇಲಾಖೆಯ ಸಚಿವರಾಗಿದ್ದರು. ಬಹುಶಃ ವ್ಯಕ್ತಿಯೊಬ್ಬನ ಬದುಕಿನಲ್ಲಿ ಹೆಜ್ಜೆಗುರುತು ದಾಖಲಿಸುವುದಕ್ಕೆ ಅದಕ್ಕಿಂತ ದೊಡ್ಡ ಅವಕಾಶ ದೊರೆಯಲಾರದು. ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜೀನಾಮೆ ಬಿಸಾಕಿ ಬಂದ ಅಂಬರೀಶ್ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾದರು. ಅಧಿಕಾರ ತೊರೆಯುವ ಮೂಲಕ ಒತ್ತಡ ಹೇರುವ ತಂತ್ರ ಅಷ್ಟೊತ್ತಿಗಾಗಲೇ ತನ್ನ ಮಹತ್ವ ಕಳೆದುಕೊಂಡಿತ್ತು. ಅಧಿಕಾರದಲ್ಲಿದ್ದೂ ಅದನ್ನು ಚಲಾಯಿಸುತ್ತ ಸಂಬಂಧಿಸಿದವರ ಮೇಲೆ ಒತ್ತಡ ಹಾಕಬೇಕಿತ್ತು. ಬದಲಾದ ಕಾಲ ಮತ್ತು ಸ್ವರೂಪವನ್ನು ಅಂಬರೀಶ್ ಸರಿಯಾಗಿ ಓದಲಿಲ್ಲ. ಅಥವಾ ಓದಲು ಅವರು ಸಿದ್ಧರಿರಲಿಲ್ಲ. ಜನ ಪಾಠ ಕಲಿಸಿದರು. ಆದರೆ, ಕಲಿಯಲು ಅಂಬರೀಶ್ ಸಿದ್ಧರಿರಲಿಲ್ಲ. ಕಲಿಯದಿದ್ದರೂ ಮಂಡ್ಯದ ಜನ ಅಂಬರೀಶ್ ಅವರ ಕೈ ಬಿಡಲಿಲ್ಲ. ಕ್ಷಮಿಸಿ ಮತ್ತೊಮ್ಮೆ ವಿಧಾನಸಭೆಗೆ ಆರಿಸಿ ಕಳಿಸಿದರು.

ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾದ ಅಂಬರೀಶ್ ಕಾರ್ಯವೈಖರಿ ಬದಲಾಗಲಿಲ್ಲ. ಅವರ ಜೀವನ ವಿಧಾನವೇ ಅವರಿಗೆ ‘ವೈರಿ’ಯಾಗಿತ್ತು. ಜನ ಕಲಿಸಿದ ಪಾಠದಿಂದ ಕಲಿಯದಿದ್ದರೇನಾಯಿತು? ನಾ ಕಲಿಸುವೆ ಎಂದು ಆರೋಗ್ಯವೂ ಅವರಿಗೆ ಪಾಠ ಕಲಿಸಲು ಮುಂದಾಯಿತು. ಅದರಿಂದಲೂ ಅವರು ಕಲಿಯಲಿಲ್ಲ. ಅಂಬರೀಶ್ ಅವರು ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಅನನ್ಯವಾದುದಾಗಿತ್ತು. ಆದರೆ, ಅಂಬರೀಶ್ ತಾವು ಕುಳಿತ ಕುರ್ಚಿಯ ಮಹತ್ವ ಅರಿಯಲಿಲ್ಲ. ಜನ ನೀಡಿದ `ಆಶೀರ್ವಾದ’ಕ್ಕೆ ಪ್ರತಿಯಾಗಿ ಜನರಿಗೆ ನೀಡಬೇಕಾದ `ನೀತಿ ರೂಪಿಸುವ’ ಮತ್ತು ಸಾಮಾನ್ಯರ ಬದುಕು ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ರಾಜಕೀಯವನ್ನು ಕೂಡ ಅವರು ನಟನೆಯ ಭಾಗವಾಗಿಸಿ ಕೊಂಡರು. ಸಚಿವ ಸಂಪುಟದಿಂದ `ಹೊರ ದಬ್ಬಿಸಿ ಕೊಳ್ಳುವುದಕ್ಕೆ’ ರಾಜಕೀಯ ಕಾರಣಗಳಿಗಿಂತ ಹೆಚ್ಚಾಗಿ ನಿಷ್ಕ್ರಿಯತೆಯೇ ಕಾರಣವಾಗಿತ್ತು.

ಅಂಬರೀಶ್ ಅವರು ಹತ್ತಿರದಿಂದ ಬಲ್ಲವರೂ ಸೇರಿದಂತೆ ಎಲ್ಲರಿಗೂ ಬೇಕಾದವರಾಗಿದ್ದರು. ವ್ಯಕ್ತಿಗತ ಪ್ರೀತಿ-ಕಾಳಜಿ ಅಂಬರೀಶ್ ಅವರ ವ್ಯಕ್ತಿತ್ವದ ಭಾಗವೇ ಆಗಿತ್ತು. ‘ಕರ್ಣ’ ಎಂದು ಕರುನಾಡಿನ ಜನ ಅವರನ್ನು ಕರೆದದ್ದು ಅತಿಶಯೋಕ್ತಿಯೇನಲ್ಲ. ವ್ಯಕ್ತಿಗತ ನೆಲೆಯಲ್ಲಿ ನೆರವು ನೀಡಲು- ಸಹಾಯ ಹಸ್ತ ಚಾಚಲು ಸದಾ ಸನ್ನದ್ಧರಾಗಿರುತ್ತಿದ್ದ ಅಂಬರೀಶ್ ಅವರ ಹೃದಯ ವೈಶಾಲ್ಯವು ಕೇವಲ ಅಷ್ಟಕ್ಕೆ ಮಾತ್ರ ಸೀಮಿತವಾಗಿತ್ತು.

ರಾಜಕುಮಾರ್ ನಿಧನದ ನಂತರ ಖಾಲಿಯಾದ ಕನ್ನಡ ಚಿತ್ರರಂಗದ ‘ನಾಯಕ’ನ ಸ್ಥಾನ ತುಂಬಲು ವಿಷ್ಣುವರ್ಧನ ಸಿದ್ಧರಾಗಿರಲಿಲ್ಲ- ಅಂತಹ ಮನಸ್ಥಿತಿಯನ್ನೂ ಅವರು ಕಳೆದುಕೊಂಡಿದ್ದರು. ಅದನ್ನು ತುಂಬಿದವರು ಅಂಬರೀಶ್ ಎಂಬುದರಲ್ಲಿ ಎರಡು ಮಾತಿಲ್ಲ. ಬಿಕ್ಕಟ್ಟು ಸಂಭವಿಸಿದಾಗ ಚಿತ್ರರಂಗದ ಜನ ಅಂಬರೀಶ್ ಕಡೆಗೆ ಮುಖ ಮಾಡುತ್ತಿದ್ದರು. ನಟರ ಬದುಕಿನ ವೈಯಕ್ತಿಕ ಸಮಸ್ಯೆಗಳನ್ನು ಬಗೆ ಹರಿಸುವ, ಬುದ್ಧಿ ಹೇಳುವ ಹಿರಿಯಣ್ಣನ ತರಹ ಅಂಬರೀಶ್ ಇದ್ದರು. ಕೊನೆಯ ದಿನಗಳಲ್ಲಿ ಬಣ್ಣ ಹಚ್ಚಿ ‘ಅಂಬಿ ನಿನ್ಗೆ ವಯಸ್ಸಾಯ್ತು ಕಣೊ’ ಎಂದದ್ದು ರಾಜಕೀಯ-ಸಾರ್ವಜನಿಕ ಬದುಕಿಗೆ ಅವರೇ ನೀಡಿದ ವ್ಯಾಖ್ಯಾನ ಇರಬಹುದೇ?

ನಟನಾಗಿ ಜನಮನವನ್ನು ಅಂಬರೀಶ್ ಗೆದ್ದಿದ್ದರು. ಆದರೆ ರಾಜಕೀಯದಲ್ಲಿಯೂ ಹಾಗೆ ಗೆಲುವು ಅವರದಾಗಬೇಕಿತ್ತು ಎಂದು ನಿರೀಕ್ಷಿಸುವುದು ತಪ್ಪಲ್ಲ. ನಟ ಮತ್ತು ಕಲಾವಿದ ಜನರನ್ನು ಮನಸ್ಸನ್ನ ತಣಿಸುವ ಕೆಲಸ ಮಾಡುತ್ತಾನೆ. ಅದು ಕಡಿಮೆಯದೇನೂ ಅಲ್ಲ. ಆದರೆ, ಜನಪ್ರತಿನಿಧಿಯಾದವನಿಗೆ ಜನರ ನಿತ್ಯದ ಬದುಕನ್ನೇ ಬದಲಾಯಿಸುವ ಅವಕಾಶ ಇರುತ್ತದೆ. ನಟನಾಗಿ ಮುದ ನೀಡುವ `ಅಂಬಿ’ ವ್ಯಕ್ತಿಯಾಗಿಯೂ ಪ್ರೀತಿ ಪಾತ್ರರಾಗುತ್ತಾರೆ. ಆದರೆ, ಇದೇ ಮಾತನ್ನು ರಾಜಕಾರಣಿ ಅಂಬಿಗೆ ಅನ್ವಯಿಸಲು ಆಗುವುದಿಲ್ಲ ಎಂಬುದೇ ವಿಷಾದದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...