Homeಮುಖಪುಟತೀಸ್ತಾ ಎಂಬ ಬತ್ತಲಾರದ ನದಿ

ತೀಸ್ತಾ ಎಂಬ ಬತ್ತಲಾರದ ನದಿ

- Advertisement -
- Advertisement -

ಈಚೆಗೆ ಶೆಮೆಜ್ ವಿ.ಎಂ. ಎಂಬ ಕೇರಳ ಮೂಲದ ಫೇಸ್‌ಬುಕ್ ಗೆಳೆಯರೊಬ್ಬರು, ತೀಸ್ತಾ ಅವರ ಬಗ್ಗೆ ಬರೆದ ಟಿಪ್ಪಣಿಯನ್ನು ಓದಿದೆ. ಅದೊಂದು ಕತೆಯ ರೂಪದಲ್ಲಿದೆ. ಅವರಿಗೆ ಈ ಕತೆಯನ್ನು ಅವರ ಗೆಳೆಯರೊಬ್ಬರು ಹೇಳಿದ್ದು. ಈ ಕತೆ ಪ್ರಾಚೀನ ತಮಿಳಿನ ಮಣಿಮೇಖಲೈ ಎಂಬ ಮಹಾಕಾವ್ಯದ ನಾಯಕಿ ಮಣಿಮೇಖಲೈಗೆ ಸಂಬಂಧಿಸಿದ್ದು. ಮಣಿಮೇಖಲೈ, ತಮಿಳುನಾಡಿನ ಪ್ರಸಿದ್ಧ ವಣಿಕ ಕುಲದ ಕೋವಲನ್ ಮತ್ತು ಮಾಧವಿಯವರ ಮಗಳು. ಪ್ರಭುತ್ವದಿಂದ ಬೇಟೆಗೆ ಒಳಗಾದ ಬಲಿಪಶುಗಳ ಪರವಾಗಿ ನಿಲ್ಲುವ ನ್ಯಾಯಪ್ರಜ್ಞೆಯಿದ್ದ ಹುಡುಗಿ. ಇವಳ ಬಗ್ಗೆ ಆ ಸೀಮೆಯ ದೊರೆಯ ಮಗ ಉದಯಕುಮಾರನಿಗೆ ಸುದ್ದಿ ಹೋಗುತ್ತದೆ. ಆತ ದೊಡ್ಡ ವ್ಯಾಪಾರಿಗಳ ಹಿತರಕ್ಷಕ. ಮಣಿಮೇಖಲೈಗೆ ಎಲ್ಲ ಧರ್ಮಗಳ ಬಗ್ಗೆ, ಅವನ್ನು ಅನುಸರಿಸುವ ಜನರ ಬಗ್ಗೆ ಗೌರವ. ಆದರೆ ಅವಳನ್ನು ದ್ವೇಷಿಸುವ ರಾಜಕುಮಾರ ಉದಯಕುಮಾರನಿಗೆ ತನ್ನ ಜತೆ ಬದುಕುತ್ತಿರುವ ಇತರ ಧರ್ಮೀಯರ ಬಗ್ಗೆ ಅಸಹನೆ. ಬಲಿಪಶುಗಳನ್ನು ಸದಾ ರಕ್ಷಿಸುವ ಮಣಿಮೇಖಲೈಗೆ ಶಿಕ್ಷಿಸಲು ಉದಯಕುಮಾರನು ಜನರನ್ನು ಬಿಟ್ಟು ಆಕೆಯನ್ನು ಹುಡುಕಿಸುತ್ತಾನೆ. ಮಣಿಮೇಖಲೈ ತನ್ನನ್ನು ಹುಡುಕುತ್ತಿರುವ ಉದಯಕುಮಾರನಿಂದ ತಪ್ಪಿಸಿಕೊಳ್ಳಲು ತನ್ನ ತಾಯ್ನಾಡಿನ ನ್ಯಾಯದೇವತೆಗಳಲ್ಲಿ ಬೇಡುತ್ತಾಳೆ. ಆ ನ್ಯಾಯದೇವತೆಗಳು ಆಕೆಗೆ ಭಯಮೀರಲು ಕೆಲವು ಮಂತ್ರಗಳನ್ನು ಹೇಳಿಕೊಡುವರು. ಒಬ್ಬ ದೇವತೆ ಆಕೆಗೆ ಶತ್ರುಗಳು ಬಂದಾಗ ತಪ್ಪಿಸಿಕೊಳ್ಳಲು ಕಾಣದಂತೆ ಅದೃಶ್ಯವಾಗುವ ಮಂತ್ರ ಹೇಳಿಕೊಡುವಳು. ಅವಳು ಇನ್ನೊಂದು ವೇಷದಲ್ಲಿ ಮುಖದೋರುವಂತೆ ಮಾಡುವುದು; ಸದಾ ಅನ್ನದಿಂದ ತುಂಬಿರುವ ಒಂದು ಮಾಂತ್ರಿಕ ಬಟ್ಟಲನ್ನು ಕೊಡುವುದು ಹೀಗೆ. ಮಣಿಮೇಖಲೈ ಇರುವ ದ್ವೀಪಕ್ಕೆ ಉದಯಕುಮಾರನೂ ಅವನ ಮಂತ್ರಿ ದೊರೆಗಳು ಆಕೆಯನ್ನು ಬಂಧಿಸಲು ಮುಟ್ಟಿದಾಗ, ಮಣಿಮೇಖಲೈ ಅಂತರ್ಧಾನವಾಗುತ್ತಾಳೆ. ಈ ಕಥೆಯನ್ನು ಹೇಳುವ ಶೆಮೆಜ್ ಅವರ ಗೆಳೆಯ, ’ಇದೊಂದು ಕೃತಜ್ಞತೆಯಿಲ್ಲದ ಜಗತ್ತು. ಯಾರಿಗಾದರೂ ಯಾರು ಯಾಕೆ ನೆರವಾಗಬೇಕು. ಈ ಕೃತಜ್ಞತೆಯಿಲ್ಲದ ಜನರು ಇಂತಹ ನೆರವಿಗೆ ಅರ್ಹರೇ?’ ಎಂದು ಕತೆಯನ್ನು ಮುಗಿಸುತ್ತಾರೆ.

ಈ ಕತೆಯನ್ನು ಓದಿದ ಮೇಲೆ, ಹೌದಲ್ಲ, ಯಾವ ಜನರಿಗಾಗಿ ತೀಸ್ತಾ ನೆರವಾಗುತ್ತಿದ್ದಾರೊ, ಆ ಜನರಿಗೆ ತೀಸ್ತಾ ಬಗ್ಗೆ ಗೊತ್ತಿದೆಯೇ? ಗೊತ್ತಿದ್ದರೆ ಅವರು ಯಾವ ಬಗೆಯಲ್ಲಿ ಆಕೆಗೆ ಸ್ಪಂದಿಸುತ್ತಿದ್ದಾರೆ? ಗುಜರಾತಿನ ದಂಗೆಯ ಬಲಿಪಶುಗಳು ತೀಸ್ತಾ ಅವರಿಗೆ ಹೇಗೆ ಸ್ಪಂದಿಸುತ್ತಿದ್ದಾರೆಯೊ ನಮಗೆ ತಿಳಿದಿಲ್ಲ. ಆದರೆ ಜನರಿಗಾಗಿ ಹೋರಾಟ ಮಾಡುವ ಚಳವಳಿಗಾರರ ಬಗ್ಗೆ ಸಮಾಜದಲ್ಲಿ-ಕೊನೆಯ ಪಕ್ಷ ಅವರ ಹೋರಾಟದ ಫಲಾನುಭವಿಗಳಲ್ಲಿ- ಕೃತಜ್ಞತೆಯಿಲ್ಲದ ನಿರಾಸಕ್ತಿ ನಿರ್ಲಿಪ್ತತೆ ಬಂದಿದೆಯೇ ಎಂಬ ಪ್ರಶ್ನೆ ಕಾಡಿತು. ಇದು ಇತ್ತೀಚಿಗೆ ಅನಾಥರಂತೆ ಸತ್ತುಹೋದ ಪಟ್ಟಾಭಿರಾಮ ಸೋಮಯಾಜಿ ಅವರ ಬಗ್ಗೆ ಕೂಡ ಅನಿಸಿತು. ಪಟ್ಟಾಭಿಯವರು ಕಾಲೇಜಿಗೆ ರಜೆ ಹಾಕಿ, ಸ್ವಂತ ಖರ್ಚು ಇಟ್ಟುಕೊಂಡು ಪ್ರಯಾಣ ಮಾಡಿಬಂದು ಈ ನಾಡಿನ ಎಷ್ಟೊಂದು ಚಳುವಳಿಗಳಲ್ಲಿ ಭಾಗವಹಿಸಿದರು. ಅವರ ಸಾವಿಗೆ ನಾಡಿನ ಜನ, ಇದೂ ಒಂದು ಸಾವು ಎಂಬಂತೆ ನಿರ್ಲಿಪ್ತವಾಗಿ ಮಿಡಿದರೇನು? ನನಗೆ ಅನೇಕ ಸಲ ಮುಸ್ಲಿಮ್ ಸಮುದಾಯವು ತನ್ನ ನಾಯಕರನ್ನು ಶೋಧಿಸಿಕೊಳ್ಳಬೇಕಿದೆ ಎಂದು ಅನಿಸುತ್ತದೆ. ಅದು ಟಿಪ್ಪುಸುಲ್ತಾನ್‌ಗಿಂತ ಮುಖ್ಯವಾಗಿ ಮೊದಲು ಶಿಕ್ಷಕಿ ಫಾತಿಮಾಶೇಖರನ್ನು, ಅಲಿಘರ್ ವಿಶ್ವವಿದ್ಯಾಲಯ ಸ್ಥಾಪಿಸಿದ ಸರ್ ಸೈಯದ್ ಅವರನ್ನು ತನ್ನ ಸಾಂಸ್ಕೃತಿಕ ನಾಯಕರೆಂದು ಪರಿಭಾವಿಸಬೇಕು ಅನಿಸುತ್ತದೆ. ಮುಸ್ಲಿಮರಿಗಾಗಿ ಜೀವನಪೂರಾ ಹೋರಾಡಿದ ಗಾಂಧಿಯವರನ್ನು ಮುಸ್ಲಿಮ್ ಸಮುದಾಯವು ತನ್ನ ಹಿತರಕ್ಷಕ ಎಂದು ಭಾವಿಸಿದಂತಿಲ್ಲ. ಗುಜರಾತಿನ ಹತ್ಯಾಕಾಂಡಗಳ ವಿರುದ್ಧ ಪ್ರಭುತ್ವದ ವಿರುದ್ಧ ಹೋರಾಡಿ, ಜೈಲುಗಳಲ್ಲಿ ಕೊಳೆಯುತ್ತಿರುವ ಸಂಜೀವಭಟ್, ಕುಮಾರ್, ಉಮರ್ ಖಾಲಿದ್; ಕೋರ್ಟುಕಟ್ಟೆ ಸುತ್ತುತ್ತಿರುವ ತೀಸ್ತಾ; ಕೊಲೆಯಾದ ಗೌರಿ, ಪನ್ಸಾರೆ ಮೊದಲಾದವರು ಪ್ರಜ್ಞಾವಂತ ಮುಸ್ಲಿಮರಿಗೆ ಗೊತ್ತಿರುವ ಹೆಸರೇ ಹೊರತು, ಸಮುದಾಯಕ್ಕಲ್ಲ. ಇದು ಅಜ್ಞಾನದ ಫಲವೊ, ಸರಿಯಾದ ನಾಯಕರನ್ನು ಗುರುತಿಸಿಕೊಳ್ಳಲಾಗದ ರಾಜಕೀಯ ಪ್ರಜ್ಞೆಯ ಕೊರತೆಯೊ, ಕೃತಘ್ನತೆಯೊ? ದಲಿತ, ರೈತ, ಮುಸ್ಲಿಂ, ಮಹಿಳೆ, ಬುಡಕಟ್ಟು- ಹೀಗೆ ನಿರ್ದಿಷ್ಟ ಸಮುದಾಯಕ್ಕೆ ಜಾತ್ಯತೀತವಾಗಿ ಧರ್ಮಾತೀತವಾಗಿ ಕೇವಲ ನ್ಯಾಯಪ್ರಜ್ಞೆಯಿಂದ ಹೋರಾಡುವ ಚಳವಳಿಗಾರರಿಗೆ, ಆ ಸಮುದಾಯಗಳು ಮಾತ್ರ ನೈತಿಕ ಬೆಂಬಲ ಕೊಡಬೇಕು ಎಂಬುದು ಇಲ್ಲಿನ ಅರ್ಥವಲ್ಲ. ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ, ಸೋದರತೆಯಲ್ಲಿ ನಂಬಿಕೆಯಿಟ್ಟ ಎಲ್ಲರೂ ಬೆಂಬಲಿಸಬೇಕಾದ ಸಂಗತಿಯಿದು. ಚಂದ್ರಶೇಖರ್ ರಾವಣ್ ಅವರ ಮೇಲಿನ ಹಲ್ಲೆಯು ಕೇವಲ ದಲಿತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ದುಷ್ಟಪ್ರಭುತ್ವದ ವಿರುದ್ಧ ಬಲಿಪಶುವಾಗುವ ಜನರ ಪರವಾಗಿ ಚಿಂತಿಸುವ, ಕೆಲಸ ಮಾಡುವ ನಮಗೆಲ್ಲ ಸಂಬಂಧಿಸಿದ್ದು.

ಸಂಜೀವಭಟ್, ಉಮರ್ ಖಾಲಿದ್

ಈಚೆಗೆ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲವಾಡ್ ಅವರಿಗೆ ಗುಜರಾತ್ ಕೋರ್ಟು ಜಾಮೀನನ್ನು ರದ್ದುಗೊಳಿಸಿ ಕೂಡಲೇ ಶರಣಾಗಬೇಕೆಂದು ವಿಧಿಸಿತು. ಈ ನಡುವೆ ಸುಪ್ರೀಂಕೋರ್ಟು ಇದಕ್ಕೆ ಒಂದು ವಾರಕಾಲ ತಡೆನೀಡಿತು. ವಾರದ ಬಳಿಕ ಮತ್ತೇನಾಗುವುದೊ ತಿಳಿಯದು. ಆದರೆ ತೀಸ್ತಾ ಅವರ ಬಂಧನ-ಜಾಮೀನು-ಬಿಡುಗಡೆಗಳ ಈ ನಾಟಕೀಯ ಆವರ್ತನೆ ಒಂದು ಬಗೆಯಲ್ಲಿ ನಮಗೆ ಮಾಮೂಲಿ ಸುದ್ದಿಯಾಗುತ್ತಿದೆ. ರೈತರ ಆತ್ಮಹತ್ಯೆಯಂತೆ, ಮತೀಯವಾದಿಗಳಿಂದ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಕೊಡುವ ಕರೆಯಂತೆ, ಮಹಿಳಾ ಕ್ರೀಡಾಪಟುವಿಗೆ ಆಗುವ ಲೈಂಗಿಕ ಕಿರುಕುಳದಂತೆ, ಜಾತಿವಾದಿಗಳಿಂದ ದಲಿತರ ಮೇಲೆ ನಡೆವ ಹಲ್ಲೆಯಂತೆ. ಸಮಾಜದ ಹಿಂಸೆ ಮತ್ತು ಅದರ ವಿರುದ್ಧ ಹೋರಾಡುವವರಿಗೆ ಪ್ರಭುತ್ವ ಕೊಡುವ ಶಿಕ್ಷೆಗಳಿಗೆ ಸಮಾಜವು ತನ್ನ ಸಂವೇದನಾಶೀಲತೆ ಕಳೆದುಕೊಳ್ಳುವುದು, ಮಾಮೂಲಿ ಎಂದು ಭಾವಿಸುವುದು ಘೋರವಾದ ಸಂಗತಿ. ಇದು ಪರೋಕ್ಷವಾಗಿ ಪ್ರಭುತ್ವಕ್ಕೆ ತನ್ನ ಕ್ರೌರ್ಯವನ್ನು ಮುಂದುವರಿಸಲು ನಾಗರಿಕ ಸಮಾಜ ಕೊಡುವ ಸಮ್ಮತಿ ಕೂಡ. ಮಾರುಕಟ್ಟೆ ಸಂಸ್ಕೃತಿಯು ಲಾಭವನ್ನು ದೊಡ್ಡ ಮೌಲ್ಯವಾಗಿಸಿದೆ ಮತ್ತು ವ್ಯಕ್ತಿವಾದವನ್ನು ದೊಡ್ಡ ಸಂಗತಿಯಾಗಿಸಿದೆ. ಇದರ ಪರಿಣಾಮವೆಂದರೆ, ಮತ್ತೊಬ್ಬರ ನೋವಿಗೆ ಮಿಡಿವ ಗುಣವೇ ಕಡಿಮೆಯಾಗುತ್ತಿರುವುದು. ಇದು ಕೂಡ ಪ್ರಭುತ್ವದ ಕ್ರೌರ್ಯವನ್ನು ಒಂದು ಬಗೆಯಲ್ಲಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸಂಗತಿಯಾಗಿದೆ.

ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ರಕ್ಷಣೆಯನ್ನು ಜುಲೈ 19ರವರೆಗೆ ವಿಸ್ತರಿಸಿದ ಸುಪ್ರೀಂ

ಇದಕ್ಕೆ ಪ್ರತಿಯಾದ ಘಟನೆಗಳೂ ನಡೆಯುತ್ತಿವೆ. ಈಚೆಗೆ ಯಲಬುರ್ಗ ತಾಲೂಕಿನ ಹಿರೇವಂಕಲಕುಂಟಾ ಎಂಬ ಹಳ್ಳಿಯಲ್ಲಿ ಒಬ್ಬ ಶಿಕ್ಷಕನ ನಿವೃತ್ತಿಯಾದಾಗ ನಡೆದ ಕಾರ್ಯಕ್ರಮದಲ್ಲಿ ಐದು ಸಾವಿರ ಜನ ಸೇರಿದ್ದರು. ಅದು ಸಾಹಿತ್ಯ ಸಮ್ಮೇಳನದ ಹಾಗೆ ಜರುಗಿತು. 40 ವರ್ಷಗಳಿಂದ ಸದರಿ ಶಿಕ್ಷಕನಿಂದ ಕಲಿತ ಶಿಷ್ಯರು ಅವರ ಪೋಷಕರು ದೇಶದ ಎಲ್ಲ ಮೂಲೆಗಳಿಂದ ಬಂದಿದ್ದರು. ಅವರು ಶಿಕ್ಷಕನಿಗೆ ಊರಿಗೆ ಮರಳಿಹೋಗದಂತೆ ಅಲ್ಲೇ ಮನೆ ಕಟ್ಟಿಸಿಕೊಡುತ್ತಿದ್ದಾರಂತೆ. ಕೃತಜ್ಞತೆಯು ಒಂದು ಮೌಲ್ಯವಾಗಿ ಈ ಸಮಾಜದಿಂದ ಕಣ್ಮರೆಯಾಗಿಲ್ಲ. ಆದರೆ ಪ್ರಭುತ್ವದ ವಿರುದ್ಧ ಸಿಟ್ಟು, ಜನರ ಪರವಾಗಿ ಕೆಲಸ ಮಾಡುವವರ ಬಗೆಗಿನ ಕೃತಜ್ಞತೆಗಳು, ಹೊರಹೊಮ್ಮುವ ಸೂಕ್ತ ಕಾಲಕ್ಕಾಗಿ ಕಾಯುತ್ತವೆಯೇ? ಕೃತಜ್ಞತೆ ಸಲ್ಲಿಕೆಯು ಪ್ರಭುತ್ವದ ವಿರುದ್ಧದ ಪ್ರತಿರೋಧದ ಭಾಗವಾದಾಗ, ಉತ್ಕಟವಾಗಿ ಪ್ರಕಟವಾಗದೆ ಹೋಗುತ್ತದೆಯೇ? ಹೋರಾಟಗಾರರಿಗೆ ಅನ್ನದ ಬಟ್ಟಲನ್ನು, ಅದೃಶ್ಯ ಶಕ್ತಿಯನ್ನು ಜನರು ಕೊಡದೆ ಅವರು ಕೇವಲ ನಿರಾಶಾದಾಯಕ ಸನ್ನಿವೇಶದಲ್ಲಿ ಹೋರಾಡುತ್ತಿದ್ದಾರೆ ಎಂಬುದು ನಮ್ಮ ತಪ್ಪು ಗ್ರಹಿಕೆಯೇ? ವಿಚಾರ ಮಾಡಬೇಕು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...