Homeಅಂಕಣಗಳುಪುಟಕ್ಕಿಟ್ಟ ಪುಟಗಳುಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ಪತಂಜಲಿ ಯೋಗಸೂತ್ರ: ಧಾರ್ಮಿಕವೂ ಅಲ್ಲದ ಮೌಢ್ಯವೂ ಅಲ್ಲದ ತಂತ್ರ ಸಾಧನ

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ.

- Advertisement -
- Advertisement -

ಯೋಗ ಎಂಬುದನ್ನು ಧಾರ್ಮಿಕತೆಗೆ ತಳುಕುಹಾಕುವ ಮತ್ತು ಅದನ್ನು ಮೌಢ್ಯವೆಂದು ತಳ್ಳಿ ಹಾಕುವುದು ಎರಡೂ ಪೂರ್ವಗ್ರಹದಿಂದ ಕೂಡಿದೆ. ಆದರೆ ಇವೆರಡಕ್ಕೂ ಹೊರತಾಗಿರುವ ಒಂದು ಸಾಧನ ತಂತ್ರ ಈ ಪತಂಜಲಿ ಯೋಗಸೂತ್ರ.

ಮನುಷ್ಯ ತನ್ನ ಗ್ರಹಿಕೆ ಮತ್ತು ಅನುಭವಗಳ ಪರಿಮಿತಿಯಲ್ಲಿ ಇರುವ ತನ್ನ ಮನಸ್ಸು ಮತ್ತು ಶರೀರ ಸಂವೇದನೆಯನ್ನು ವಿಸ್ತರಿಸಿಕೊಂಡು ಕೈವಲ್ಯವನ್ನು ಪಡೆಯಲು ಮಾಡಿರುವ ಬೋಧನೆ ಇದು. ಯಾವುದೇ ದೇವತೆಗಳ ಗುಣಗಾನವಲ್ಲ, ಪ್ರಾರ್ಥನೆ, ಆರಾಧನೆಗಳಿಂದ ಫಲ ಪಡೆಯುವ ಭರವಸೆಯಲ್ಲ, ಹುಟ್ಟಿನಿಂದ ಶ್ರೇಷ್ಠರೋ ಕನಿಷ್ಟರೋ ಆಗಿದ್ದಾರೆಂಬ ಭ್ರಮೆಯಲ್ಲಿರುವ ಜಾತಿಯವರಿಗೆ ಸವಲತ್ತೋ, ಅನುಗ್ರಹವೋ ಅಲ್ಲವೇ ಅಲ್ಲ. ಯಾವೊಬ್ಬ ಮನುಷ್ಯನೂ ತನ್ನ ಸೀಮಿತ ಗ್ರಹಿಕೆಯಲ್ಲಿರುವ ಮನಸ್ಸಿನ ಸ್ವರೂಪ ಮತ್ತು ಚಟುವಟಿಕೆಗಳನ್ನು ಅರಿತುಕೊಂಡು, ಯಾದು ತನ್ನನ್ನು ಉದಾತ್ತಗೊಳಿಸುತ್ತದೆಯೋ ಅಥವಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆಯೋ ಅಂತಹವನ್ನು ಸ್ವೀಕರಿಸುತ್ತಾ, ಯಾವುವು ತನ್ನನ್ನು ಹಿಂದಕ್ಕೆ ಎಳೆಯುತ್ತದೆಯೋ, ಬಂಧನದಲ್ಲಿ ಸಿಲುಕಿಸುತ್ತದೆಯೋ, ಆನಂದವನ್ನು ನೀಡುವುದಿಲ್ಲವೋ ಅಂತಹವನ್ನು ನಿಗ್ರಹಿಸುವ ತರಬೇತಿಗೆ ಅಗತ್ಯವಿರುವ ಫಾರ್ಮುಲಾಗಳು ಈ ಯೋಗಸೂತ್ರಗಳು.

ಅನುಮಾನಗಳನ್ನು ಹುಟ್ಟಿಹಾಕಿಕೊಂಡು, ಚರ್ಚೆಗಳನ್ನು ಮಾಡಿಕೊಂಡು, ಸಿದ್ಧಾಂತಗಳ ಶಾಖೆಗಳ ಮೂಸೆಗಳಲ್ಲಿ ಶೋಧಿಸಿಕೊಂಡು ಕಾಲಹರಣ ಮಾಡಬೇಡಿ. ಹೇಳಿದಷ್ಟು ಮಾಡಿ ಎನ್ನುವಷ್ಟು ಖಂಡಿತವಾದಿ ಈ ಪತಂಜಲಿ. “ಅಥ ಯೋಗಾನುಶಾಸನಂ” ಎಂದೇ ಪ್ರಾರಂಭಿಸುತ್ತಾರೆ. ಜಿಜ್ಞಾಸಾಶಾಸ್ತ್ರಗಳು “ಅಥಾತೋ ಬ್ರಹ್ಮಜಿಜ್ಞಾಸಾ” ಅಥವಾ “ಅಥಾತೋ ಧರ್ಮಜಿಜ್ಞಾಸಾ” ಎಂದು ಪ್ರಾರಂಭಿಸಿದರೆ ಅಲ್ಲಿ ನಿಮ್ಮ ಹೊಸ ಆಲೋಚನೆಗಳಿಗೆ ಮತ್ತು ಬೇರೆ ಬೇರೆ ಸಿದ್ಧಾಂತಗಳ ಒರೆಗಲ್ಲಿಗೆ ತಿಕ್ಕಿ ತೀಡಿ ಈ ವಿಷಯವು ಸರಿಯೋ, ತಪ್ಪೋ, ಸಮರ್ಪಕವೋ ಎಂದು ನೋಡುವ ಸಾಧ್ಯತೆಗಳಿರುತ್ತದೆ. ಆದರೆ ವಿಜ್ಞಾನದ ಸೂತ್ರಗಳಲ್ಲಿ ನಿರೂಪಿತ ವಿಷಯವು ದೃಢವಾಗಿದ್ದು, ಅದು ಬದಲಾಗುವುದಿಲ್ಲ. ಆದರೆ ಅದರಿಂದ ಈಚೆಗೂ ವಿಷಯಗಳು ಪ್ರಯೋಗಗಳಿಂದ ಮತ್ತಷ್ಟು ವಿಸ್ತಾರಗೊಳ್ಳುವವು. ಉದಾಹರಣೆಗೆ ಗುರುತ್ವಾಕರ್ಷಣೆಯ ನಿಯಮ. ಇದನ್ನು ಸಂದೇಹಿಸಲಾಗದು. ಈಗಾಗಲೇ ನಿರೂಪಿತವಾಗಿರುವುದು. ಅದನ್ನು ಪ್ರಯೋಗಗಳಿಗೆ ಒಳಪಡಿಸಬಹುದು. ಬೇರೆಬೇರೆ ವಿಷಯಗಳಲ್ಲಿ ಇದರ ವಿಸ್ತಾರವನ್ನು ಹೆಚ್ಚಿಸಬಹುದು. ಇದರ ನಿಯಮವನ್ನು ಭೂಮಿಯ ಮೇಲೆ ಮಾತ್ರವಲ್ಲದೇ ಅಂತರಿಕ್ಷದಲ್ಲಿ ಮಾಡುವ ಪ್ರಯೋಗಗಳವರೆಗೂ ವಿಸ್ತರಿಸಬಹುದು. ಗುರುತ್ವಾಕರ್ಷಣೆಯ ನಿಯಮವೆಂದರೆ ಅದೊಂದು ಮೂಲಭೂತ ವೈಜ್ಞಾನಿಕ ಸೂತ್ರ. ಪತಂಜಲಿಗೆ ಅಷ್ಟರಮಟ್ಟಿಗಿನ ವಿಶ್ವಾಸ ತನ್ನ ಸೂತ್ರಗಳಲ್ಲಿ.

ತನ್ನ ಸೂತ್ರಗಳನ್ನು ವಿಶ್ವಾಸಿಸಿ ಎಂದು ಭ್ರಾಮಕ ಶ್ರದ್ಧೆಯನ್ನು ಉಂಟುಮಾಡುವ ಇರಾದೆ ಪತಂಜಲಿಗಿಲ್ಲ. ಪ್ರಯೋಗಿಸಿ ಅಭ್ಯಾಸ ಮಾಡಿ ಎನ್ನುತ್ತಾನೆ. ಅನುಷ್ಠಾನಕ್ಕೆ ತನ್ನಿ ಎಂದು ತಾಕೀತು ಮಾಡುತ್ತಾನೆ. ಅದರಿಂದ ಹೀಗಾಗತ್ತೆ ಹಾಗಾಗತ್ತೆ ಎಂದು ಫಲವನ್ನು ಪೂರ್ವಪಾಠದಲ್ಲಿ ಹೇಳಿ ಆಸೆ ಹುಟ್ಟಿಸುವುದಿಲ್ಲ. ಆ ರೀತಿಯಲ್ಲಿ ಆಸೆ ಹುಟ್ಟಿಸುವುದು ಅಥವಾ ಭಯ ಹುಟ್ಟಿಸುವುದು ಪತಂಜಲಿಯ ಯೋಗ ಮಾರ್ಗದಲ್ಲಿ ನಿಷೇಧವೂ ಹೌದು.

ಹಾಗಂತ ಪತಂಜಲಿಯ ಯೋಗಸೂತ್ರವು ಋಷಿಮುನಿಯೊಬ್ಬನೋ ಅಥವಾ ಯೋಗಿಯೊಬ್ಬನೋ ತಾನು ಮೋಡಗಳ ಆಚೆಯಿಂದಲೋ ಅಥವಾ ಬೆಟ್ಟಗಳ ಮರೆಯಿಂದಲೋ ದೇವರ ಬಾಯಿಂದ ಕೇಳಿಸಿಕೊಂಡು ಬರೆದಿರುವಂತಹುದೇನಲ್ಲ. ಸುಮಾರು ಕ್ರಿಸ್ತಪೂರ್ವ 150ರ ಆಸುಪಾಸುಗಳಲ್ಲಿ ರಚಿಸಲ್ಪಟ್ಟಿರಬಹುದಾದ ಈ ಕೃತಿ ಶತಶತಮಾನಗಳ ಹಿಂದಿನ ಅನೇಕ ಪ್ರಯೋಗಗಳನ್ನು, ಅಭ್ಯಾಸಗಳನ್ನು, ತಂತ್ರ ಸಾಧನೆಗಳನ್ನು ಗಮನಿಸಿಕೊಂಡು, ವಿವಿಧ ಸಿದ್ಧಾಂತಗಳ ಶಾಲೆಗಳ ಧ್ವನಿಗಳನ್ನು ಕೇಳುತ್ತಾ, ಅದರಿಂದಾಚೆಗಿರುವ ಮರ್ಮವನ್ನು ಅರಿಯಲು ಯತ್ನಿಸುತ್ತಾ ಕ್ರೋಢೀಕರಿಸುವಂತಹ ಸೂತ್ರಗಳಾಗಿವೆ. ನೂರಾರು ವರ್ಷಗಳು ಬರಿಯ ಮೌಖಿಕವಾಗಿಯೇ ಇದ್ದ ಈ ಸೂತ್ರಗಳು ನಂತರದ ಕಾಲಘಟ್ಟದಲ್ಲಿ ಬರವಣಿಗೆಯ ರೂಪಕ್ಕೆ ತರಲಾಯಿತು.

ವಿಷ್ಣುವೋ, ಇಂದ್ರನೋ, ಶಿವನೋ, ಒಬ್ಬ ದೇವರ ಅಧೀನದಲ್ಲಿದ್ದು ಅವನ ಆಗ್ರಹ ಮತ್ತು ಅನುಗ್ರಹಗಳಿಗೆ ತಕ್ಕಂತೆ ನಮ್ಮ ಬದುಕಿನ ನಡೆಗಳು ಒಡಮೂಡುವುದು ಎಂದು ನಂಬುವ ಧಾರ್ಮಿಕ ಶ್ರದ್ಧೆ ಪತಂಜಲಿಯದ್ದಲ್ಲ. ಮನಸ್ಸು ಮತ್ತು ದೇಹಕ್ಕೆ ಅಗತ್ಯವಿರುವ ‘ಅಭ್ಯಾಸ’ ಮಾಡುತ್ತಾ, ತನ್ನನ್ನು ತಾನು ತರಬೇತಿಗೊಳಿಸಿಕೊಳ್ಳುತ್ತಾ ಕೈವಲ್ಯವನ್ನು ಪಡೆಯುವುದು – ಮನಸ್ಸು ಮತ್ತು ದೇಹವನ್ನು ಶಿಸ್ತಿಗೆ ಒಳಪಡಿಸಿ, ನಮ್ಮ ಚೈತನ್ಯವನ್ನು ಕೇಂದ್ರೀಕರಿಸಿ ಔನ್ನತ್ಯವನ್ನು ಹೊಂದುವುದು ಅವನ ಮಾರ್ಗ. ಇಲ್ಲಿ ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯ. ಪರಮಾತ್ಮವೆಂದರೆ ವ್ಯಕ್ತಿಗತವಾಗಿರುವುದನ್ನು ಮೀರಿರುವ ವಿಶ್ವದಸ್ತಿತ್ವದ ಮಹಾಚೈತನ್ಯ. ಒಂದು ನೀರಿನ ಹನಿಯಲ್ಲಿರುವ ಅಣುಗಳ ಸಂಯೋಜನೆ ಮತ್ತು ಗುಣಗಳೇ ಸಮುದ್ರದಲ್ಲಿಯೂ ಇರುವುದು. ಆದರೆ ಈ ಎರಡರ ನಡುವೆ ಭೌತಿಕ ವ್ಯತ್ಯಾಸವಿದೆ. ನೀರಿನ ಹನಿಯು ಸಾಗರವನ್ನು ಸೇರಿ ಅಗಾಧತೆಯಲ್ಲಿ ಒಂದಾಗಿ ತಾನೂ ಆ ಅಗಾಧಶಕ್ತಿಯಲ್ಲಿ ಒಂದಾಗುವ ಸಾಧ್ಯತೆಯೂ ಇದೆ. ಈ ಸಾಧ್ಯತೆಯನ್ನು ಮನುಷ್ಯನ ಜೀವ ಎಂಬ ಚೈತನ್ಯವು ಪರಮ ಎಂಬ ಮಹಾ ಚೈತನ್ಯದೊಡನೆ ಸೇರಿಸುವ ಪ್ರಕ್ರಿಯಲ್ಲಿ ಕಂಡುಕೊಳ್ಳುವ ಪ್ರಯತ್ನಕ್ಕೆ ಒಂದು ಶಿಸ್ತಿನ ಬೋಧನೆ ಈ ಪತಂಜಲಿಯದು.

ಮನುಷ್ಯನ ಮನಸ್ಸು ಮತ್ತು ಅದರ ರಚನೆ, ಕಾರ್ಯ ಚಟುವಟಿಕೆಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು, ಈ ಎಲ್ಲವೂ ಪತಂಜಲಿಯ ಗಮನದಲ್ಲಿದೆ. ಅದು ಈ ಮನುಷ್ಯನ ಜೈವಿಕ, ಸಾಮಾಜಿಕ ಪರಿಸರಗಳು ವಿಧಿಸಿರುವ ನಿರ್ಬಂಧಗಳಿಂದ ಸೀಮಿತ ಚೌಕಟ್ಟಿನ ವಸ್ತುವಾಗಿದೆ ಎಂಬ ಅರಿವು ಇದೆ. ಅದನ್ನು ಎಲ್ಲಾ ಬಗೆಯ ಬಂಧನಗಳಿಂದ ಮುಕ್ತವಾಗಿಸುವ ಕಾಳಜಿ ಇದೆ. ಈ ಕಾಳಜಿಯು ಯಾರನ್ನೂ ದ್ವೇಷಿಸದಿರಲು, ಆಲೋಚನೆಯಲ್ಲಿಯೂ ಹಿಂಸೆ ಮಾಡದಿರಲು ಎಚ್ಚರಿಕೆಯನ್ನು ನೀಡುತ್ತದೆ.

ಸೃಷ್ಟಿಕರ್ತ ಎಂಬ ಭ್ರಮೆಯನ್ನು ಒಮ್ಮಿಂದೊಮ್ಮೆಲೇ ತಳ್ಳಿ ಹಾಕುತ್ತದೆ. ಯಾರೂ ಸೃಷ್ಟಿಸಿದ್ದಲ್ಲದ ಈ ಪ್ರಕೃತಿಯು ಯಾವಾಗಲೂ ಇತ್ತು. ಕಾಲದಿಂದ ಕಾಲಕ್ಕೆ ನಿರಂತರವಾಗಿ ರೂಪಾಂತರಗೊಳ್ಳುತ್ತಲೇ ಇರುತ್ತದೆ ಎಂಬ ಸ್ಪಷ್ಟತೆ ಪತಂಜಲಿಗೆ ಇದೆ. ಅದಕ್ಕೆ ಅದರದೇ ಆದಂತಹ ಗುಣಗಳಿವೆ, ಕ್ರಮಗಳಿವೆ. ಇದರ ಸೃಷ್ಟಿಯೇ ಆಗಿರುವ ಮನುಷ್ಯನ ಶರೀರಕ್ಕೂ ಮತ್ತು ಅವನ ಮನಸ್ಸಿಗೂ ಅದೇ ಗುಣಧರ್ಮಗಳಿವೆ. ಹಾಗಾಗಿ ಅರಿತು ಅಭ್ಯಾಸ ಮಾಡಿರೆಂದು ಪತಂಜಲಿ ಬೋಧಿಸುತ್ತಾನೆ. ಈ ಯೋಗ ಸೂತ್ರವು ಬೇಡುವುದು ಶ್ರದ್ಧೆಯನ್ನು, ನಂಬಿಕೆಯನ್ನಲ್ಲ. ಚೈತನ್ಯ, ಆಲೋಚನೆ, ಏಕಾಗ್ರತೆ ಮತ್ತು ಅರಿವು ಯೋಗದ ಗುರಿಯನ್ನು ಸಾಧಿಸುವುದು. ಸ್ಥೂಲ ಪರಿಸರವು ಮನುಷ್ಯನ ಮನಸ್ಸನ್ನು ತನ್ನ ಪ್ರಭಾವಕ್ಕೆ ವಶಪಡಿಸಿಕೊಂಡು ಚಂಚಲವನ್ನು ಉಂಟುಮಾಡುತ್ತದೆ. ಆದರೆ ಅವನು ಎಚ್ಚೆತ್ತುಕೊಂಡು ಅವುಗಳನ್ನು ಮೀರಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣೆ, ಧ್ಯಾನ ಮತ್ತು ಸಮಾಧಿ ಎಂಬ ಯೋಗದ ಎಂಟು ಅಂಗಗಳನ್ನು ಅನುಷ್ಠಾನ ಮಾಡಿದರೆ ಮನುಷ್ಯನ ಮನಸ್ಸು ಮತ್ತು ಶರೀರವು ತಾನು ಒಳಪಟ್ಟಿರುವ ಅಶುದ್ಧಿಯಿಂದ ಮುಕ್ತವಾಗುತ್ತದೆ ಎಂಬುದು ಇದರ ಧೋರಣೆ. ಇವುಗಳಲ್ಲಿ ಇರುವುದಾದರೂ ಏನು: ಅಹಿಂಸೆ, ಸತ್ಯ, ಕದಿಯದಿರುವುದು, ಅಪಹರಿಸದಿರುವುದು, ಶಕ್ತಿಯನ್ನು ಪೋಲು ಮಾಡಿಕೊಳ್ಳದಿರುವಂತಹ ಬ್ರಹ್ಮಚರ್ಯವೇ ಯಮ ಅಥವಾ ರೀತಿಗಳು. ಹೀಗೆ ಮನುಷ್ಯನು ತನ್ನ ಮನಸ್ಸನ್ನು ಮುಕ್ತವಾಗಿಯೂ ಮತ್ತು ಆರೋಗ್ಯವಾಗಿಯೂ ಇಟ್ಟುಕೊಂಡು ಔನ್ನತ್ಯಕ್ಕೆ ಬೇಕಾದುದಕ್ಕೆ ತನ್ನ ಚಟುವಟಿಕೆಗಳನ್ನು ಕೇಂದ್ರೀಕರಿಸಿಕೊಳ್ಳಲು ಸೂತ್ರಗಳನ್ನು ಒದಗಿಸುವುದು ಇದರ ಇರಾದೆ.

ಯಾರು ಅಭ್ಯಾಸ ಮಾಡುತ್ತಾರೋ ಅವರಿಗೆ ಈ ಯೋಗಸಾಧನೆಯು ಲಭ್ಯ. ಒಂದೊಂದು ಸೂತ್ರವೂ ಮನೋವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಮ್ಮದೇ ಮನಸ್ಸನ್ನು ಅರಿಯಲು ಮತ್ತು ಸಶಕ್ತಗೊಳಿಸಿಕೊಳ್ಳಲು ನೆರವಾಗುವ ಮಾರ್ಗಸೂತ್ರಗಳೇ ಮತ್ತು ಒಳನೋಟಗಳೇ.

ಮಾನಸಿಕ ಸಶಕ್ತತೆಗೆ ಮತ್ತು ಸ್ವಾಸ್ಥ್ಯಕ್ಕೆ ಒಂದೆರಡು ಸೂತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.

ಮೈತ್ರೀಕರುಣಾಮುದಿತೋಪೇಕ್ಷಾಣಾಂಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್ (1.33)

ಸುಖದೊಂದಿಗೆ ಮೈತ್ರಿ, ದುಃಖದೊಂದಿಗೆ ಕರುಣೆ, ಪುಣ್ಯದಲ್ಲಿ ಹರ್ಷ, ಪಾಪದಲ್ಲಿ ಉಪೇಕ್ಷೆಗಳ ಭಾವನೆಗಳನ್ನು ಬೆಳೆಸಿಕೊಂಡಲ್ಲಿ ಚಿತ್ತಪ್ರಸಾದವಾಗುವುದು.

ಅಹಿಂಸೆಯನ್ನು ಮಹಾವ್ರತವನ್ನಾಗಿಸಿಕೊಳ್ಳುವ ಬಗೆ ಇದು ಹೇಳುವುದನ್ನು ನೋಡಿ, “ಜಾತಿದೇಶಕಾಲಸಮಯಾನವಚ್ಛಿನ್ನಾಃ ಸಾರ್ವಭೌಮ ಮಹಾವ್ರತಮ್” (2.31) ಒಂದು ಜೀವಕ್ಕೆ ಹಾನಿ ಮಾಡುವುದಿಲ್ಲ ಎಂದರೆ ಅದು ಯಾವ ಜಾತಿಯದೇ ಆಗಿರಲಿ, ಯಾವ ಪ್ರದೇಶದ್ದೇ ಆಗಿರಲಿ, ಯಾವುದೇ ಸಂದರ್ಭವೇ ಆಗಿರಲಿ ಮಾಡಕೂಡದು. ಯಾವುದೇ ರೀತಿಯ ಪರಿಮಿತಿಗಳಿಲ್ಲದ ಅಹಿಂಸೆಯು ಮಹಾವ್ರತವಾಗುತ್ತದೆ. ಸ್ವಜನರಿಗೆ ಕರುಣೆ, ಮತ್ತೊಬ್ಬರಿಗೆ ಕ್ರೌರ್ಯ ಎಂಬುದನ್ನು ನೇರವಾಗಿ ವಿರೋಧಿಸುತ್ತಾ ಪತಂಜಲಿ ಜೀವಪರವಾಗುತ್ತಾನೆ. ಮನುಷ್ಯನ ಮನಸ್ಸು ಜೀವಪರವಾಗಿರಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ.

“ವಿತರ್ಕಭಾಧನೇ ಪ್ರತಿಪಕ್ಷಭಾವನಮ್” (2.33) ವ್ಯಕ್ತಿತ್ವ ವಿಕಸನದ ನವೀನ ತರಬೇತಿಗಳು ಈ ಸೂತ್ರವನ್ನು ಪಾಸಿಟಿವ್ ಥಿಂಕಿಂಗ್ ಎಂದು ಮುಂದಿಡುತ್ತವೆ. ‘ಮನಸ್ಸು ವ್ಯತಿರಿಕ್ತವಾದ ಉದ್ದೇಶಗಳಿಂದ ತಡೆಯಲ್ಪಟ್ಟಾಗ ಅವುಗಳ ವಿರೋಧ ಪಕ್ಷಗಳನ್ನು ಭಾವಿಸಿಕೊಳ್ಳಬೇಕು’ ಎಂದು ಸೂತ್ರ ಹೇಳುತ್ತದೆ. ನನಗೆ ಸೋಲಿನ ಭೀತಿ ಆವರಿಸಿದಾಗ ಜಯವನ್ನು ಭಾವಿಸುವುದು, ಸಾವಿನ ಭಯ ಬಾಧಿಸುವಾಗ ಬದುಕಿನ ಇಚ್ಛೆಯನ್ನು ಭಾವಿಸುವುದು, ದ್ವೇಷದಿಂದ ಮನಸ್ಸು ಕುದಿಯುವಾಗ ಪ್ರೇಮವನ್ನು ದ್ವೇಷದ ಬದಲಾಗಿ ತಂದುಕೊಳ್ಳುವ ಅಭ್ಯಾಸವನ್ನು ಸೂತ್ರ ಸೂಚಿಸುತ್ತದೆ.

“ಅಹಿಂಸಾಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ” (2.35)

ಅಹಿಂಸೆಯಲ್ಲಿ ಮನುಷ್ಯನು ಪ್ರತಿಷ್ಠಾಪಿತನಾದ ಮೇಲೆ ಅವನ ಸಾನ್ನಿಧ್ಯದಲ್ಲಿ ವೈರವು ಇರುವುದಿಲ್ಲ. ಅಂದರೆ ಸೂತ್ರವು ಹೇಳುವಂತೆ ವ್ಯಕ್ತಿಯು ಅಹಿಂಸೆಯನ್ನು ಮಹಾವ್ರತವನ್ನಾಗಿ ಸ್ವೀಕರಿಸಿ ತಾನು ಇರುವ ಎಡೆಯನ್ನೆಲ್ಲಾ ವೈರತ್ವದಿಂದ ಮುಕ್ತ ಮಾಡಲಿ ಎಂದು.

ವೀರ್ಯ ಎಂದರೆ ಶಕ್ತಿ ಎಂದೂ, ಈಶ್ವರನೆಂದರೆ ಇಡೀ ಅಸ್ತಿತ್ವವೆಂದೂ, ಆತ್ಮವೆಂದರೆ ವ್ಯಕ್ತಿಗತವಾದ ಚೈತನ್ಯವೆಂದೂ ಹೀಗೆ ಹಲವು ಸರಳ ಅರ್ಥಗಳಲ್ಲಿ ಸೂತ್ರಗಳನ್ನು ಗ್ರಹಿಸುತ್ತಾ ಹೋದರೆ ತನ್ನ ಮನಸ್ಸನ್ನು ಮತ್ತು ಬದುಕನ್ನು ಸಶಕ್ತವಾಗಿ ಸುಂದರಗೊಳಿಸಿಕೊಳ್ಳಲು ಪತಂಜಲಿ ಯೋಗಸೂತ್ರವು ಮಾರ್ಗದರ್ಶಿಯೇ ಸರಿ.

ಮೈತ್ರ್ಯಾದಿಷು ಬಲಾನಿ (4.23) ಮೈತ್ರಿಯಲ್ಲಿ ಬಲವುಂಟಾಗುತ್ತದೆ ಎಂಬುದು ಕೂಡ ಅಷ್ಟೇ ಸರಳ ಮತ್ತು ಸತ್ಯದ ಮಾತು.


ಇದನ್ನು ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...