Homeಅಂಕಣಗಳುಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

ಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

- Advertisement -
- Advertisement -

ಕೂದಲೆಳೆ ಅಂತರದಲ್ಲಿ ಘನಘೋರ ಅಪಾಯ ತಪ್ಪಿತು ಎನ್ನುವಂತೆ ಸಿದ್ದರಾಮಯ್ಯ ವಿಕೃತ ಭಟ್ಟನ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ತಪ್ಪಿಸಿಕೊಂಡು ಬುದ್ಧಿಜೀವಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರಲ್ಲಾ. ಅದಕ್ಕೆ ಹೇಳುವುದು ಜನರ ನಡುವೆ ಇರುವ ನಾಯಕ ತಪ್ಪು ಮಾಡಲಾರ ಎಂದು. ಇದಕ್ಕೊಂದು ಐತಿಹಾಸಿಕ ಉದಾಹರಣೆ ಬಸವಣ್ಣ ಅವರು ನಡೆಸಿದ ಕ್ರಾಂತಿಕಾರಿ ಚಳವಳಿ; ಈ ಶರಣ ಕ್ರಾಂತಿಯ ಬಗ್ಗೆ ಆಕ್ರೋಶಗೊಂಡ ಪುರೋಹಿತರು ಗಲಭೆ ನಡೆಸುತ್ತಾರೆ. ಅಲ್ಲೊಂದು ಕೊಲೆಯಾಗುತ್ತದೆ, ದೂರು ಬಿಜ್ಜಳನ ಬಳಿಗೆ ಹೋಗುತ್ತದೆ. ವಿಚಾರಣೆ ನಡೆಯುತ್ತದೆ. ಬಿಜ್ಜಳ ಕೊಲೆಯ ವಿಷಯದಲ್ಲಿ ಸಂಶಯಗೊಂಡು ಈ ಕೊಲೆ ಮಾಡಿದವರಾರು ಎಂದು ತನ್ನ ಆಸ್ಥಾನದಲ್ಲಿ ಪ್ರಶ್ನಿಸುತ್ತಾನೆ. ಅದಕ್ಕೆ ಬಸವಣ್ಣ ಪುರೋಹಿತಶಾಹಿಗಳು ಎನ್ನುತ್ತಾನೆ. ಆಗ ಬಿಜ್ಜಳ ಅದು ಹೇಗೆ ಹೇಳುತ್ತೀರಿ ಎಂದಾಗ, ಅದಕ್ಕೆ ಬಸವಣ್ಣ, ನಾನು ಜನಗಳ ನಡುವೆ ಇದ್ದೇನೆ ಎನ್ನುತ್ತಾನೆ. ಬಿಜ್ಜಳ ಮರುಮಾತನಾಡುವುದಿಲ್ಲ. ಈ ಐತಿಹಾಸಿಕ ಘಟನೆಯ ಸತ್ಯವನ್ನು ನಮ್ಮ ರಾಜಕಾರಣಿಗಳು ಪಾಲಿಸಿದ್ದಾದರೆ ವಿಕೃತ ಭಟ್ಟನಂತರವರ ಬಲೆಗೆ ಬೀಳಲಾರರು. ಅಕಸ್ಮಾತ್ ಬಿದ್ದರೆ ಸರ್ವನಾಶ ಗ್ಯಾರಂಟಿಯಂತಲ್ಲಾ, ಥೂತ್ತೇರಿ.

******

ಕಾದಂಬರಿ ಕಾರ್ಖಾನೆಯಾದ ಆರೆಸ್ಸೆಸ್ ಲೇಖಕ ಎಸ್.ಎಲ್ ಭೈರಪ್ಪನವರು ಯುವ ಮಾಣಿಗಳಿಗೊಂದು ಅದ್ಭುತವಾದಂತಹ ಕರೆ ಕೊಟ್ಟಿದ್ದಾರಲ್ಲಾ. ಅದೇನೆಂದರೆ ವಿದ್ಯಾವಂತ ಯುವ ಜನ ಹಳ್ಳಿಹಳ್ಳಿಗಳಿಗೆ ಹೋಗಿ ಮೋದಿ ಮಾಡಿದ ಒಳ್ಳೆ ಕೆಲಸಗಳನ್ನ ಅಲ್ಲಿನ ಗ್ರಾಮವಾಸಿಗಳಿಗೆ ಮನವರಿಕೆ ಮಾಡಿ ಎಂದು. ಎಂದಿನಂತೆ ವಿದ್ಯಾವಂತರು ಹಳ್ಳಿಗೆ ಹೋಗಿ ಹೇಳುವ ಮೋದಿ ಸಾಧನೆ ಪಟ್ಟಿ ಮಾಡಲಾಗಿ ಅವು ಇಂತಿವೆಯಲ್ಲಾ.

  • ಒಂದನೆಯದಾಗಿ ಹಿಂದುಮುಂದು ನೋಡದೆ ನೋಟು ಬ್ಯಾನು ಮಾಡಿ ದೇಶದ ಉದ್ದಗಲಕ್ಕೂ ಅಲ್ಲೋಲಕಲ್ಲೋಲವಾಗಿ ನೂರಾರು ಜನ ಸತ್ತು, ಸಾವಿರಾರು ಸಣ್ಣ ಉದ್ಯಮಗಳು ಕಣ್ಮರೆಯಾದದ್ದು.
  • ಎರಡನೆಯದಾಗಿ ಜಿಎಸ್‌ಟಿ ಎಂಬ ಮನೆಹಾಳ ತೆರಿಗೆ ವಸೂಲಿಯಿಂದಲೂ ಸಣ್ಣಪುಟ್ಟ ಉದ್ಯಮ ಬಾಗಿಲು ಹಾಕಿ ಬಡವರು ತಿನ್ನುವ ಕಡ್ಲೆಪುರಿ ಮೇಲೂ ಜಿಎಸ್‌ಟಿ ಬಂದಿದ್ದು.
  • ಸಿಎಎ ಕಾನೂನು ತರಲು ಹೊರಟು ಇಡೀ ಭಾರತದ ಮುಸ್ಲಿಮರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವಂತೆ ಮಾಡಿದ್ದು.
  • ಕೃಷಿಕಾಯ್ದೆ ತಂದು ದೆಹಲಿ ಗಡಿಯಲ್ಲಿ ಹೋರಾಟನಿರತ 750 ಜನ ರೈತರು ಸಾಯುವಂತೆ ಮಾಡಿದ್ದು.
  • ಸಾವಿರಾರು ಕೋಟಿ ಒಪ್ಪಂದದ ರಫೇಲ್ ಹಗರಣ ಮುಚ್ಚಿಹಾಕಿ, ತ್ವರಿತವಾಗಿ ಮಾಡಿದ ಒಪ್ಪಂದ ಎಂದು ಬಿಂಬಿಸಿದ್ದು.
  • ಭಾರತದ ಸುಮಾರು ಹನ್ನೆರಡು ಉದ್ಯಮಗಳನ್ನು ಮಾರಿದ್ದೂ ಅಲ್ಲದೆ, ವಿಶೇಷ ಘಟಕವಾಗಿದ್ದ ರೈಲ್ವೆ ಇಲಾಖೆಯನ್ನ ಮುಗಿಸಲು ಪ್ರಯತ್ನಿಸುತ್ತಿರುವುದು; ಅವುಗಳ ಬಣ್ಣ ಬದಲಿಸಿ ಸೀಟಿನ ಅಳತೆ ಕಡಿಮೆ ಮಾಡಿ ಪ್ರಯಾಣಿಕರನ್ನ ಹಿಂಸಿಸುತ್ತಿರುವುದು.
  • ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಗೆ ದಾಳಿಯಿಟ್ಟು ಒಂದು ಡಜನ್ ರೋಡ್ ಶೋ ಮಾಡಿ ಸೋತ ಸಿಟ್ಟಿಗೆ ಕರ್ನಾಟಕದ ಪಾಲಿನ ಅಕ್ಕಿ ನಿಲ್ಲಿಸಿದ್ದಲ್ಲದೆ ಇತಿಹಾಸದಲ್ಲಿ ದಾಖಲಾಗುವಂತೆ ವಿರೋಧಪಕ್ಷದ ನಾಯಕರನ್ನೆ ನೇಮಿಸದಿದ್ದುದು.
  • ನಮ್ಮದೇ ದೇಶದ ಭುಜದಂತಿರುವ ಮಣಿಪುರ ಎರಡು ತಿಂಗಳಿಂದ ಉರಿಯುತ್ತಿದ್ದರೂ ಆ ಕಡೆ ತಿರುಗಿಯೂ ನೋಡದೆ ಅಮೆರಿಕದಲ್ಲಿ ಯೋಗ ಮಾಡುತ್ತ ಕುಳಿತದ್ದು.

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ಕಡೆಗೂ ಮೋದಿ ಬಾಯಿ ಬಿಟ್ಟಿದ್ದು ಯಾವಾಗೆಂದರೆ ನಿಸ್ಸಹಾಯಕ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ ಅವರನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ ವಿಡಿಯೋ ತುಣುಕೊಂದು ತಿಂಗಳುಗಳ ನಂತರ ವೈರಲ್ ಆದಾಗ! ಇಂತಹ ಮೋದಿಯ ಸಾಧನೆಗಳನ್ನ ಹಳ್ಳಿಹಳ್ಳಿಗೆ ಹೋಗಿ ಹೇಳಿ ಎಂದು ಕರೆಕೊಡುತ್ತಿರುವ ಭೈರಪ್ಪರಿಗೆ ವಯೋಸಹಜ ಮರೆವೇನೂ ಇಲ್ಲ, ಆದರೆ ದಶಕಗಳಿಂದ ಸಂಘ ಪರಿವಾರದಿಂದ ತರಬೇತು ಪಡೆದಿರುವ ಮಿದುಳು ಹಾಗೆ ಕೆಲಸ ಮಾಡುತ್ತಿದೆಯಂತಲ್ಲಾ, ಥೂತ್ತೇರಿ.

*****

ಈಚೆಗೆ ಚಂದ್ರಯಾನ ಉಡಾವಣೆಯಾಗಿದೆ. ಇಸ್ರೊ ಅಧ್ಯಕ್ಷ ಸೋಮನಾಥ್ ಸಾರಥ್ಯದಲ್ಲಿ ಎಂಟು ಜನ ವಿಜ್ಞಾನಿಗಳೆಂಬುವರು ತಿರುಪತಿಯಲ್ಲಿ ನಿಂತು ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ತಿಮ್ಮಪ್ಪ ಇಡೀ ಕರ್ನಾಟಕದ ಸಕಲಿಷ್ಟು ಜಾತಿಗಳ ದೇವರಾದ್ದರಿಂದ ಜನರಿಗೆಲ್ಲಾ ಈ ಚಂದ್ರಯಾನ ಉಡಾವಣೆಯಿಂದ ಒಳ್ಳೆಯದಾಗುತ್ತದಂತೆ. ಇವರ ಇಂಗಿತವನ್ನ ಆಡಿಕೊಳ್ಳುವುದಾದರೆ ಚಂದ್ರನ ಮೇಲೆ ಈ ಯಂತ್ರ ಕಾಲೂರಿದ ಕ್ಷಣದಿಂದಲೇ ಭಾರತದಲ್ಲಿ ಬಿಜೆಪಿಗಳ ಹಾವಳಿಯಿಂದ ಕ್ಷೆಭೆಗೊಂಡಿರುವ ಮನಸ್ಸುಗಳು ಶಾಂತಗೊಳ್ಳಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ರೈತರು ಯಾವ ಸಮಸ್ಯೆಗಳು ಇಲ್ಲದೆ ಸಂತೃಪ್ತ ಜೀವನ ನಡೆಸುತ್ತಾರೆ. ಇತ್ಯಾದಿ ಸಮಸ್ಯೆಗಳಿಗೆಲ್ಲಾ ಸಂಜೀವಿನಿಯಾಗಿ ಚಂದ್ರನ ನೆಲೆಯಿಂದಲೇ ಛೂಮಂತ್ರ ಕಾಳಿ ಮಾಡುವ ಈ ಯಂತ್ರ ಪುರೋಹಿತಶಾಹಿಗಳಿಗೆ ಹೆಮ್ಮೆಯ ಸಾಧನೆ. ಪುರಾಣ ಸದೃಶ ಕಥೆ ಹೆಣೆಯುವುದರಲ್ಲಿ ನಿಸ್ಸೀಮರಾದ ಇವರು ಟಿ.ವಿಯೊಳಕ್ಕೂ ಬಂದು ಕೂತಿರುವುದಲ್ಲದೆ, ವಿಜ್ಞಾನಕ್ಕೂ ತಿರುಪತಿ ಭಕ್ತಿಗೂ ಏನು ಸಂಬಂಧ ಎಂದವರ ಮೇಲೆ ಎಗರಿ ಬೀಳತೊಡಗಿವೆ. ಇದಂತಿರಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಪುರೋಹಿತರೊಬ್ಬರು, ತಿರುಪತಿ ದರ್ಶನ ಪಡೆದ ವಿಜ್ಞಾನಿಗಳನ್ನ ಆಡಿಕೊಂಡಿದ್ದಕ್ಕೆ ಸಿಟ್ಟುಗೊಂಡು, ಹುಲಿಕುಂಟೆ ಮೂರ್ತಿ ಮೇಲೆ ನರಿಯಂತೆ ಎಗರಾಡಿದ್ದಾರಲ್ಲಾ. ಈತನ ನಡವಳಿಕೆ ನೋಡಿದರೆ ಚಕ್ರತೀರ್ಥ ವಕ್ರತೀರ್ಥ ನಾಗೇಶ ಇತ್ಯಾದಿಗಳ ಸಂಬಂಧಿಯಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಬಿಜೆಪಿಗಳ ಮಂದೆಯಲ್ಲಿ ಈತ ಪರವಾಗಿಲ್ಲ ಎಂದು ನಮ್ಮ ಎಂ.ಪಿ ಪ್ರಕಾಶರು ವಾದಿಸುತ್ತಿದ್ದುದಲ್ಲದೆ, ತಮ್ಮ ಊರಿಗೂ ಕರೆದಿದ್ದರು. ಆದರೀಗ ಈತ ತನ್ನ ಚರ್ಮದೊಳಕ್ಕೆ ಸೇರಿಸಿಕೊಂಡಿರುವ ಜನಿವಾರದ ಅನಾವರಣ ಮಾಡಿದ್ದಾರೆ. ಅದೂ ಹುಲಿಕುಂಟೆ ಮೂರ್ತಿಯವರನ್ನ ಕೆಣಕಿ. ಅಂತೂ ಹುಲಿಕುಂಟೆ ಮೂರ್ತಿಗೆ ಥ್ಯಾಂಕ್ಸ್, ಥೂತ್ತೇರಿ.

******

ಕರ್ನಾಟಕದಲ್ಲಿ ಹೊಸದಾಗಿ ರಚನೆಗೊಂಡ ಸರಕಾರ ವಿರೋಧಪಕ್ಷಗಳ ವಿಕೃತ ದಾಳಿಯಿಂದ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಹರಿಪ್ರಸಾದ್ ಎಂಬ ಮಹಾನಾಯಕರು ನಮ್ಮ ಜನಾಂಗವನ್ನು ಕಡೆಗಣಿಸಿದರೆ ಮುಖ್ಯಮಂತ್ರಿಯನ್ನು ಇಳಿಸುವುದೂ ಗೊತ್ತು ಎಂದು ಹೇಳಿ ಕುಮಾರಣ್ಣ ಮತ್ತು ಬೊಮ್ಮಾಯಿಗೆ ರೋಮಾಂಚನವುಂಟುಮಾಡಿದ್ದಾರಲ್ಲಾ. ಹರಿಪ್ರಸಾದ್ ಎಲ್ಲ ಜನಾಂಗ ಎಂದಿದ್ದರೆ ಇಂತ ಅಣಕ ಬರೆಯುವ ಅಗತ್ಯವಿರಲಿಲ್ಲ. ಆದರೆ ಅವರು ತನ್ನ ಜನಾಂಗದ ಹೆಸರನ್ನು ಎಳೆದು ತಂದಿರುವುದರಿಂದ ಕೆಲ ಮಾಹಿತಿಯನ್ನ ಮುಖಕ್ಕೆ ಹಿಡಿಯುವ ಅಗತ್ಯವಂತಲ್ಲ.

1995ರಲ್ಲಿ ಈ ನಾಡಿನ ಎರಡನೇ ಬಹುದೊಡ್ಡ ಸಂಖ್ಯೆಯಾದ ಒಕ್ಕಲಿಗರ ಪೈಕಿ ಕೇವಲ ಎರಡು ಜನ ಎಂ.ಪಿಗಳಿದ್ದರೆ ಹರಿಪ್ರಸಾದರ ಸಮುದಾಯದ ಪೈಕಿ ಐದು ಜನ ಎಂ.ಪಿ ಗಳಿದ್ದರು. ಹಲವು ವ್ಯವಹಾರಗಳಲ್ಲೂ ಅವರು ಪ್ರಧಾನವಾಗಿ ಇದ್ದರು. ಕನ್ನಡ ಚಿತ್ರರಂಗದಲ್ಲೂ ಅನೇಕ ಗಣ್ಯರಿದ್ದರು. ಪತ್ರಿಕಾರಂಗದಲ್ಲೂ ಪ್ರಧಾನವಾಗಿ ಮುಂಚೂಣಿಯಲ್ಲಿದ್ದರು. ಹೀಗೆ ಸರಕಾರ, ಸಿನಿಮಾ, ಮಾಧ್ಯಮ ಮತ್ತು ಉದ್ಯಮದಲ್ಲಿದ್ದ ಹರಿಪ್ರಸಾದರ ಸಮುದಾಯದ ಜನ ತುಂಬ ಘನತೆಯಿಂದ ನಡೆದುಕೊಂಡು ಈ ನಾಡಿನ ಕೀರ್ತಿಯನ್ನ ಬೆಳಗಿದರು. ಈಗ ಅಂತವರ ಹೆಸರಿಗೆ ಮಸಿ ಬಳಿಯುತ್ತಿರುವ ಹರಿಪ್ರಸಾದ್ ಅವರಿಗೆ ಸೈರಣೆ ಬೇಕಾಗಿದೆಯಂತಲ್ಲಾ. ಅದೂ ಜವಾಬ್ದಾರಿಯುತ ಸೈರಣೆ ಮುಖ್ಯ. ಇಲ್ಲವಾದರೆ ’ಬಂ’ನಂತೆ ಜೆಡಿಎಸ್‌ಗೆ ಹೋಗಿ ಕಡೆಗಣನೆಗೆ ಒಳಗಾಗಬೇಕಾಗುತ್ತಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...