Homeಚಳವಳಿಬಂಡವಾಳವಾದ, ಇತಿಹಾಸ ಕುರಿತ  ಲೋಹಿಯಾ ಚಿಂತನೆಗಳು

ಬಂಡವಾಳವಾದ, ಇತಿಹಾಸ ಕುರಿತ  ಲೋಹಿಯಾ ಚಿಂತನೆಗಳು

- Advertisement -
- Advertisement -
ಬಹಳ ಹಿಂದೆಯೇ ಪ್ರಕಟಿಸಲಾಗಿದ್ದ ಈ ಲೇಖನವನ್ನು ಇಂದು ಲೋಹಿಯಾ ಅವರ ಹುಟ್ಟಿದ ದಿನದ ನೆನಪಿನಲ್ಲಿ ಮರುಪ್ರಕಟಿಸುತ್ತಿದ್ದೇವೆ.. ಲೋಹಿಯಾ ಅವರ ಬಗೆಗಿನ ಲೇಖನಗಳು ಸರಣಿ ಲೇಖನಗಳಾಗಿದ್ದು, ಅವುಗಳ ಲಿಂಕ್‌ (ಕೊಂಡಿ)ಗಳನ್ನು ಈ ಲೇಖನದ ಕೊನೆಯ ಭಾಗದಲ್ಲಿ ಸೇರಿಸಲಾಗಿದೆ ಅವುಗಳನ್ನೂ ತಪ್ಪದೇ ಓದಿ…..
ಅಧುನಿಕ ಭಾರತದ ಪುರೋಗಾಮಿ ಚಿಂತಕರಲ್ಲಿ ಲೋಹಿಯಾ ಅಗ್ರಗಣ್ಯರು. ಭಾರತದ ಆಧುನಿಕಪೂರ್ವ ಮತ್ತು ಆಧುನಿಕ ಸಾಮಾಜಿಕ ಚಿಂತನೆಯನ್ನು ಲೋಹಿಯಾರನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ. ಮೊದಲನೆಯದಾಗಿ ಲೋಹಿಯಾ ಎಲ್ಲಾ ರೀತಿಯ ಅನ್ಯಾಯ ಅಸಮಾನತೆಗಳ ವಿರುದ್ಧ ಕಿಡಿಕಾರಿದ ಒಬ್ಬ ಮಾನವತಾವಾದಿ.  ಸಾಮಾನ್ಯವಾಗಿ ಎಲ್ಲಾ ಪ್ರಮುಖ  ಕ್ರಾಂತಿಕಾರಿಗಳೂ ಮಾನವತಾವಾದಿಗಳೇ, ಆದರೆ ಎಲ್ಲಾ ಮಾನವತಾವಾದಿಗಳೂ, ಲೋಕಹಿತೈಷಿಗಳೂ ಕ್ರಾಂತಿಕಾರಿಗಳಾಗಿರುವುದಿಲ್ಲ. ಅಂದರೆ ಅವರಿಂದ ಮೂಲಭೂತ ಬದಲಾವಣೆ ಸಾಧ್ಯವಾಗುವುದಿಲ್ಲ. ಇದು ಲೋಹಿಯಾರವರಿಗೂ, ಅನೇಕ ಸಂತರಿಗೂ ಅನ್ವಯವಾಗುವಂತಹದು.
ಲೋಹಿಯಾ ಚಿಂತನೆಗಳು ಮತ್ತು ಅವರ ಸಮಾಜವಾದಿ ಪಕ್ಷ ನಮ್ಮ ಜಾತ್ಯತೀತತೆಗೂ, ಹಿಂದುಳಿದ ಜಾತಿ ಜನಾಂಗಗಳ ಉನ್ನತಿಯ ವಿಚಾರಗಳಿಗೂ, ಜನಾಂಗೀಯ ಭೇದಭಾವದ ವಿರುದ್ಧವೂ, ಜಾತಿವ್ಯವಸ್ಥೆಯ ವಿನಾಶಕ್ಕೂ, ವಿಚಾರವಾದಕ್ಕೂ, ಪ್ರಜಾಸತ್ತಾತ್ಮಕತೆಗೂ, ರೈತರು ಮತ್ತು ಇತರೆ ದುಡಿಯುವ ವರ್ಗಗಳ ಸಂಘಟನೆ ಹೋರಾಟಗಳಿಗೂ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಇವುಗಳ ವಿವರಣೆಯನ್ನು ಇಲ್ಲಿ ನಾನು ಮಾಡುವುದಿಲ್ಲ. ಜೊತೆಜೊತೆಗೆ ಸಲ್ಲದ ಸೈದ್ಧಾಂತಿಕ, ರಾಜಕೀಯ ರಾಜಿಗಳೂ, ಇದಲ್ಲದೆ ಅವರ ಸಿದ್ಧಾಂತಗಳ ಮೂಲಭೂತ ದೋಷಗಳೇನು ಎಂದು ತಿಳಿದುಕೊಳ್ಳುವುದು ಇನ್ನೂ ಅತಿ ಮುಖ್ಯವಾದುದು. ಈ ಸರಣಿ ಲೇಖನದಲ್ಲಿ ನಾನು ಈ ವಿಷಯದ ಬಗ್ಗೆ ಗಮನಹರಿಸಲು ಪ್ರಯತ್ನಿಸಿರುವೆ.
ಲೋಹಿಯಾ ಜಗತ್ತಿನ ರಾಜಕೀಯ ಸಿದ್ಧಾಂತಗಳನ್ನು ಅಧ್ಯಯನ ಮಾಡಿದವರು. ಆದರೆ ಅವರ ಓದು ಮತ್ತು ಗ್ರಹಿಕೆಗಳಲ್ಲಿ ಅಪಾರವಾದ ಗೊಂದಲಗಳಿರುವುದು ಅವರ ಬರಹಗಳಿಂದ ಕಂಡುಬರುತ್ತದೆ. ರಾಜಕೀಯ ಸಿದ್ಧಾಂತಗಳ ಕುರಿತ ಅವರ ಗ್ರಹಿಕೆ ತುಂಬಾ ಅವಸರದ್ದು, ಈ ಕಾರಣಕ್ಕಾಗಿ, ಅವರ ಬರಹಗಳು ತುಂಬಾ ಉಳುಚಿಕೊಳ್ಳುತ್ತಾ ಹೋಗುತ್ತವೆ. ಪ್ರಕೃತಿಗೆ ಹೇಗೆ ನಿಯಮಗಳಿವೆಯೋ ಹಾಗೆಯೇ ಸಮಾಜದ ಬೆಳವಣಿಗೆ, ಚಲನವಲನಗಳಿಗೂ ಅದರದ್ದೇ ಆದ ನಿಯಮಗಳಿವೆ ಎನ್ನುವುದನ್ನು ಸಾರಾಸಗಟಾಗಿ ತಿರಸ್ಕರಿಸಿ, ತಾವು ಯಾವುದು ಒಳ್ಳೆಯದು, ಉಚಿತವಾದದ್ದು, ಆದರ್ಶವಾದುದು ಎಂದು ಕಲ್ಪಿಸಿಕೊಳ್ಳುತ್ತಾರೋ ಅದನ್ನು ಸಂಕಲ್ಪಶಕ್ತಿಯಿಂದ ಸಾಧಿಸುವುದು ಎನ್ನುವ ದಾರಿಯನ್ನು ಹಿಡಿದುಕೊಂಡವರು.
ಲೋಹಿಯಾರ ಮಾನವ ಸಮಾಜದ ಇತಿಹಾಸದ ತಿಳಿವಳಿಕೆ ಬಹಳ ಗೊಂದಲಮಯವಾದದ್ದು. ಲೋಹಿಯಾರವರ ಪ್ರಕಾರ `ಇಲ್ಲಿಯವರೆಗಿನ ಎಲ್ಲಾ ಮಾನವ ಇತಿಹಾಸವು ಜಾತಿ ಮತ್ತು ವರ್ಗಗಳ ನಡುವಿನ ಆಂತರಿಕ ಓಲಾಟ ಹಾಗೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಶಕ್ತಿ ಮತ್ತು ಸಮೃದ್ಧಿಗಳ  ಸ್ಥಳಾಂತರವಾದುದಾಗಿದೆ.’ `ವರ್ಗ ಎಂದರೆ ಚಲನ ಸಾಮಥ್ರ್ಯವುಳ್ಳ ಜಾತಿ.’ `ಜಾತಿ ಎಂದರೆ ಚಲನರಹಿತ ವರ್ಗ’. ಇದು ಒಂದು ತರಹ ಚಲನರಹಿತತೆ ಚಲನಶೀಲತೆಗಳ ನಡುವೆ ವ್ಯತ್ಯಾಸವೇ ಇಲ್ಲದ ಅಸಂಬದ್ಧ ತೀರ್ಮಾನದಂತಿದೆ. `ಒಮ್ಮೆ ರೋಮ್, ಒಮ್ಮೆ ಗ್ರೀಸ್, ಒಮ್ಮೆ ಚೈನಾ, ಒಮ್ಮೆ ಅರೇಬಿಯಾ, ಒಮ್ಮೆ ಮೆಕ್ಸಿಕೊ, ಒಮ್ಮೆ ಇಂಡಿಯಾ ಇತಿಹಾಸದ ಶಿಖರಾಗ್ರದಲ್ಲಿ ಆಸೀನವಾಗಿದ್ದವು’ ಎಂದು ಲೋಹಿಯಾ ಇದನ್ನು ಶಕ್ತಿ ಸಮೃದ್ಧಿಗಳ ಖಂಡಾಂತರ ಪಲ್ಲಟ ಎಂದು ಹೇಳುತ್ತಾರೆ. ಇದು ಇತಿಹಾಸದ ಬೇರೆಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ಪ್ರದೇಶಗಳು ಹೆಚ್ಚು ಮುಂದುವರಿದಿದ್ದು ಆಗಿರುವುದೇ ಹೊರತು ಖಂಡಾಂತರ ಪಲ್ಲಟವೇನೂ ಆಗಿಲ್ಲ. ಮಕ್ಕಳಿಗೆ ಹೇಳಿಕೊಡುವ ಕಾಗೆ-ಗುಬ್ಬಚ್ಚಿಯ ಸುಂದರವಾದ ಕಥೆಯಂತಿರುವ ಲೋಹಿಯಾರವರ ಈ ವಿವರಣೆ ಇತಿಹಾಸದ ಚಲನೆಯ ಬಗೆಗೆ ಏನನ್ನೂ ತಿಳಿಸದು.
ಸಮಾಜಗಳ ಸ್ವರೂಪ ಮತ್ತು ಬದಲಾವಣೆಗಳು ಅವುಗಳ ಸತ್ವಗಳಲ್ಲಾಗಿರುವ ಬದಲಾವಣೆಯಿಂದಾಗಿವೆ. ಈ ಸತ್ವದ ಬದಲಾವಣೆಗಳನ್ನು ತಿರಸ್ಕರಿಸಿ ಮೇಲ್‍ಸ್ತರದ ಅಂಶಗಳಿಂದಷ್ಟೇ ಇತಿಹಾಸವನ್ನು ಅರ್ಥೈಸುವ ಲೋಹಿಯಾರವರು `ಹುಟ್ಟಿದ್ದು ಸಾಯಲೇಬೇಕೆಂಬ ಮಾತು ಸತ್ಯವಾದರೆ…… ಸತ್ತದ್ದು ಮತ್ತೆ ಹುಟ್ಟಲೇ ಬೇಕು’. `ಯುಗಗಳೂ ಪ್ರದೇಶಗಳೂ ಸದಾ ತಿರುಗುತ್ತಲೇ ಇರುತ್ತವೆ. ಸಮಾನತೆಯಿಂದ ವರ್ಗ, ವರ್ಗದಿಂದ ವಿಘಟನೆ, ಈ ಕ್ರಿಯೆಯಿಂದ ಅದರ ವಿರುದ್ಧ ಕ್ರಿಯೆಯಾದ ನ್ಯಾಯದಿಂದ ಜಾತಿ, ಜಾತಿಯಿಂದ ಜಡತ್ವ, ಮತ್ತೆ ಪನಃ ಸಮಾನತೆಯ ಕಡೆಗೆ- ಇದು ಮಾನವ ನಿಯತಿಯ ಪೂರ್ಣ ಚಕ್ರ’ `ನಾಗರಿಕತೆಗಳು ಈ ವಿಧಿಯ ಆಟದ ರಂಗಸ್ಥಳ’ ಎಂದು ‘ಬೊಂಬೆಯಾಟವಯ್ಯ’ ಎಂದು ಹಳೆಯ ಸಿನಿಮಾದಲ್ಲಿ ನಾರದ ಮುನಿಯ ಪಾತ್ರಧಾರಿ ಇಂಪಾಗಿ ಹಾಡುವಂತೆ, ಮಾನವ ಇತಿಹಾಸ ಒಂದು ವಿಧಿಯ ಆಟವಾಗಿದೆ ಎನ್ನುವ ವಿಧಿವಾದ  ಅಥವಾ ಹಣೆಯಬರಹವಾದವನ್ನೇ ಲೋಹಿಯಾ  ಮುಂದಿಡುತ್ತಾರೆ.
`ನಾಗರಿಕತೆಗಳ ಏಳುಬೀಳುಗಳನ್ನು ನೋಡುತ್ತಾ, ತನ್ನ ಮುಂದೆ ಇತಿಹಾಸದ ಅನಂತ ಮರುಭೂಮಿ ಹರಡಿರುವುದನ್ನು ನೋಡುತ್ತಾ, ವರ್ಗದ ಕೊಂಬೆಯಿಂದ ಜಾತಿಯ ಕೊಂಬೆಗೆ ಕೋತಿಯಂತೆ ಜಿಗಿಯುತ್ತಿರುವುದೇ ಮಾನವನ ಸದಾ ಕಾಲದ ಹಣೆಯಬರಹವೆ’. `ಶಕ್ತಿ ಮತ್ತು ಸಮೃದ್ಧಿ, ಬಡತನ ಮತ್ತು ಸುಪ್ತಾವಸ್ಥೆಗಳ ನಡುವೆ ಯುಗಗಳೂ ಪ್ರದೇಶಗಳೂ ಓಲಾಡುತ್ತಾ ಸದಾ ತಿರುಗುತ್ತಲೇ ಇರುತ್ತವೆ’ `ಮಾನವ ಕುಲಕ್ಕೆ ವರ್ಗರಹಿತ ಸಮಾಜ ಅಥವಾ ಏಕಜಗತ್ತಿನ ಸಾಧನೆಯ ಭರವಸೆ ತೀರಾ ಅತ್ಯಲ್ಪ’. `ಬಡತನ  ಮತ್ತು ಯುದ್ಧಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಿರುವ, ಮನುಷ್ಯನು ಅಂತರಂಗದ ತೃಪ್ತಿಯನ್ನೂ, ಬಹಿರಂಗದ ಶಾಂತಿಯನ್ನೂ ಸಾಧಿಸುವ ಜೀವನಕ್ರಮವನ್ನು ಹೊಂದುವಂಥ ಸುವರ್ಣಯುಗ ಒಂದು  ಹಳೆಯ ಭ್ರಾಂತಿಯೆಂದು ತೋರುತ್ತದೆ’ ಎನ್ನುವ ಅಪರಿಮಿತವಾದ ನಿರಾಶಾವಾದವನ್ನು ಲೋಹಿಯಾ ಮಂಡಿಸುತ್ತಾರೆ.
ಲೋಹಿಯಾರವರ ಪ್ರಕಾರ ಇಲ್ಲಿಯವರೆಗೂ ಇತಿಹಾಸ ನಿರ್ಮಿಸಿರುವುದು ಮಾನವರಲ್ಲ, ಬದಲು `ಇತಿಹಾಸವೇ ಇತಿಹಾಸವನ್ನು ನಿರ್ಮಿಸಿದೆ’. ಅದು ವಿಧಿಯ ಆಟವಾಗಿದೆ. ಹೀಗಾಗಿ ಲೋಹಿಯಾ ಇತಿಹಾಸ ಚಲನೆಯ ಪ್ರೇರಕಶಕ್ತಿಯನ್ನೇ  ಕಾಣಲಿಲ್ಲ. `ಪುನರ್ಜನ್ಮ ಮತ್ತು ಕರ್ಮಸಿದ್ಧಾಂತ ವ್ಯಕ್ತಿಗೆ ಸಂಬಂಧಪಟ್ಟಂತೆ ಸಮಂಜಸವಿಲ್ಲದಿರಬಹುದೇನೋ. ಆದರೆ ರಾಷ್ಟ್ರ ಮತ್ತು ಗುಂಪುಗಳಿಗೆ ಸಂಬಂಧಪಟ್ಟಂತೆ ಅದು ಸಮಂಜಸವಾದುದೆಂದು ತೋರುತ್ತದೆ’ ಎನ್ನುವುದರ ಮೂಲಕ ಹಿಂದೂ ಧರ್ಮದ ಪುನರ್ಜನ್ಮ ಸಿದ್ಧಾಂತವನ್ನು ನಾಗರಿಕತೆಗಳ ಇತಿಹಾಸಕ್ಕೆ ಅಳವಡಿಸಿದ ದೃಷ್ಟಿಯೇ ಆಗಿದೆ ಎನ್ನುವುದು ಲೋಹಿಯಾರವರ ಆ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಲೋಹಿಯಾ ‘ಮಾಕ್ರ್ಸ್ ನಂತರದ ಅರ್ಥಶಾಸ್ತ್ರ’ ಎನ್ನುವ ಶೀರ್ಷಿಕೆಯಲ್ಲಿ ದೀರ್ಘ ಲೇಖನವೊಂದನ್ನು ಬರೆದಿದ್ದಾರೆ. ಇದನ್ನು ಕೆಲವು ಲೋಹಿಯಾವಾದಿಗಳು ಅವರ ‘ಮ್ಯಾಗ್ನಮ್ ಓಪಸ್’ ಎಂದು ಬಣ್ಣಿಸಿರುವುದುಂಟು. ಅದು ಒಂದು ರೀತಿಯ ಭ್ರಮೆ ಹಾಗೂ ಪೊಳ್ಳುವಾದ. ಆ ಲೇಖನವು ಹೇಗೆ ಮಾಕ್ರ್ಸ್‍ವಾದದ ಬಗ್ಗೆ ಲೋಹಿಯಾರವರ ಅತ್ಯಂತ ಕಳಪೆ ತಿಳಿವಳಿಕೆಯೇ ಆಗಿದೆ. ಹೆಚ್ಚಿನ ಲೋಹಿಯಾವಾದಿಗಳು ಮಾಕ್ರ್ಸ್‍ವಾದವನ್ನು ಓದಿದವರಲ್ಲ. ಲೋಹಿಯಾ ಮಾಕ್ರ್ಸ್‍ವಾದದ ಬಗ್ಗೆ ಏನು ಹೇಳಿದರೋ ಅದು ಅದ್ಭುತ ಸತ್ಯ ಎಂದೇ ಭಾವಿಸಿಬಿಟ್ಟರು. ಲೋಹಿಯಾ ಟೀಕಿಸಿದ್ದು ಮಾಕ್ರ್ಸ್ ಏಂಗೆಲ್ಸ್ ರೂಪಿಸಿದ ಮಾಕ್ರ್ಸ್‍ವಾದವನ್ನಲ್ಲ, ಬದಲಿಗೆ ಲೋಹಿಯಾ ಟೀಕಿಸಿದ್ದು ತನ್ನ ಕಲ್ಪನೆಯ ಮಾಕ್ರ್ಸವಾದವನ್ನು.
ಅವರು ಹೇಳುವುದೇನೆಂದರೆ `ಮಾಕ್ರ್ಸ್‍ವಾದದ ಬಂಡವಾಳಶಾಹಿ ಚಿತ್ರಣ ಒಂದು ಪಶ್ಚಿಮ ಯೂರೋಪಿನ ಒಳಕ್ರಿಯೆ ಯಾಗಿದೆಯಷ್ಟೆ. ಬಂಡವಾಳಶಾಹಿಯ ಚಲತ್ವವನ್ನು  ಆಂತರಿಕ ರಚನೆಯಲ್ಲಿ; ಮೌಲ್ಯ-ಉಪಯೋಗಮೌಲ್ಯಗಳ ವೈರುಧ್ಯದಲ್ಲಿ; ಒಂದೇ ರಚನೆಯ ಕಾರ್ಮಿಕವರ್ಗ-ಬಂಡವಾಳಗಾರ ವರ್ಗಗಳ ವೈರುಧ್ಯದಲ್ಲಿ ಮಾತ್ರ ಕಾಣಲಾಗಿದೆ. ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರಣ ಸ್ವಯಂಚಲನೆ ಹೊಂದಿದ ಪಶ್ಚಿಮ ಯೂರೋಪಿನ ಒಳ ವೃತ್ತವಾಗಿದೆ’ ‘ಮಾಕ್ರ್ಸ ವಸಾಹತುಶಾಹಿ ಶೋಷಣೆಯನ್ನು ಕಾಣಲಿಲ್ಲವೆಂದೂ, ವಸಾಹತುಗಳ ಶೋಷಣೆಯಿಂದಲೇ ಬಂಡವಾಳಶಾಹಿ ಬೆಳೆದುಬಂದುದನ್ನು ಕಾಣಲಿಲ್ಲವೆಂದೂ’ ಲೋಹಿಯಾ ಆರೋಪಿಸುತ್ತಾರೆ.
ಮಾಕ್ರ್ಸ್‍ವಾದ ನಿಜಕ್ಕೂ ಹೀಗಿದೆಯೇ? ಎಂದು ಪರಿಶೀಲಿಸೋಣ. 1847ರಲ್ಲಿ ಪ್ರಕಟವಾದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋದಲ್ಲಿ ಮಾಕ್ರ್ಸ್ ಮತ್ತು ಏಂಗಲ್ಸ್ ನೀಡಿದ ಬಂಡವಾಳಶಾಹಿ ಚಿತ್ರಣ ಇದು. `ಮಧ್ಯಯುಗದ ಜೀತಗಾರರಿಂದ ಮೊದಲ ಪಟ್ಟಣಗಳ ಚಾರ್ಟರ್ಡ್ ಬರ್ಗರ್ಸ್ ಉದಯವಾದರು. ಈ  ಬರ್ಗರ್ಸ್‍ಗಳಿಂದ ಬಂಡವಾಳಶಾಹಿಯ ಮೊದಲ ಅಂಶಗಳು ಬೆಳೆದುಬಂದವು. ಅಮೆರಿಕವನ್ನು ಕಂಡುಹಿಡಿದುದು, ಗುಡ್‍ಹೋಪ್ ಭೂಶಿರವನ್ನು ಬಳಸಿ ಜಲಮಾರ್ಗಗಳ ಶೋಧನೆ ನಡೆಸಿದುದು, ಮೊಳಕೆಯೊಡೆಯುತ್ತಿದ್ದ ಬಂಡವಾಳಶಾಹಿಗೆ ಹೊಸ ನೆಲೆಗಳನ್ನು ತೆರೆಯಿತು. ಪೂರ್ವಭಾರತ ಮತ್ತು ಚೈನಾ ಮಾರುಕಟ್ಟೆಗಳು, ಅಮೆರಿಕದ ವಸಾಹತೀಕರಣ, ವಸಾಹತುಗಳೊಂದಿಗಿನ ವ್ಯಾಪಾರ, ಕ್ರಯವಸ್ತುಗಳಲ್ಲಿ ಹಾಗೂ ವಿನಿಮಯ ಸಾಧನಗಳಲ್ಲಿ ಆದ ಬೆಳವಣಿಗೆಗಳು ಸಾಮಾನ್ಯವಾಗಿ ವಾಣಿಜ್ಯ, ನೌಕಾಯಾನ, ಕೈಗಾರಿಕೆಗಳಿಗೆ ಹಿಂದೆಂದೂ ಇರದಷ್ಟು ಉತ್ತೇಜನ ನೀಡಿತು. ಇದು ತತ್ತರಿಸುತ್ತಿದ್ದ ಪಾಳೆಯಗಾರಿ ಸಮಾಜ ವ್ಯವಸ್ಥೆಯ ಗರ್ಭದೊಳಗಿದ್ದ ಕ್ರಾಂತಿಕಾರಿ ಅಂಶಕ್ಕೆ ತ್ವರಿತಗತಿಯ ಬೆಳವÀಣಿಗೆಯನ್ನು ಉಂಟುಮಾಡಿತು.
ಆಧುನಿಕ ಕೈಗಾರಿಕೆ ವಿಶ್ವಮಾರುಕಟ್ಟೆಯನ್ನು ಸ್ಥಾಪಿಸಿದೆ. ಇದಕ್ಕೆ ಅಮೆರಿಕದ ಶೋಧನೆ ನಾಂದಿಯಾಯಿತು. ಈ ವಿಶ್ವಮಾರುಕಟ್ಟೆಯು ವಾಣಿಜ್ಯ, ನೌಕಾಯಾನ, ಭೂಸಂಪರ್ಕ ವ್ಯವಸ್ಥೆಯ ತ್ವರಿತಗತಿಯ ಬೆಳವಣಿಗೆಗೆ ಪ್ರೇರಕವಾಯಿತು. ತಾನು ಉತ್ಪಾದಿಸಿದ ಮಾಲುಗಳಿಗೆ ಸತತವಾಗಿ ಮಾರುಕಟ್ಟೆಯು ವಿಸ್ತರಣೆಯಾಗಬೇಕಾದ ಅಗತ್ಯವು ಬಂಡವಾಳಶಾಹಿಯನ್ನು ಭೂಗೋಳದ ಮೇಲ್ಮೈಯಾದ್ಯಂತ ಓಡಿಸುತ್ತದೆ……… ವಿಶ್ವಮಾರುಕಟ್ಟೆಯ ಶೋಷಣೆಯಿಂದ ಬಂಡವಾಳಶಾಹಿಯು ಪ್ರತಿಯೊಂದು ದೇಶದ ಉತ್ಪಾದನೆ ಬಳಕೆಗಳಿಗೆ ಸಾರ್ವತ್ರಿಕವಾದ ಲಕ್ಷಣಗಳನ್ನು ನೀಡುತ್ತಿದೆ. ಸ್ಥಳೀಯ ಕಚ್ಚಾಪದಾರ್ಥಗಳಿಂದಲ್ಲದೆ ಯಾವುದೋ ಮೂಲೆಯ ವಲಯಗಳಿಂದ ತರುವ ಕಚ್ಚಾಪದಾರ್ಥಗಳ ಮೇಲೆಯೇ ನಡೆಯುವ; ಉತ್ಪನ್ನಗಳು ದೇಶದೊಳಗಡೆಯಷ್ಟೇ ಬಳಸಲ್ಪಡದೆ  ಭೂಮಿಯ ಪ್ರತಿಯೊಂದು ಮೂಲೆಗಳಲ್ಲೂ ಬಳಸಲ್ಪಡುವ ಕೈಗಾರಿಕೆಗಳು, ದೇಶದ ಉತ್ಪಾದನೆಯಿಂದಲೇ ನೀಗಿಸಲ್ಪಡುತ್ತಿದ್ದ ಬೇಡಿಕೆಗಳ ಬದಲು ದೂರದ, ಭಿನ್ನವಾದ ಭೂವಾತಾವರಣಗಳ ಉತ್ಪನ್ನಗಳೇ ಬೇಕಾಗುವ ಬೇಡಿಕೆಗಳು ಉಂಟಾಗುವುದು ನಾವು ಕಾಣುತ್ತೇವೆ. ಹಳೆಯ, ಸ್ಥಳೀಯ, ರಾಷ್ಟ್ರೀಯ ಪ್ರತ್ಯೇಕತೆ, ಸಂಕುಚಿತತೆ, ಸ್ವಂತಕ್ಕೆ ಸಾಕಾಗುವಷ್ಟು ಉತ್ಪಾದನೆ, ಇವುಗಳ ಬದಲು ಪ್ರತಿಯೊಂದು ದಿಕ್ಕಿನಲ್ಲೂ ಪರಸ್ಪರ ವ್ಯವಹಾರ, ವಿಶ್ವದಾದ್ಯಂತ ರಾಷ್ಟ್ರಗಳ ಪರಸ್ಪರಾವಲಂಬನೆಗಳು ಏರ್ಪಟ್ಟಿವೆ. ಬಂಡವಾಳಶಾಹಿಯು ಹಳ್ಳಿಗಳನ್ನು ನಗರಗಳ ಆಡಳಿತಕ್ಕೆ ಒಳಮಾಡಿದಂತೆ, ಅನಾಗರಿಕ ಅರೆನಾಗರಿಕ ದೇಶಗಳನ್ನು ನಾಗರಿಕ ದೇಶಗಳ ಮೇಲೆ, ರೈತರ ರಾಷ್ಟ್ರಗಳನ್ನು ಬಂಡವಾಳಶಾಹಿ ರಾಷ್ಟ್ರಗಳ ಮೇಲೆ ಬಲಾತ್ಕಾರದ ಪರಾವಲಂಬನೆಗೆ ಒಳಪಡಿಸಿದೆ’.  (ಕಮ್ಯುನಿಸ್ಟ್ ಮ್ಯಾನಿಫೆಸ್ಟೋ) ಹೀಗೆ ಕಮ್ಯುನಿಸ್ಟ್ ಮ್ಯಾನಿಫೆಸ್ಟೋದ ಮೊದಲಿನ ಪುಟಗಳಲ್ಲೇ ಈ ರೀತಿಯಾಗಿ ಬಂಡವಾಳಶಾಹಿಯ ವಿಶ್ವವ್ಯಾಪಿ ಅಂಶಗಳನ್ನೂ, ಪರಿಣಾಮಗಳನ್ನೂ ವಿವರಿಸಿರುವಾಗ ‘ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರಣ ಪಶ್ಚಿಮ ಯೂರೋಪಿನ ವೃತ್ತವಾಗಿದೆ ಅಥವಾ ಒಳಕ್ರಿಯೆಯಷ್ಟೇಯಾಗಿದೆ’ ಎಂದು ಹೇಳಲು ಸಾಧ್ಯವಿದೆಯೇ? ಮಾಕ್ರ್ಸ್‍ರವರ ಬಂಡವಾಳಶಾಹಿ ಚಿತ್ರ ವಾಸ್ತವವಾಗಿ ಜಾಗತಿಕ  ಯೂರೋಪಿನ ಬಂಡವಾಳಶಾಹಿ ಬೆಳವಣಿಗೆಗೆ ಬಂಡವಾಳದಪೂರ್ವ ಶೇಖರಣೆ  ಹೇಗಾಯಿತೆನ್ನುವುದನ್ನು ಅಲ್ಲಿ ವಸಾಹತುವಾದ ಏಕೆ ಅನಿವಾರ್ಯವಾಯಿತೆಂದೂ ಮಾಕ್ರ್ಸ್ ತಮ್ಮ ‘ಬಂಡವಾಳ’ ಗ್ರಂಥದಲ್ಲಿ ಹಾಗೂ ಇನ್ನಿತರ ಬರಹಗಳಲ್ಲಿ ವಿವರಿಸಿದ್ದಾರೆ.
ಲೋಹಿಯಾರವರ ಮೂಲ ಆರೋಪಕ್ಕೆ ಆಧಾರವೇ ಇಲ್ಲದಿರುವಾಗ, ಅದರಿಂದ ಹುಟ್ಟುವ ಇತರೆ ಆರೋಪಗಳೂ ತಾವಾಗಿಯೇ ಉದುರಿಹೋಗುತ್ತವೆ. ಹೆಚ್ಚಿನ ವಿವರಗಳಿಗೆ ನನ್ನ ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’ ಪುಸ್ತಕವನ್ನು ನೋಡಬಹುದು.
(ಮುಂದುವರಿಯುವುದು)
ಇವುಗಳನ್ನೂ ಓದಿ:

2. ಹಿಂಸೆ, ಅಹಿಂಸೆಯ ಲೋಹಿಯಾ ಮೀಮಾಂಸೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...