Homeಮುಖಪುಟಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

- Advertisement -
- Advertisement -

ಮೈಕೆಲ್ ಜೆ ಸ್ಯಾಂಡಲ್ ಎಂಬ ಪೊಲಿಟಿಕಲ್ ಫಿಲಾಸಫ್‌ರ್, ಕ್ಯಾಲಿಪೋರ್ನಿಯಾದ ಜೈಲುಗಳಲ್ಲಿ ಅಪರಾಧಿಗಳು ಹಣ ಪಾವತಿಸಿದರೆ ಅವರಿಗೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ, ಮಿನ್ನೆಪೊಲಿಸ್ ಮತ್ತು ಇತರೆ ನಗರಗಳಲ್ಲಿ ಹೆಚ್ಚು ಟೋಲ್ ಪಾವತಿಸುವ ಸಿರಿವಂತರಿಗೆ ಟ್ರಾಫಿಕ್ ಕಡಿಮೆಯಿರುವ ಪ್ರತ್ಯೇಕ ರಸ್ತೆಯನ್ನು ಕಲ್ಪಿಸುವುದು, ಪಶ್ಚಿಮದ ದಂಪತಿಗಳು ತಮ್ಮ ಮಗುವನ್ನು ಹೆರಲು ಇಂಡಿಯಾದಂತಹ ದೇಶಗಳಲ್ಲಿ ಬಾಡಿಗೆ ತಾಯಂದಿರಿಗೆ ಎಡತಾಗುವುದು- ಇಂತಹ ಇನ್ನೂ ಹಲವು ಸಂಗತಿಗಳನ್ನು ತಮ್ಮ ‘What Money Can’t Buy’ ಪುಸ್ತಕದಲ್ಲಿ ಚರ್ಚಿಸುತ್ತಾರೆ. ಮಾರ್ಟಿನ್ ಸ್ಕಾಸೆಸೆ ನಿರ್ದೇಶನದ Wolf Of Wall Street ಸಿನಿಮಾದಲ್ಲಿ ನ್ಯೂಯಾರ್ಕ್ ನಗರದ ಸ್ಟಾಕ್ ಬ್ರೋಕರ್ ಒಬ್ಬ ಕೇವಲ ತನ್ನ ಮಾತನ್ನೆ ಬಂಡವಾಳ ಮಾಡಿಕೊಂಡು (ಮಾರ್ಕೆಟಿಂಗ್ ಸ್ಕಿಲ್) ವಂಚನೆ ಮತ್ತು ಭ್ರಷ್ಟ ಮಾರ್ಗದಿಂದ ಅಸಾಧ್ಯವಾದ ಸಂಪತ್ತನ್ನು ಗಳಿಸುತ್ತಾನೆ; ಹೇಸಿಗೆ ಹುಟ್ಟಿಸುವ ಅವನ ಐಷಾರಾಮಿ ಜೀವನಶೈಲಿಯನ್ನು ವ್ಯಂಗ್ಯ ಮಾಡುವುದು ಮಾತ್ರವಲ್ಲದೆ ವಾಕರಿಕೆ ಬರುವಷ್ಟು ತೀವ್ರ ಚಿತ್ರಣವನ್ನು ಸ್ಕಾಸೆಸಿ ಮೂಡಿಸುತ್ತಾರೆ.

**

ಮೇಲೆ ಉದಾಹರಿಸಿದ ಸಂಗತಿಗಳು ಬಂಡವಾಳಿಶಾಹಿ ವ್ಯವಸ್ಥೆಯ ಕೇವಲ ಸಣ್ಣಸಣ್ಣ ಮತ್ತು ಬಿಡಿ ಪರಿಣಾಮಗಳಷ್ಟೆ. ಇವುಗಳ ಹಿನ್ನೆಲೆಯಲ್ಲಿ ಅನುಕೂಲ ಮತ್ತು ಪ್ರತಿಕೂಲಗಳ ಎರಡರ ಪರವಾಗಿಯೂ ಚರ್ಚೆ ಮಾಡಬಹುದಾದ ಸಾಧ್ಯತೆ ಇದೆ. ಪ್ರಸ್ತುತ ಜಗತ್ತಿನ ಬಹಳ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಅದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅಪೋಶನ ತೆಗೆದುಕೊಳ್ಳುತ್ತಿರುವ ಸರ್ವಾಧಿಕಾರ ಮನಸ್ಥಿತಿಯ ಪಕ್ಷಗಳು ಮತ್ತು ಅದರ ನಾಯಕರು ಆಳುತ್ತಿದ್ದಾರೆ. ಇದಕ್ಕೆ ಬಂಡವಾಳಶಾಹಿಯ ಕೊಡುಗೆ ನಿಚ್ಚಳವಾಗಿದೆ.

ನಿರ್ದೇಶಕ ರುಬೆನ್ ಆಸ್ಟ್‌ಲಂಡ್ ತಮ್ಮ ’ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್’ ಸಿನಿಮಾದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಮತ್ತದರ ಅಸಹ್ಯಕರ ಪರಿಣಾಮಗಳನ್ನು, ಅದರ ಪ್ರಧಾನ ಫಲಾನುಭವಿಗಳ ದಾರ್ಷ್ಟ್ಯ, ಅಮಾನವೀಯತೆ, ಹುಚ್ಚಾಟಗಳ ಮೂಲಕವೇ ಚಿತ್ರಿಸುತ್ತಾರೆ; ಈ ಮುಖಾಂತರ ತಾತ್ವಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಬಿಡಿಬಿಡಿ ತುಣುಕುಗಳನ್ನು ಪೋಣಿಸಿ ಅತಿ ವಿಡಂಬನಾತ್ಮಕವಾಗಿ ನಿರೂಪಿಸುತ್ತಾರೆ.

ರುಬೆನ್ ಆಸ್ಟ್‌ಲಂಡ್

ಸಿನಿಮಾವನ್ನು ನಿರ್ದಿಷ್ಟವಾಗಿ ಮೂರು ಅಂಕಗಳಲ್ಲಿ ಕಟ್ಟಲಾಗಿದೆ. ಮೊದಲ ಅಂಕದಲ್ಲಿ, ಖಾಸಗಿ ಸಂಬಂಧಗಳಲ್ಲಿ ಹಣ ಹೇಗೆ ಪ್ರಧಾನವಾದ ಸಂಗತಿಯಾಗಿ ನುಸುಳಿ, ಸಂಬಂಧಗಳನ್ನು ಸಂಕೀರ್ಣಗೊಳಿಸಿ, ಅಪನಂಬಿಕೆ ಮತ್ತು ಅನೈತಿಕ ಅನುಸಂಧಾನದ ಅನಿವಾರ್ಯತೆಗೆ ದೂಡುತ್ತದೆ ಎಂಬ ವಿಡಂಬನಾತ್ಮಕ ಚಿತ್ರಣವಿದೆ. ಎರಡನೇ ಅಂಕದಲ್ಲಿ ಕ್ರೋನಿ ಕ್ಯಾಪಿಟಲಿಸ್ಟ್‌ಗಳು ಮತ್ತು ಅದರ ಫಲಾನುಭವಿಗಳಾದ ಜಗತ್ತಿನ ಅತಿ ಶ್ರೀಮಂತರು ವಿಹಾರಕ್ಕೆಂದು ಪ್ರಯಾಣಿಸುವ ನೌಕೆಯೊಂದರಲ್ಲಿ ಹಣದ ಮೂಲವಾಗಿ ಹುಟ್ಟುವ ಸಂಘರ್ಷವಿದೆ; ಅವರಲ್ಲಿರುವ ಅಮಾನವೀಯತೆ, ದಾರ್ಷ್ಟ್ಯ ಮತ್ತು ಹುಚ್ಚಾಟಗಳ ಚಿತ್ರಣದ ಜೊತೆ, ರಷ್ಯನ್ ಕ್ಯಾಪಿಟಲಿಸ್ಟ್ ಪ್ರಯಾಣಿಕ ಮತ್ತು ನೌಕೆಯ ಕ್ಯಾಪ್ಟನ್ (ಸೋಷಿಯಲಿಸ್ಟ್) ಇವರಿಬ್ಬರ ನಡುವಿನ ಸಂವಾದದ ಸಂಭಾಷಣೆಯ ನಿರೂಪಣೆ ಬಹಳ ಪ್ರಮುಖವಾದದ್ದು. ಮೂರನೇ ಅಂಕದಲ್ಲಿ ದಾಳಿಗೆ ಒಳಗಾದ ನೌಕೆಯಿಂದ ಬದುಕುಳಿದ ಕೆಲವರು ಅಜ್ಞಾತಸ್ಥಳಕ್ಕೆ ಬಂದು ಸೇರುತ್ತಾರೆ; ಯಾವುದೇ ವ್ಯವಸ್ಥೆಯ ಚೌಕಟ್ಟಿಗೆ ಒಳಪಡದ ಆ ಅಜ್ಞಾತ ಸ್ಥಳದಲ್ಲಿ ಬದುಕುಳಿಯಲು ಹೊಸ ವ್ಯವಸ್ಥೆ ಮತ್ತು ಅಧಿಕಾರ ರೂಪುಗೊಳ್ಳುವುದನ್ನು ಮತ್ತು ಅಧಿಕಾರ ಕೇಂದ್ರ ಹೇಗೆ ತನ್ನ ಸ್ವಹಿತಾಶಕ್ತಿಗೆ ಮಾತ್ರ ಶ್ರಮಿಸುತ್ತದೆ ಎಂಬುದನ್ನು ರುಬೆನ್ ಚಿತ್ರಿಸುತ್ತಾರೆ.

ಮೊದಲ ಅಂಕ: ಕಾರ್ಲ್ ಮತ್ತು ಯಾಯ ಇಬ್ಬರು ರೂಪದರ್ಶಿಗಳು ಮತ್ತು ಸಂಗಾತಿಗಳು. ಹೋಟೆಲ್‌ನಲ್ಲಿ ಊಟದ ಬಿಲ್ ಪಾವತಿಸುವ ವಿಚಾರಕ್ಕೆ ಇಬ್ಬರಿಗೂ ಜಗಳವಾಗುತ್ತದೆ. ಕಾರ್ಲ್, ಯಾಯಳನ್ನು ’ಬಿಲ್ ನೋಡಿಯೂ ಕಾಣದ ಹಾಗೆ ಸುಮ್ಮನಾಗುತ್ತೀಯ; ಕಳೆದ ಬಾರಿ ನಾನು ಊಟದ ಬಿಲ್ ನೀಡಿದಾಗ ಮುಂದಿನ ಬಾರಿ ನೀನು ಕೊಡುತ್ತೀಯಾ ಎಂದು ಹೇಳಿದ್ದೆ’ ಎಂದು ಅಸಮಧಾನಗೊಳ್ಳುವ ಮುಖಾಂತರ ಜಗಳ ಪ್ರಾರಂಭವಾಗುತ್ತದೆ. ಲಿಂಗ ಸಮಾನತೆಯನ್ನು ನಂಬುತ್ತೇನೆ ಎಂದು ಹೇಳುವ ಕಾರ್ಲ್‌ನ ಆಳದಲ್ಲಿರುವುದು ಪೇಟ್ರಿಯಾರ್ಕಿ, ಫೆಮಿನಿಸಂಅನ್ನು ಮೂದಲಿಸುವ ಭಾವನೆ; ನಾನು ನಿನಗಿಂತ ಹೆಚ್ಚು ದುಡಿಯುತ್ತೇನೆ ಎಂದು ಹೇಳುವ ಯಾಯ ಕೊನೆಗೆ ಕಾರ್ಲ್‌ನ ಪ್ರತಿಷ್ಠೆಯ ಸಂಧಾನ ಮಾಡಿಕೊಳ್ಳುತ್ತಾಳೆ. ಈ ಜಗಳದ ದೃಶ್ಯಗಳಲ್ಲಿ ಹಣ ಹೇಗೆ ಸಂಬಂಧಗಳನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಅನಗತ್ಯ ಹಾಗೂ ಅನಿವಾರ್ಯ ಸಂದರ್ಭಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ರುಬೆನ್ ಹಲವು ಲೇಯರ್‌ಗಳಲ್ಲಿ ಕಟ್ಟಿಕೊಡುತ್ತಾರೆ. ಕಾರ್ಲ್‌ನ ಲಿಂಗಸಮಾನತೆ ಬಗೆಗಿನ ಸರಳ ವ್ಯಾಖ್ಯಾನ, ಅದೇರೀತಿ ಯಾಯ ಕಾರ್ಲ್‌ನ ಅಸಂಗತ ಪ್ರತಿಷ್ಠೆಯನ್ನು ಒಪ್ಪುವುದು- ಇಂತಹ ಬಹುತೇಕ ಉದಾಹರಣೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣಸಿಗುವಂತವೇ.

ಇದನ್ನೂ ಓದಿ: ಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್’

ಯಾಯ ಮತ್ತು ಕಾರ್ಲ್ ಎರಡನೇ ಅಂಕದಲ್ಲಿ ಬರುವ ಐಷಾರಾಮಿ ನೌಕವಿಹಾರಕ್ಕೆ ಉಚಿತವಾಗಿ ಆಯ್ಕೆ ಆಗುತ್ತಾರೆ.

ಎರಡನೇ ಅಂಕ: ಬಹಳ ಸೂಚ್ಯವಾಗಿ ಖಾಸಗಿ ಸಂಬಂಧಗಳಲ್ಲಿ ಹಣ ನಿರ್ವಹಿಸುವ ಪಾತ್ರವನ್ನು ಮೊದಲ ಅಂಕದಲ್ಲಿ ನಿರೂಪಿಸುವ ನಿರ್ದೇಶಕ, ಎರಡನೇ ಅಂಕದಲ್ಲಿ ಅದನ್ನು ವಿಸ್ತಾರವಾಗಿ ಬೆಳೆಸುತ್ತಾರೆ; ಬಂಡವಾಳ ಮಾಲೀಕರ ದಾರ್ಷ್ಟ್ಯ, ಕುಚೇಷ್ಟೆ, ಅಮಾನವೀಯತೆಯ ಹುಚ್ಚಾಟಗಳು ಮತ್ತು ಅವರು ಸೃಷ್ಟಿಸಿದ ಹೇಸಿಗೆಯಲ್ಲಿ ಅವರೇ ಬಿದ್ದು ಹೊರಳಾಡುವ ರೂಪಕ ದೃಶ್ಯಗಳನ್ನು ಬಹಳ ಮಾರ್ಮಿಕವಾಗಿ ಅದೇ ಮಟ್ಟದ ವಿಡಂಬಣೆಯಲ್ಲಿ ಕಟ್ಟಿಕೊಡಲಾಗಿದೆ. ಜಗತ್ತಿನ ಅತಿದೊಡ್ಡ ಶ್ರೀಮಂತರು ವಿಹಾರ ಮಾಡುವ ಒಂದು ಐಷಾರಾಮಿ ನೌಕೆ. ಇಲ್ಲಿ ವಿಹಾರಕ್ಕೆ ಜಗತ್ತಿನ ನಾನಾ ಮೂಲೆಯಿಂದ ಬಂದಿರುವ ಶ್ರೀಮಂತರ ಸೌಖ್ಯಕ್ಕೆ ಯಾವ ಕೊರತೆಯೂ ಬರದ ಹಾಗೆ ನೋಡಿಕೊಳ್ಳುವುದು ಮತ್ತು ಆ ಮುಖಾಂತರ ತಮ್ಮ ಈ ಐಷಾರಾಮಿ ವಿಹಾರದ ವ್ಯವಹಾರವನ್ನು ಅಭಿವೃದ್ಧಿಪಡಿಸಿ ಹೆಚ್ಚು ಹಣ ಗಳಿಸುವುದು ವಿಹಾರದ ಏಜೆಂಟ್ ಪೌಲ್‌ಳ ಆದ್ಯತೆ; ಒಂದು ದೃಶ್ಯದಲ್ಲಿ ನೌಕೆಯ ಒಬ್ಬ ಸಿಬ್ಬಂದಿ ಸೆಖೆಯ ಕಾರಣಕ್ಕೆ ಅರೆ ಬೆತ್ತಲೆಯಾಗಿ ಕೆಲಸ ಮಾಡುವುದನ್ನು ಯಾಯ ನೋಡುತ್ತಾಳೆ ಮತ್ತು ಅವನ ಫಿಟ್ನೆಸ್‌ಗೆ ಆಕರ್ಷಿತಳಾಗುತ್ತಾಳೆ. ಇದನ್ನು ಸಹಿಸದ ಕಾರ್ಲ್ ’ನಿಮ್ಮ ಸಿಬ್ಬಂದಿ ಅರೆಬೆತ್ತಲಾಗಿ ಕೆಲಸ ಮಾಡುತ್ತಾರೆ’ ಎಂದು ವಿವಾರದ ಮುಖ್ಯಸ್ಥೆ ಪೌಲ್ ಬಳಿ ದೂರುತ್ತಾನೆ. ಮರುಕ್ಷಣದಲ್ಲೆ ಪೌಲ್ ಆ ಸಿಬ್ಬಂದಿಯನ್ನು ಕೆಲಸದಿಂದ ಉಚ್ಚಾಟಿಸುತ್ತಾಳೆ. ರಷ್ಯನ್ ಬ್ಯುಸಿನೆಸ್ ಮ್ಯಾನ್ ಡಿಮಿಟ್ರಿ ಹೆಂಡತಿ ವೆರಾ ಒಮ್ಮೆ ನೌಕಾ ಸಿಬ್ಬಂದಿಯನ್ನು ಸ್ವಿಮ್ ಮಾಡಲು ಅಹ್ವಾನಿಸುತ್ತಾಳೆ; ನಯವಾಗಿ ನಿರಾಕರಿಸುವ ಆ ಸಿಬ್ಬಂದಿಯನ್ನು ಪರಿಗಣಿಸದೆ ಇಡೀ ನೌಕಾ ಸಿಬ್ಬಂದಿ ಸ್ವಿಮ್ ಮಾಡಬೇಕು ಎಂದು ಹೇಳುತ್ತಾಳೆ. ಗ್ರಾಹಕರ (ಶ್ರೀಮಂತ) ಅಭಿಲಾಷೆ ಎಂಬ ಕಾರಣ ನೀಡಿ ಪೌಲ್ ಎಲ್ಲ ನೌಕರರು ಸ್ವಿಮ್ ಮಾಡಬೇಕು ಎಂದು ಆದೇಶಿಸುತ್ತಾಳೆ.

ನೌಕೆಯ ಕ್ಯಾಪ್ಟನ್ ಮತ್ತು ತನ್ನನ್ನು ಕ್ಯಾಪಿಟಲಿಸ್ಟ್ ಎಂದು ಕರೆದುಕೊಳ್ಳುವುದಷ್ಟೇ ಅಲ್ಲ ಸೋಷಿಯಲಿಸ್ಟ್‌ರನ್ನು ವ್ಯಂಗ್ಯ ಮಾಡುವ ರಷ್ಯಾದ ಶ್ರೀಮಂತ ಡಿಮಿಟ್ರಿ ಅವರ ಸಂಭಾಷಣೆಗಳು ಎರಡನೇ ಅಂಕದಲ್ಲಿ ಬಹಳ ಪ್ರಮುಖವಾದದ್ದು.

ಕ್ಯಾಪ್ಟನ್ ಮತ್ತು ಡಿಮಿಟ್ರಿ ತಮಾಷೆಯಾಗಿಯೇ ಮಾಡುವ ಸಂಭಾಷಣೆಯ ಕೆಲವು ತುಣುಕುಗಳು:

ಡಿಮಿಟ್ರಿ ರೋನಾಲ್ಡ್ ರೆಗನ್ ಮಾತನ್ನು ಉಲ್ಲೇಖಿಸುತ್ತಾ ಕಮ್ಯುನಿಸ್ಟ್‌ಗಳ ಬಗ್ಗೆ ಕೆಟ್ಟ ಜೋಕ್ ಮಾಡಿದಾಗ..

ಕ್ಯಾಪ್ಟನ್: ಮೂರ್ಖನ ಜೊತೆ ಯಾವುದೇ ಕಾರಣಕ್ಕೂ ವಾದಕ್ಕೆ ಇಳಿಯವಾರದು, ಅವನು ತನ್ನ ಯೋಗ್ಯತೆಗಿಂತ ನಿನ್ನನ್ನು ಕೆಳಗೆ ಇಳಿಸುತ್ತಾನೆ ಮತ್ತು ಅವನ ಅನುಭವದಿಂದ ನಿನ್ನನ್ನು ಸೋಲಿಸುತ್ತಾನೆ. (ಮಾರ್ಕ್ ಟ್ವೇನ್).

ಡಿಮಿಟ್ರಿ: ಸಮಾಜವಾದ ಸಾಧ್ಯವಾಗುವುದು ಸ್ವರ್ಗದಲ್ಲಿ ಮಾತ್ರ, ಯಾಕೆಂದರೆ ಅದರ ಅಗತ್ಯ ಅವರಿಗಿರುವುದಿಲ್ಲ. ಆದರೆ ನರಕದಲ್ಲಿ ಈಗಾಗಲೆ ಸಮಾಜವಾದ ಹೊಂದಿರುತ್ತಾರೆ. (ರೋನಾಲ್ಡ್ ರೆಗನ್).

ಕ್ಯಾಪ್ಟನ್: ಬೆಳವಣಿಗೆ ಅನ್ನೋದು ಬೆಳವಣಿಗೆಗೆ ಮಾತ್ರವಷ್ಟೆ, ಇದು ಕ್ಯಾನ್ಸರ್ ಸೆಲ್‌ನ ತಾತ್ವಿಕತೆ. (Growth for the sake of Growth is the Ideology of cancer cell) (ಎಡ್ವರ್ಡ್ ಅಬಿ).

ಡಿಮಿಟ್ರಿ: ಸಮಾಜವಾದದ ಸಮಸ್ಯೆ ಎಂದರೆ ನೀವು ಅಂತಿಮವಾಗಿ ಇತರ ಜನರ ಹಣದಿಂದ ಹೊರಗುಳಿಯುತ್ತೀರಿ. (ಮಾರ್ಗರೆಟ್ ಥ್ಯಾಚರ್).

ಕ್ಯಾಪ್ಟನ್: ನಾವು ಗಲ್ಲಿಗೇರಿಸುವ ಕೊನೆಯ ಬಂಡವಾಳಶಾಹಿ, ಯಾರು ನಮಗೆ ಕುಣಿಕೆಯನ್ನು ಮಾರಿರುತ್ತಾನೊ ಅವನೇ ಆಗಿರುತ್ತಾನೆ. (ಕಾರ್ಲ್ ಮಾರ್ಕ್ಸ್).

ಮುಂದುವರಿದಂತೆ, ಡಿಮಿಟ್ರಿ ಪದೇಪದೇ ಕಮ್ಯುನಿಸ್ಟ್ ಎಂದು ಕರೆಯುತಿದ್ದದ್ದನ್ನು ತಡೆದು ಕ್ಯಾಪ್ಟನ್ ’ನಾನು ಕಮ್ಯುನಿಸ್ಟ್ ಅಲ್ಲ ಮಾರ್ಕ್ಸಿಸ್ಟ್’ ಎಂದು ಹೇಳುತ್ತಾನೆ.

ಮೂರನೇ ಅಂಕ: ಸ್ಥಳೀಯ ದಂಗೆಕೋರರಿಂದ ದಾಳಿಗೆ ಒಳಗಾಗುವ ಈ ಐಷಾರಾಮಿ ನೌಕೆಯಲ್ಲಿ, ಕೆಲವೇ ಕೆಲವರು ಲೈಫ್ ಜಾಕೆಟ್ ಮುಖಾಂತರ ಬದುಕುಳಿದು ಅಜ್ಞಾತಸ್ಥಳ ಒಂದಕ್ಕೆ ಬಂದು ಸೇರುತ್ತಾರೆ. ಬದುಕುಳಿಯುವವರಲ್ಲಿ ಕಾರ್ಲ್, ಯಾಯ, ಪೌಲ್, ಡಿಮಿಟ್ರಿ, ಇನ್ನು ನಾಲ್ಕು ಜನರ ಜೊತೆ ನೌಕೆಯ ಶೌಚಾಲಯದ ಸ್ವಚ್ಛತೆಯನ್ನು ನೋಡಿಕೊಳ್ಳುತ್ತಿದ್ದ ಅಬಿಗೈಲ್ ಕೂಡ ಒಬ್ಬಳು. ಯಾವ ವ್ಯವಸ್ಥೆ ಮತ್ತು ಸೌಕರ್ಯಗಳು ಇಲ್ಲದ ಆ ಅಜ್ಞಾತಸ್ಥಳದಲ್ಲಿ ಬದುಕುಳಿಯುವ ಜ್ಞಾನ ಅಲ್ಲಿ ಯಾರಿಗೂ ಇಲ್ಲ. ಅದಿರುವುದು ಐಷಾರಾಮಿ ನೌಕೆಯಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತಿದ್ದ ಅಬಿಗೈಲ್‌ಗೆ ಮಾತ್ರ. ಇಲ್ಲೂ ಗ್ರಾಹಕರ ಸೌಕರ್ಯಕ್ಕೆ ಮುಂದಾಗುವ ಮತ್ತು ಅಧಿಕಾರವನ್ನು ಚಲಾಯಿಸುವ ಪೌಲ್‌ಳ ವರ್ತನೆಯನ್ನು ಅಬಿಗೈಲ್ ನಿರಾಕರಿಸಿ, ಇಲ್ಲಿ ಎಲ್ಲರೂ ಅವಳಿಗೆ ಅವಲಂಬಿತರಾಗಿರುವುದರಿಂದ, ತಾನೇ ಇಲ್ಲಿ ಕ್ಯಾಪ್ಟನ್ ಎಂದು ಘೋಷಿಸಿಕೊಳ್ಳುತ್ತಾಳೆ. ನೌಕೆಯಲ್ಲಿದ್ದ ಶ್ರೇಣಿ ಇಲ್ಲಿ ಸಂಪೂರ್ಣ ಉಲ್ಟಾ ಆಗುತ್ತದೆ. ಲೈಫ್ ಬೋಟ್‌ನಲ್ಲಿದ್ದ ಆಹಾರ ಕೂಡ ಅಬಿಗೈಲ್ ಕಸ್ಟಡಿಗೆ ಬರುತ್ತದೆ.

ಅಜ್ಞಾತಸ್ಥಳದಲ್ಲಿ ಬದುಕುಳಿಯಲು ಹೊಸ ವ್ಯವಸ್ಥೆ ಮತ್ತು ಅಧಿಕಾರ ರೂಪುಗೊಳ್ಳುವುದು ಮತ್ತು ಅಧಿಕಾರ ಕೇಂದ್ರ ಹೇಗೆ ತನ್ನ ಸ್ವಹಿತಾಶಕ್ತಿಗೆ ಮಾತ್ರ ಶ್ರಮಿಸುತ್ತದೆ ಎಂದು ರುಬೆನ್ ಕ್ಲೈಮ್ಯಾಕ್ಸ್‌ನಲ್ಲಿ ಚಿತ್ರಿಸುತ್ತಾರೆ.

ಬಂಡವಾಳಶಾಹಿ ವ್ಯವಸ್ಥೆಯ ಅಡ್ಡ ಮತ್ತು ಅಸಹ್ಯಕರ ಪರಿಣಾಮಗಳ ಬಗ್ಗೆ ಚರ್ಚೆಗೆ ಆಹ್ವಾನಿಸುವ ’ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್’ ಒಂದು ಅಪರೂಪದ ಚಿತ್ರ.

ಯದುನಂದನ್ ಕೀಲಾರ
ಜಾಗತಿಕವಾಗಿ ಹಲವು ಭಾಷೆಗಳ-ಪ್ರದೇಶಗಳ ಸಿನೆಮಾಗಳ ಬಗ್ಗೆ ಅಪಾರ ಕುತೂಹಲ. ಸಿನೆಮಾ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...