ಭಾರತ್ ಗೌರವ್ ಸರಣಿಯ ಅಡಿಯಲ್ಲಿ ಆಗಸ್ಟ್ 24 ರಂದು ಓಡಬೇಕಿದ್ದ ಎರಡನೇ ‘ರಾಮಾಯಣ ಯಾತ್ರಾ ರೈಲು’ ಕಡಿಮೆ ಸಂಖ್ಯೆಯ ಪ್ರಯಾಣಿಕರ ಕಾರಣದಿಂದ ರದ್ದುಗೊಂಡಿದೆ ಎಂದು ಮಂಗಳವಾರ ವರದಿಯಾಗಿದೆ. ಈ ಬಗ್ಗೆ IRCTC ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಈ ಹಿಂದೆ 20 ದಿನಗಳ ಕಾಲ ‘ಭಾರತ್ ಗೌರವ್’ ಪ್ರವಾಸಿ ರೈಲು ಮೂಲಕ ‘ಶ್ರೀ ರಾಮಾಯಣ ಯಾತ್ರೆ’ ಧಾರ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಭಾರತ್ ಗೌರವ್ ಸರಣಿಯ ಅಡಿಯಲ್ಲಿ ಆಗಸ್ಟ್ 24 ರಂದು ಓಡಬೇಕಿದ್ದ ಎರಡನೇ ರಾಮಾಯಣ ಯಾತ್ರಾ ರೈಲು ಕಡಿಮೆ ಸಂಖ್ಯೆಯ ಪ್ರಯಾಣಿಕರ ಕಾರಣದಿಂದ ರದ್ದುಗೊಂಡಿದೆ” ಎಂದು IRCTC ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಪ್ರವಾಸವು ಆಗಸ್ಟ್ 24 ರಿಂದ ಪ್ರಾರಂಭವಾಗಬೇಕಿತ್ತು. ಹೊಸ ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ರೈಲು ಹೊರಡುವ ಒಂದು ದಿನದ ಮೊದಲು ಅದನ್ನು ರದ್ದುಗೊಳಿಸಲಾಗಿದೆ.
The second Ramayana Yatra train which was to run on 24th August has now been cancelled due to less number of passengers. This was the second train of the Ramayana series under Bharat Gaurav: IRCTC pic.twitter.com/qzoFilFWWy
— ANI (@ANI) August 22, 2022
ಅಯೋಧ್ಯೆ, ಜನಕಪುರ, ಸೀತಾಮರ್ಹಿ, ಬಕ್ಸರ್, ವಾರಣಾಸಿ, ಪ್ರಯಾಗ್ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಸೇರಿದಂತೆ ರಾಮನಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳನ್ನು ಒಳಗೊಂಡು ಈ ರೈಲು ಪ್ರವಾಸವನ್ನು ಪರಿಚಯಿಸಲಾಗಿತ್ತು. ದೆಹಲಿಯ ಸಫ್ದರ್ಜಂಗ್, ತುಂಡ್ಲಾ, ಗಾಜಿಯಾಬಾದ್, ಅಲಿಗಢ, ಕಾನ್ಪುರ್ ಮತ್ತು ಲಕ್ನೋದಿಂದ ಪ್ರಯಾಣಿಕರು ರೈಲು ಹತ್ತಬಹುದಾಗಿತ್ತು.
ಹೊಟ್ಟೆಗೆ ಹಿಟ್ಟಿಲ್ಲ ಈಗಿನ ಪರಿಸ್ಥಿತಿಯಲ್ಲಿ ಮತ್ತೆ ರಾಮಾಯಣ ಯಾತ್ರೆ ಯಾರಿಗೆ ಬೇಕು……ಜನರು ಸ್ವಲ್ಪ ವಿದ್ಯಾವಂತರಾಗಿದ್ದಾರೆ.