ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ರೈತ ಸಂಘಟನೆಗಳು ಆರೋಪಿಸಿರುವ ಬೆನ್ನಲ್ಲೆ, ಗುರುವಾರ ಮಧ್ಯರಾತ್ರಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಮತ್ತು ಮೋದಿಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಟ್ವಿಟರ್ನಲ್ಲಿ #FarmerTikaitVsModiDakait, #Modi_Khayar_Hy ಎಂದು ಟ್ರೆಂಡಿಂಗ್ ಆಗುತ್ತಿದೆ.
ಟ್ವಿಟರ್ ಟ್ರೆಂಡಿಂಗ್ನಲ್ಲಿ ಈ ಎರಡೂ ಹ್ಯಾಶ್ಟ್ಯಾಗ್ಗಳು ಮೊದಲ ಸ್ಥಾನದಲ್ಲಿವೆ. #मोदी_कायर_हैं ಎನ್ನುವ ಹ್ಯಾಶ್ಟ್ಯಾಗ್ ಬಳಸಿ ಸುಮಾರು 9 ಲಕ್ಷಕ್ಕೂ ಹೆಚ್ಚು ಜನ ಟ್ವೀಟ್ ಮಾಡಿದ್ದರು. ಇದನ್ನು ಕೂಡಲೆ ಟ್ವಿಟರ್ನಿಂದ ಮರೆಮಾಚಲಾಗಿದೆ. ಆದರೆ ಇದು 6 ಲಕ್ಷ ಇದ್ದಾಗ ತೆಗೆದ ಸ್ಕ್ರೀನ್ಶಾಟ್ ಇಲ್ಲಿದೆ.
ಈ ವರದಿ ಬರೆಯುವ ವೇಳೆಗೆ #FarmerTikaitVsModiDakait ಎನ್ನುವ ಹ್ಯಾಶ್ಟ್ಯಾಗ್ ಬಳಸಿ ಸುಮಾರು 2 ಲಕ್ಷಕ್ಕೂ ಹೆಚ್ಚು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ಮುಜಫರ್ ನಗರದ ಸಿಸೌಲಿಯಲ್ಲಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಮನೆ ಮುಂದೆ ನೆರೆದ ಜನಸಂದಣಿಯು “ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ಹೋರಾಟ ಬೆಂಬಲಿಸಲು ದೆಹಲಿಗೆ ಮೆರವಣಿಗೆ ಹೊರಡಲು ಸಿದ್ದ” ಎಂದು ಗುರುವಾರ ರಾತ್ರಿ ಘೋಷಿಸಿದ್ದರು.
ಗಾಜಿಪುರ್ ಗಡಿಯಲ್ಲಿ ರಾಕೇಶ್ ಟಿಕಾಯತ್ ರೈತ ಹೋರಾಟ ಮುಂದುವರೆಸುತ್ತಿದ್ದಾರೆ. ಆದರೆ ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಅಹಿತಕರ ಘಟನೆ ಜರುಗಿದ ನಂತರ ರೈತ ಹೋರಾಟ ಹತ್ತಿಕ್ಕಲು ಉತ್ತರ ಪ್ರದೇಶ ಪೊಲೀಸರು ಯತ್ನಿಸುತ್ತಿದ್ದು, ಇಂದು ಅವರು ಅಲ್ಲಿಂದ ತೆರವು ಮಾಡಬೇಕೆಂದು ಒತ್ತಾಯಿಸಿದ್ದರು. ಗಡಿಯ ಜನರಿಗೆ ನೀರು, ವಿದ್ಯುತ್ ಸಂಪರ್ಕ ಕಿತ್ತು ಹಾಕಲಾಗಿತ್ತು. ನಿನ್ನೆ ರಾತ್ರಿ ಕೆಲವೆಡೆ ಲಾಠೀ ಚಾರ್ಜ್ ಸಹ ಮಾಡಲಾಗಿತ್ತು.
ಇದನ್ನೂ ಓದಿ: ʼಬಾರ್ಡರ್ʼಗಳಲ್ಲಿ ರಾತ್ರಿ ಆಗಿದ್ದೇನು? – ಗ್ರೌಂಡ್ ರಿಪೋರ್ಟ್
ಇಂದು ಶತಾಯ ಗತಾಯ ರೈತರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದಾಗ ರೈತ ಮುಖಂಡ ರಾಕೇಶ್ ಟಿಕಾಯತ್ ನಮ್ಮ ಮೇಲೆ ಗುಂಡು ಹಾರಿಸಿದರೂ ಸರಿಯೇ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ ಪೊಲೀಸರು ನಮ್ಮನ್ನು ತೆರವುಗೊಳಿಸಿದರೆ ನಮ್ಮ ಸಾವಿಗೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಹಳಷ್ಟು ರೈತರು ಕೆರಳಿದ್ದು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಅವರೆಲ್ಲರೂ ಸದ್ಯಕ್ಕೆ ಟಿಕಾಯತ್ ಮನೆ ಮುಂದೆ ಜಮಾಯಿಸಿ ಹೋರಾಟಕ್ಕೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.
ಈ ಘಟನೆಯಿಂದ ಟ್ವಿಟರ್ನಲ್ಲಿ ರಾಕೇಶ್ ಟಿಕಾಯತ್ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಭೋಮ ರಾಮ್ ಮಲ್ಯ ಎಂಬುವವರು ಟ್ವೀಟ್ ಮಾಡಿ, “ನನ್ನ ಹಳ್ಳಿಯವರು ನೀರು ತಂದುಕೊಡುವವರೆಗೆ ನಾನು ನೀರನ್ನೂ ಕುಡಿಯುವುದಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಇದು ಭಾರತೀಯ ರೈತರಿಗೆ ಸುಲಭವಲ್ಲ” ಎಂದು ಬರೆದುಕೊಂಡಿದ್ದಾರೆ.
It's not too Easy To be A Indian Farmers ?
When tikait sir said “ I won’t drink water until my villagers bring it for me ! “
That hit hard!!??????#मोदी_कायर_है #FarmerTikaitVsModiDakait pic.twitter.com/Avj0Pbita9 pic.twitter.com/PNSurM1z4e— Bhoma Ram Mayla (@Bhoma_Ram_Mayla) January 29, 2021
ಮಯಂಕ್ ಎಂಬುವವರು ಟ್ವೀಟ್ ಮಾಡಿ, “ಕೆಂಪುಕೋಟೆಯ ಬಳಿ ನಡೆದ ಯೋಜಿತ ಪಿತೂರಿಯಿಂದ ರೈತರ ಹೋರಾಟವನ್ನು ಮಣಿಸಬಹುದು ಎಂದು ಅವರು ಭಾವಿಸಿದ್ದರು. ಈಗ ಅವರಿಗೆ ಒಗ್ಗಟ್ಟಿನ ಅರ್ಥ ಮತ್ತು ರೈತರ ಶಕ್ತಿಯ ಬಗ್ಗೆ ತಿಳಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
They thought They can break the Protest by Doing Their well planned Drama At Red Fort
Now it's time to Tell them the Meaning of UNITY ❤️ and the Power of FARMERS? #FarmerTikaitVsModiDakait@PankajPuniaINC
pic.twitter.com/IJu42IgjvB— MAYANK PAREEK ?? (@MayankpareekINC) January 29, 2021
ಇದನ್ನೂ ಓದಿ: ರೈತ ಮುಖಂಡ ರಾಕೇಶ್ ಟಿಕಾಯತ್ ಮನೆ ಮುಂದೆ ನೆರೆದ ಜನಸಂದಣಿ: ರಾತ್ರಿಯೇ ದೆಹಲಿಗೆ ಮೆರವಣಿಗೆ…
ರಾಮ್ ಲಖನ್ ಸೆಹ್ರಾ ಟ್ವೀಟ್ ಮಾಡಿ, “ನೀನು ಇಂದು ಊಟ ಮಾಡುತ್ತಿದ್ದೀಯ ಎಂದರೆ ರೈತರಿಗೆ ಧನ್ಯವಾದ ಹೇಳು” ಎಂದು ಬರೆದುಕೊಂಡಿದ್ದಾರೆ.
If You're Able To Eat Today, Thank A Farmer…?????#मोदी_कायर_है#FarmerTikaitVsModiDakait#मोदी_कायर_हैं @kulvantmeena @MurariTodabhim pic.twitter.com/B3ElvbRT1h
— Ram Lakhan Sehra (@sehra_ram) January 29, 2021
ರವ್ನೀತ್ ಎಂಬುವವರು ಟ್ವೀಟ್ ಮಾಡಿ, “ನಮ್ಮ ಪೂರ್ವಜರು ಈ ದೇಶಕ್ಕಾಗಿ ನಿರ್ಮಿಸಿದ್ದವುಗಳನ್ನೆಲ್ಲಾ ಮೋದಿ ‘ಸ್ವಾಹ’ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
To all the good things our forefathers built for this nation …
Modi :- SWAAHA #FarmerTikaitVsModiDakait #मोदी_कायर_हैं pic.twitter.com/HRFCpEQlRI— Ravneet (@Ravneet89976473) January 29, 2021
ಇದನ್ನೂ ಓದಿ: ಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ ನಿಗ್ರಹಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು
ಸುಭಮ್ ವರ್ಮಾ ಟ್ವೀಟ್ ಮಾಡಿ, “ಗೋದಿ ಮೀಡಿಯಾಗಳು ಇಂತಹ ವೀಡಿಯೋಗಳನ್ನು ತೋರಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಡುತ್ತಿರುವವರಿಗೆ ಹೂಗಳಿಂದ ಸ್ವಾಗತ ಕೋರುತ್ತಿರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Media not showing that type of videos
Godi media#FarmerTikaitVsModiDakait #मोदी_कायर_हैं pic.twitter.com/cJ2bUBqnCj— subham verma Tmk (@SubhamTmk) January 29, 2021
ಜನವರಿ 26 ರಂದು ನಡೆದ ರ್ಯಾಲಿಯಲ್ಲಿ ಕೆಲವು ರೈತರ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ಸಿಖ್ ಧರ್ಮದ ಧ್ವಜವನ್ನು ಹಾರಿಸಿತ್ತು. ಇದು ದೇಶದಾದ್ಯಂತ ಸಂಚಲನ ಉಂಟುಮಾಡಿತ್ತು. ಇದು ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ನಡೆಸಿದ ಪಿತೂರಿ ಎಂದು ರೈತ ಸಂಘಟನೆಗಳು ಆರೋಪಿಸಿದ್ದವು. ಜೊತೆಗೆ ಪರ-ವಿರೋಧದ ಚರ್ಚೆಗೂ ಕಾರಣವಾಗಿತ್ತು. ಹಾಗೇಯೇ ಪ್ರತಿಭಟನೆಯ ವಿರುದ್ಧ ಇದ್ದ ಜನರಿಗಂತು ಇದು ಮೃಷ್ಟಾನ್ನ ಭೋಜನವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ.
ಅದೇನೇ ಇದ್ದರೂ ರಾಷ್ಟ್ರ ರಾಜಧಾನಿಯ ಗಡಿಯಲ್ಲಿರುಯವ ರೈತರು ಮಾತ್ರ ಎದೆಗುಂದದೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ಕೆಂಪುಕೋಟೆ ಪ್ರಕರಣ: ದೇಶದ್ರೋಹ ಪ್ರಕರಣ ದಾಖಲು – ತಲೆಮರೆಸಿಕೊಂಡ ನಟ ದೀಪು ಸಿಧು