Homeಅಂಕಣಗಳುಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

ಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

- Advertisement -
- Advertisement -

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜಕೀಯ ಎತ್ತ ಸಾಗಿದೆ ಎಂಬುದನ್ನು ಕುರಿತು ಮತದಾರ ಯೋಚಿಸುವ ಕಾಲ ಈಗ ಸನ್ನಿಹಿತವಾಗಿದೆ.

ಭಾರತದ ರಾಜಕೀಯ ಹೊಲಸಾಗಿದೆ. ದ್ವೇಷ ಭಾವನೆಯಿಂದ ಕೂಡಿದ ಕೇಂದ್ರ ಸರ್ಕಾರ ಬರ್ಬರ ಕಾನೂನುಗಳನ್ನು ರಚಿಸುತ್ತಿದೆ. ಇದ್ದ ಕಾನೂನುಗಳನ್ನು ತಿರುಚಿ ಬರೆಯುತ್ತಿದೆ; ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ವಿಚಾರವಾದಿಗಳ ಮೇಲೆ ಕಟ್ಟಲೆ ಹೇರಿ, ಸರ್ಕಾರದ ಧೋರಣೆಯನ್ನು ಪ್ರಶ್ನಿಸುವವರನ್ನು ನಕ್ಸಲರೆಂದು ಪರಿಗಣಿಸಿ ಗೂಂಡಾ ಕಾಯ್ದೆ ಹೊರಿಸುವ ಸಂಭವವಿದೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕ್ರಿಮಿನಲ್ ಕೇಸ್‍ಗಳನ್ನು ಹೊತ್ತವರು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಪಕ್ಷಗಳನ್ನು ಕಬ್ಜಾ ಮಾಡುವವರು, ಪಕ್ಷವನ್ನು ನಾಶ ಮಾಡುವ ಪ್ರವೃತ್ತಿಯವರು ಇದ್ದಾರೆ. ಅಶಿಸ್ತು ತಾರಕಕ್ಕೇರಿದೆ. ಸಮಯಸಾಧಕರು, ಮೀರ್‍ಸಾದಿಕ್‍ಗಳು ರಾಜಕೀಯ ದಾಳ ಉರುಳಿಸಿ, ತಮ್ಮ ಪಕ್ಷದ ಪತನಕ್ಕೆ ಸಂಚು ಮಾಡಲು ಮುಂದಾಗಿದ್ದಾರೆ. ಜಾತಿಯ ಆಧಾರದ ಮೇಲೆ ಶಾಸಕರನ್ನು ಆರಿಸಿಕೊಂಡ ದೇವೇಗೌಡರು, ಸಿದ್ದರಾಮಯ್ಯ ಮುಂತಾದವರಿಗೆ ಚಳ್ಳೇ ಹಣ್ಣು ತಿನ್ನಿಸಿದ ದುಷ್ಟ ಶಾಸಕರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ರಾಜಕೀಯ ಪಕ್ಷದಲ್ಲಿದ್ದುಕೊಂಡು ಶಿಸ್ತಿನಿಂದ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ಅನೇಕ ಯೋಗ್ಯ ನಿಷ್ಠಾವಂತ ಕಾರ್ಯಕರ್ತರು ಎಲ್ಲ ಪಕ್ಷಗಳಲ್ಲಿ ಇದ್ದರೂ, ಅವರನ್ನು ಕಡೆಗಣಿಸಿ ಅವರು ತಮ್ಮ ಜಾತಿಯವರೆಂಬ ಕಾರಣಕ್ಕಾಗಿ, ಲಕ್ಷಾಂತರ ರೂಗಳನ್ನು ಪಕ್ಷಕ್ಕೋ, ಕಿಸೆಗೆ ಬಿಡುವುದಕ್ಕೋ ಕೊಟ್ಟವರಿಗೆ ಮಾತ್ರ ಸೀಟು ಸಿಗುತ್ತಿದೆ. ಈ ಜನ ಸಂಸ್ಥೆಗೆ ಏಕೆ ವಿಧೇಯರಾಗಿರಬೇಕು? ಇಂತಹವರಿಗೆ ಸೀಟನ್ನು ಮಾರುವುದು ಪರಿಪಾಠವಾಗಿರುವಾಗ ಅವರು ಸಂಸ್ಥೆಯವರ ಘನತೆ ಗೌರವಗಳ ಬಗೆಗೆ ಯಾಕೆ ಯೋಚಿಸುತ್ತಾರೆ? ನಾವು ಬಂದಿರುವುದೇ ದೋಚುವುದಕ್ಕೆ, ಸ್ವಾರ್ಥ ಸಾಧನೆಗೆ ಎನ್ನುವ ಜನರ ದೃಷ್ಟಿಯಲ್ಲಿ ರಾಜಕೀಯ ಪಕ್ಷ ಒಂದು ಮಾರಾಟ ಸಂಸ್ಥೆ, ತಮ್ಮ ಅಭ್ಯುದಯಕ್ಕಾಗಿ ನೆರವಾಗುವ ಒಂದು ಚಿಮ್ಮು ಹಲಗೆ!

ದೇವೇಗೌಡರಂತಹ ಒಬ್ಬ ನಾಯಕರಿಗೆ ತಮ್ಮ ಪಕ್ಷ ಪ್ರೈವೇಟ್ ಪಾರ್ಟನರ್‍ಷಿಪ್ಪಿನ ಒಂದು ಉದ್ಯಮ. ಶಾಸನಸಭೆಗೆ 30-40 ಜನ ತಮ್ಮ ಪಾರ್ಟಿಯಿಂದ ಶಾಸಕರಾಗಿ ಗೆದ್ದು ಬಂದರೆ ಸಾಕು. ಈ ಅಲ್ಪ ಸಂಖ್ಯೆಯ ಶಾಸಕರನ್ನು ಇಟ್ಟುಕೊಂಡು ಉಳಿದ ಪಾರ್ಟಿಗಳ ಜೊತೆಗೆ ವ್ಯವಹಾರ ಕುದುರಿಸುತ್ತಾರೆ. ಅಧಿಕಾರ ಪಡೆದುಕೊಳ್ಳುತ್ತಾರೆ. ತಮ್ಮ ಮಗನಿಗೋ, ಸೊಸೆಗೋ, ಮೊಮ್ಮಗನಿಗೋ ಪಟ್ಟಕಟ್ಟಲು ಅದನ್ನು ಬಳಸಿಕೊಳ್ಳುತ್ತಾರೆ.

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತು. ತಮ್ಮ ಮಗನ ಅಧಿಕಾರ ಹೋಯಿತು. ದೇವೇಗೌಡರಿಂದ ವ್ಯಾಪಾರ ಆರಂಭವಾಯಿತು. ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಬೋರಂಟಿ ಬಿಟ್ಟರು. ಯಡಿಯೂರಪ್ಪನವರು ನಿಮ್ಮ ಸಹಕಾರ ಬೇಕಾಗಿಲ್ಲ. ನಮಗೆ ಬಹುಮತ ಸಿಕ್ಕರೆ ನಿಮ್ಮ ಹಂಗೇನು? ಎಂದರು. ಗೌಡರು ತಮ್ಮ ವರಸೆ ತೋರಿಸಿಯೇ ಬಿಟ್ಟರು. ‘ನಾನು ನಿಮಗೆ ನಿಮ್ಮ ಒಳ್ಳೆಯ ಕೆಲಸಕ್ಕೆ ಮಾತ್ರ ಬೆಂಬಲ ಕೊಡುತ್ತೇನೆ’ ಎಂದು ನಾನು ಹೇಳಿದ್ದು ಎಂದು ತಮ್ಮ ಹಿಂದಿನ ನಿಲುವಿಗೆ ಹೊಸ ವ್ಯಾಖ್ಯಾನ ಮಾಡಿದರು.

ಇನ್ನು ಅಧಿಕಾರಾರೂಢ ಭಾಜಪ ಸರ್ಕಾರದ ಬಗ್ಗೆ ಹೇಳುವುದಾದರೆ, ಅದು ಸರ್ವಾಧಿಕಾರಿ ಮನೋಭಾವದ ಸಂಸ್ಥೆ. Hidden Agenda ಇರುವ ಸಂಸ್ಥೆ. ಹಿಂದುತ್ವ ಪ್ರತಿಪಾದಕರ ಸಂಸ್ಥೆ. ಬಿಜೆಪಿಯೆಂಬುದು ತನ್ನ ಟೆಂಟಕಲ್ಸನ್ನು ಬೆಳೆಸಿಕೊಂಡು ಆಕ್ಟೋಪಸ್‍ನಂತೆ ಇಡೀ ಭಾರತವನ್ನು ತನ್ನದಾಗಿಸಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ ಸಂಸ್ಥೆ. ಒದೀತೀನಿ, ಅದಕ್ಕೆ ತಯಾರಾಗಿ ಎಂದು ಅವರ ಆಡಳಿತ ನೀತಿಯನ್ನು ಒಪ್ಪದವರಿಗೆ ಗೃಹಮಂತ್ರಿ ಅಮಿತ್ ಶಾ ಅಬ್ಬರಿಸಿ ಹೇಳಿದ್ದಾರೆ.

ಚಾಣಕ್ಯನಂತೆ ತನಗಾಗದವರನ್ನು ಮುಗಿಸುವುದು ಹೇಗೆ? ಅವರನ್ನು ಮಣಿಸುವುದು ಹೇಗೆ? ಎಂದೆಲ್ಲ ಯೋಜನೆ ಮಾಡುವುದರಲ್ಲಿ ಯೋಜನೆ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ ಮೋದಿ, ಅಮಿತ್ ಶಾ.

ಕರ್ನಾಟಕದಲ್ಲಿ ಪ್ರಥಮ ಪ್ರಯತ್ನದಲ್ಲೇ ದಂತಭಗ್ನರಾದ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಮಾಡಿದರು. ಆಡಳಿತ ಪಕ್ಷದ ಶಾಸಕರನ್ನು ಖರೀದಿಸುವ, ಪಕ್ಷಾಂತರಿಗೊಳಿಸುವ ತನ್ನ ಮಾತೃಸಂಸ್ಥೆಯನ್ನು ತೊರೆದು ಹೊರಬರುವ ಎಲ್ಲಾ ತಂತ್ರಗಳನ್ನೂ ಮಾಡಿ, ಅದರಲ್ಲಿ ಜಯಶಾಲಿಗಳೂ ಆದರು. ಭಾಜಪದ ಈ ಹುನ್ನಾರವನ್ನು ಶಾಸಕ ಕೃಷ್ಣ ಭೈರೇಗೌಡರು, ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ಮೋದಿ, ಶಾ ಅವರು ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಬಿಜೆಪಿಯನ್ನು ಸ್ಥಾಪಿಸಲು ಮಾಡಿರುವ ತಂತ್ರವೂ ಇಂತಹುದೆ. ದೇಶದ ದಕ್ಷಿಣ ಭಾಗದ ರಾಜ್ಯಗಳಾದ ಆಂಧ್ರ, ರಾಯಲಸೀಮಾ, ಕೇರಳ, ಕರ್ನಾಟಕ, ತಮಿಳುನಾಡುಗಳನ್ನು ಸಂಪೂರ್ಣವಾಗಿ ಬಿಜೆಪಿಮಯ ಮಾಡುವುದು ಹೇಗೆ ಎಂದು ಸಂಚು ನಡೆಸುತ್ತಿದ್ದಾರೆ. ತಮಿಳುನಾಡು ಇವರ ತಂತ್ರಕ್ಕೆ ಸೊಪ್ಪು ಹಾಕಿಲ್ಲ. ಎಲ್ಲ ರಾಜಕೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಭಾರತದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಕನಸನ್ನು ಕಾಣುತ್ತಿದ್ದಾರೆಯೇ ಮೋದಿ?

ಈ ಪ್ರಯತ್ನವನ್ನು ತಡೆಗಟ್ಟಿ ಪ್ರಜಾಪ್ರಭುತ್ವವನ್ನು ರೂಢಿಸಿಕೊಳ್ಳುವುದು ಇಂದಿನ ಆದ್ಯ ಅಗತ್ಯತೆ.

ಆದರೆ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇತರ ರಾಜಕೀಯ ಪಕ್ಷಗಳು ಸೊರಗಿರುವಂತೆ ಕಾಣುತ್ತದೆ. ನಾಯಕತ್ವದ ಅಭಾವ ಎದ್ದು ಕಾಣುತ್ತದೆ. ಜನ ಜಡರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆಯೆಂಬ ಅರಿವು ಜನತೆಗೆ ಬಂದಿಲ್ಲ. ಚುನಾವಣೆಯನ್ನು ಒಂದು ಪ್ರಹಸನ ಎಂದುಕೊಂಡು ಬಿಟ್ಟಿದ್ದಾರೆ ಜನ. ಹಣ ಹೆಂಡಕ್ಕೆ ಮತ ಮಾರಾಟವಾಗುತ್ತದೆ. ಪ್ರಜೆಗಳಿಗೆ ದೇಶದ ಭವಿಷ್ಯವನ್ನು ರೂಪಿಸಬೇಕಾದವರು ನಾವು ಎಂಬ ಅರಿವಿಲ್ಲವಾಗಿದೆ. ಇದರ ಪೂರ್ಣ ಲಾಭವನ್ನು ಮೋದಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸಲು ವಿಚಾರವಂತರು, ಪ್ರಜ್ಞಾವಂತರು, ಹೊಸ ಮನ್ವಂತರವನ್ನು ಕಾಣಬೇಕು ಎಂದು ಆಶಿಸುವ ಜನ ಒಂದಾಗಿ ಸಂಘಟಿತರಾಗಬೇಕು. ದೇಶದ ತುಂಬಾ ರಾಜಕೀಯ ಸಮ್ಮೇಳನಗಳನ್ನು ನಡೆಸಿ ಇಂದಿನ ರಾಜಕೀಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ನಮಗೆ ಎಂತಹ ರಾಷ್ಟ್ರ ಬೇಕು, ಎಂತಹ ವ್ಯವಸ್ಥೆ ಬೇಕು ಎಂಬುದನ್ನು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಜನ ಜಾಗೃತಿ ಮೂಡಿಸುವ ಮೂಲಕ ಮನವರಿಕೆ ಮಾಡಿಸಬೇಕು. ಈ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಟ್ಟು ಪ್ರಜೆ ನಿಷ್ಕ್ರಿಯನಾದರೆ ಭಾರತ ಹಿಟ್ಲರ್‍ನ ಜರ್ಮನಿಯಾಗುವ ಸಂಭವವಿದೆ.

Eternal Vigilance is The Price of Liberty

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...