Homeಕರ್ನಾಟಕಝೀರೋ‌ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ಒಂದೆಡೆ... ಒಂದಿಡೀ ಊರಿಗೆ ಬೀಗ ಹಾಕಿಸಿದ ಮಂತ್ರಿ ಇನ್ನೊಂದೆಡೆ...!!

ಝೀರೋ‌ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ಒಂದೆಡೆ… ಒಂದಿಡೀ ಊರಿಗೆ ಬೀಗ ಹಾಕಿಸಿದ ಮಂತ್ರಿ ಇನ್ನೊಂದೆಡೆ…!!

- Advertisement -
- Advertisement -

ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ತನಗೆ ಝೀರೋ‌ ಟ್ರಾಫಿಕ್ ಬೇಡವೆಂದು ಜನತೆಯ ಪ್ರಶಂಸೆಗೆ ಪಾತ್ರವಾಗಿದ್ದರು. ಆ ಬಳಿಕ ಯಾವುದೋ ಒಂದು ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ತನ್ನನ್ನು ತಾನು Common Man (CM) ಎಂದು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.‌ ಅದು ಗಿಮಿಕ್ಕೋ, ಇನ್ನೇನೋ ಎನ್ನಿ.. ಆದರೂ ಅವರ ಮಾತಿಗೆ ಅವರ ಅಧಿಕಾರಾವಧಿ ಮುಗಿಯುವವರೆಗೆ ಬದ್ಧರಾಗಿದ್ದರೆ ಅವರು ಆ ವಿಷಯದಲ್ಲಿ ಗೌರವಾರ್ಹರಾಗಿಯೇ ಉಳಿಯುತ್ತಾರೆ.

ನಮ್ಮ ದೇಶದಲ್ಲಿ ಮಾತ್ರ ಆಡಳಿತದಲ್ಲಿರುವವರು More equal than the common man. ಕೆನಡಾ, ಉರುಗ್ವೆ, ಲ್ಯಾಟಿನ್‌ ಅಮೆರಿಕಾದ ಅನೇಕ ದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು, ಪ್ರಧಾನಿಗಳು ಕಾಮನ್ ಮ್ಯಾನ್‌ನಂತೆಯೇ ಜೀವಿಸುತ್ತಾರೆ. ಉರುಗ್ವೆ ದೇಶದ ಅಧ್ಯಕ್ಷರಾಗಿದ್ದ ಹೊಸೈ ಮುಕ್ಸಿಕ ತನ್ನ ತೋಟದಲ್ಲಿ ಸ್ವಯಂ ದುಡಿಯುತ್ತಿದ್ದರು. ತನ್ನ ಕಾರನ್ನು ತಾನೇ ಚಲಾಯಿಸುತ್ತಾ ಅಧ್ಯಕ್ಷರ ಕಚೇರಿಗೆ ಯಾವುದೇ ಬೆಂಗಾವಲು ವಾಹನವಿಲ್ಲದೇ ಹೋಗುತ್ತಿದ್ದರು. ಅವರೆಲ್ಲರ ಪ್ರಕಾರ ಝೀರೋ‌ ಟ್ರಾಫಿಕ್, ಹತ್ತಾರು ಬೆಂಗಾವಲು ವಾಹನ, ಕೈಗೊಂದು ಕಾಲಿಗೊಂದು ಆಳು ಎಂದರೆ ಅದು ನ್ಯಾಶನಲ್ ವೇಸ್ಟ್.. ಅದು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಕೂಡಾ.

ಝೀರೋ‌ ಟ್ರಾಫಿಕನ್ನು, (ನ)ಗಣ್ಯ ವ್ಯಕ್ತಿ ಭೇಟಿ‌ ಕೊಡುವ ಊರಿಗೆ ಬೀಗ ಹಾಕುವುದನ್ನು ಜನರು ತಮ್ಮ ಬೇಡಿಕೆ ಈಡೇರಿಕೆಗಾಗಿ, ತಮ್ಮ ಅಸಮಾಧಾನ ತೋರ್ಪಡಿಕೆಗಾಗಿ ಪ್ರತಿಭಟಿಸುವ ಕಾರಣ ಮುಂದಿಟ್ಟು ಸಮರ್ಥಿಸುತ್ತಾರೆ. ಅಧಿಕಾರದಲ್ಲಿ‌ ಕೂತವ ಟೀಕೆ, ಪ್ರತಿಭಟನೆಗಳನ್ನು ಎದುರಿಸಲು ಸದಾ ತಯಾರಿರಬೇಕು. ಯಾಕೆಂದರೆ ಅವರು ನಮ್ಮಿಂದ ಆಯ್ಕೆಗೊಂಡವರು. ನಮ್ಮ ಹಕ್ಕುಗಳನ್ನು ಕೇಳುವ, ಅದಕ್ಕಾಗಿ‌ ಪ್ರತಿಭಟಿಸುವ ಹಕ್ಕು ನಮಗೆ ನಮ್ಮ ಸಂವಿಧಾನವೇ ಕೊಟ್ಟಿದೆ. ಪ್ರತಿಭಟನೆಗಳನ್ನು ದಮನಿಸುವುದು ಪ್ರಜಾತಂತ್ರಕ್ಕೆಸಗುವ ಅಪಚಾರ.
ಇರಲಿ ವಿಷಯಕ್ಕೆ ಬರುತ್ತೇನೆ.

ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಹಲ್ಲೆ ಪ್ರಕರಣ- ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದ ಹೋರಾಟಗಾರರು

ಇಂದು ನಮ್ಮ ಪಕ್ಕದೂರು ಕೊಣಾಜೆಯಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಆಗಮಿಸಿದ್ದಾರೆ. ಅದಕ್ಕಾಗಿ ಇಡೀ ಕೊಣಾಜೆಗೆ ಪೋಲೀಸರು ಬೇಲಿ ಹಾಕಿದ್ದಾರೆ. ನನ್ನೂರು ಪಜೀರಿಗೆ ಹೋಗಬೇಕೆಂದರೆ ನಮಗೆ ಸುಲಭ ಮಾರ್ಗ ಯುನಿವರ್ಸಿಟಿ ಕ್ಯಾಂಪಸ್‌ನ ಮಧ್ಯೆ ಹಾದು ಹೋಗುವ ರಸ್ತೆ. ಇಂದು ಬೆಳಗ್ಗೆ ಬಂದ್ ಮಾಡಿದ ಆ ರಸ್ತೆಯನ್ನು ಈ ಬರಹ ಬರೆಯುತ್ತಿರುವವರೆಗೂ ತೆರೆಯಲಾಗಿಲ್ಲ. ಯಾಕೆಂದರೆ ಅಶ್ವಥ್ ನಾರಾಯಣ್ ಯುನಿವರ್ಸಿಟಿಯಲ್ಲಿ‌ ಕಾರ್ಯಕ್ರಮವೊಂದಕ್ಕೆ ಬಂದಿದ್ದಾರೆ. ಕಾರ್ಯಕ್ರಮ ಯಾವತ್ತೋ ಮುಗಿದಾಗಿದೆ. ಆದರೆ ಅವರು ಯುನಿವರ್ಸಿಟಿಯ ಗೆಸ್ಟ್ ಹೌಸ್‌ನಲ್ಲಿ ಮೀಟಿಂಗ್‌ನಲ್ಲಿದ್ದಾರೆ ಎಂಬ ಕಾರಣ ನೀಡಿ ಇನ್ನೂ ಊರಿನ ಬೀಗ ತೆರೆದಿಲ್ಲ.

ಇದರಿಂದಾಗಿ ನಾವು ಪಜೀರಿಗರು ಮೂರು ಕಿಲೋ‌ಮೀಟರ್ ಸುತ್ತಿ ಬಳಸಿ ನಮ್ಮೂರಿಗೆ ಹೋಗಬೇಕು. ಇನ್ನು ಕೊಣಾಜೆಯ ಮತ್ತು ಯುನಿವರ್ಸಿಟಿಯ ಸುತ್ತ ಮುತ್ತಲಿರುವ ಹಳ್ಳಿಗರಿಗೆ ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಊರಿಂದ ಹೊರ ಹೋಗದಂತೆ ಪೋಲೀಸರು ತಡೆಯುತ್ತಿದ್ದಾರೆ. ಹೊರಗಡೆ ಕೆಲಸಕ್ಕೆ ಹೋದವರು ಮಧ್ಯಾಹ್ನ ತಮ್ಮ ಕೆಲಸ ಮುಗಿಸಿ ಬಂದಿದ್ದರೆ ಅವರು ಅವರ ಮನೆಗೂ ಹೋಗುವಂತಿಲ್ಲ.. ಇದೆಂತಹ ನ್ಯಾಯ ಸ್ವಾಮೀ…? ಅಸೈಗೋಳಿಯಲ್ಲಿ ಇಳಿದು ಆಟೋದಲ್ಲಿ ಹೋಗಲೂ ಅಲ್ಲಿನ ಜನರಿಗೆ ಪೋಲೀಸರು ಬಿಡುತ್ತಿಲ್ಲ. ಇಲ್ಲಿಗೇ ಮುಗಿಯಲಿಲ್ಲ.. ಇನ್ನು ಆ ಮಾರ್ಗವಾಗಿ ಹರೇಕಳ, ಪಾವೂರು, ಇನೋಳಿ, ಮಲಾರ್, ಗ್ರಾಮಚಾವಡಿ ಮುಂತಾದ ಊರುಗಳಿಗೆ ಹೋಗುವ ಬಸ್‌ಗಳು ಮೂರು ಕಿಲೋ ಮೀಟರ್ ಸುತ್ತು ಹೊಡೆದು ನಡುಪದವು ಕ್ರಾಸ್, ಕಂಬಳಪದವು, ಪಜೀರು ದಾರಿಯಾಗಿ ಹೋಗಬೇಕು. ಸ್ವಂತ ವಾಹನವಿರುವವರು, ಬಸ್ಸಲ್ಲಿ ಹೋಗುವವರು ಹೇಗೂ ಸುತ್ತಿ ಬಳಸಿ ಹೋಗುತ್ತಾರೆ.

ಆದರೆ, ಪೋಲೀಸರು ಬೀಗ ಹಾಕಿದ ಊರಿನ ವೃದ್ಧರು, ರೋಗಿಗಳು ನಡೆದುಕೊಂಡೇ ಹೋಗಬೇಕು.. ಆಕಸ್ಮಾತ್ ಯಾರಾದರೂ, ಗರ್ಬಿಣಿಯರನ್ನು, ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕಾದರೆ ಅವರನ್ನು ಹೊತ್ತುಕೊಂಡೇ ಹೋಗಬೇಕಷ್ಟೇ..?

ತನ್ನನ್ನು ತಾನು ಕಾಮನ್ ಮ್ಯಾನ್ ಎಂದು ಘೋಷಿಸಿದ, ಝೀರೋ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ತನ್ನ ಕೈ ಕೆಳಗಿನ ಮಂತ್ರಿಯ ಈ ಘನಂದಾರಿ ಕೆಲಸಕ್ಕೇನೆನ್ನುತ್ತಾರೆ…? ನಮ್ಮೂರಲ್ಲಿ ನಾನು ಹುಟ್ಟಿದಂದಿನಿಂದಲೂ ಯುನಿವರ್ಸಿಟಿ ಇರುವುದರಿಂದ ನಮ್ಮೂರಿಗೆ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರು ಬರುವುದು ಸಾಮಾನ್ಯ. ನಾನು ನನ್ನ ಈವರೆಗಿನ ಬದುಕಲ್ಲಿ ಯಾವೊಬ್ಬ ಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲೀ, ರಾಜ್ಯಪಾಲನಾಗಲೀ ಊರಿಗೆ ಬೀಗ ಹಾಕಿಸಿದ್ದನ್ನು ನೋಡಿಲ್ಲ. ಯುನಿವರ್ಸಿಟಿ ಕ್ಯಾಂಪಸ್ ಒಳಗಡೆ ಈ ಹಿಂದೆಯೂ ಮಂತ್ರಿಗಳು ಬಂದಾಗ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸಿದ್ದಾರೆ. ಇಂದು ಕ್ಯಾಂಪಸ್ ಫ್ರಂಟ್‌ನ ಹುಡುಗರು ಪ್ರತಿಭಟಿಸಿದ್ದು ಮೊದಲಲ್ಲ. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ‌ ಕೂತವನು ಪ್ರತಿಭಟನಾಕಾರರ ಅಹವಾಲು ಆಲಿಸಬೇಕೇ ಹೊರತು ಹೇಡಿಯಂತೆ ಊರಿಗೆ ಬೀಗ ಹಾಕುವುದಲ್ಲ.
ಹಿಂದೆಲ್ಲಾ ಗಣ್ಯ ವ್ಯಕ್ತಿಗಳು ಕ್ಯಾಂಪಸ್‌ಗೆ ಬರುವುದಕ್ಕಿಂತ ಐದು ನಿಮಿಷ ಮುಂಚೆ ವಾಹನಗಳನ್ನು ತಡೆಯುತ್ತಿದ್ದರು.. ಈ ರೀತಿ ಊರಿಗೇ ಬೀಗ ಹಾಕಿದ ಮೊದಲ ಮಂತ್ರಿ ನಮ್ಮ ಸನ್ಮಾನ್ಯ ಅಶ್ವಥ್ ನಾರಾಯಣರೊಬ್ಬರೇ.. ಇದನ್ನು ಹೀಗೇ ಮುಂದುವರಿಯಲು ಬಿಟ್ಟರೆ ಇನ್ನು ಈ ಪರಿಪಾಠವನ್ನು ಎಲ್ಲರೂ ಮುಂದುವರಿಸುತ್ತಾರೆ.

ಇಸ್ಮತ್ ಪಜೀರ್


ಇದನ್ನೂ ಓದಿ: ಬೆಳಗಾವಿ: ಪಾಲಿಕೆ ಚುನಾವಣೆಗೆ ಉಚಿತ ಶವಸಂಸ್ಕಾರದ ಭರವಸೆ ನೀಡಿದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಮ್ಮ ಶಾಸಕರು, ಮಂತ್ರಿಗಳು ರಾಜಮಹಾರಾಜರನ್ನು ಮೀರಿಸುವಂತೆ ದರ್ಬಾರು ನಡೆಸುತ್ತಿದ್ದಾರೆ. ಇದನ್ನು ಮುಸ್ಲಿಮರು ವಿರೋದಿಸಿದರೆ, ಅವರು ತಾಲಿಬಾನ್! ಈ ರೀತಿಯ ಮೂರ್ಕರ ಬೋಪರಾಕಿನಿಂದ ಈ ದೇಶ ಇಂದು ಅದೋಗತಿಗೆ ಇಳಿದಿದೆ.

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...