Homeಮುಖಪುಟಕನ್ನಡ ರಾಜ್ಯೋತ್ಸವ ವಿ‍ಶೇಷ: ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು?

ಕನ್ನಡ ರಾಜ್ಯೋತ್ಸವ ವಿ‍ಶೇಷ: ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು?

ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ, ಭಾಷಾ ವೈವಿಧ್ಯ ಉಳಿದು ಬೆಳೆಯುತ್ತಿರಬೇಕು. ಒಟ್ಟಿನಲ್ಲಿ, ಕರ್ನಾಟಕದ ಪ್ರಜೆಗೆ ಘನತೆಯಿಂದ ತನ್ನ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿರಬೇಕು.

- Advertisement -
- Advertisement -

ನವೆಂಬರ್ 1, 2020 ಅರವತ್ತೈದನೇ ಕನ್ನಡ ರಾಜ್ಯೋತ್ಸವ ದಿನ. ಆದರೆ, ನಾವು ಅಂದರೆ ಕನ್ನಡಿಗರು ಅಥವಾ ಕರ್ನಾಟಕದ ಪ್ರಜೆಗಳು ಈ ಕನ್ನಡ ರಾಜ್ಯೋತ್ಸವವನ್ನು ಹೆಚ್ಚು ಸಂಭ್ರಮದಿಂದ ಆಚರಿಸಿ ಖುಷಿ ಪಡುವಂಥ ಸ್ಥಿತಿಯಲ್ಲಿದ್ದೇವೆಯೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಒಂದು ಮಟ್ಟದ ನಿರಾಸೆಯಾಗುವುದಂತೂ ನಿಜ. ಹಾಗಿದ್ರೆ ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು?

1) ಕರ್ನಾಟಕದ ಎಲ್ಲ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುವಂತಿರಬೇಕು. 2) ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಉಚಿತವಾಗಿ (ಅಥವಾ ಕೈಗೆಟಕುವ ದರದಲ್ಲಿಯಾದರೂ) ದೊರೆಯುವಂತಿರಬೇಕು. 3) ನಮ್ಮ ಯುವಕರಿಗೆ ಅವರ ಅರ್ಹತೆಗೆ ತಕ್ಕ ಉದ್ಯೋಗ ದೊರೆಯುವಂತಿರಬೇಕು. 4) ನಮ್ಮ ರೈತರ ಬೆಳೆಗೆ ಸೂಕ್ತ ಬೆಲೆ ದೊರೆಯುವಂತಿರಬೇಕು. 5) ಗುಣಮಟ್ಟದ ರಸ್ತೆ, ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯಗಳು ರಾಜ್ಯದೆಲ್ಲೆಡೆ ಇರಬೇಕು. 6) ಇಡೀ ರಾಜ್ಯದ ಪರಿಸರ ವೈವಿಧ್ಯ ಅಂದರೆ ಪಶ್ಚಿಮ ಘಟ್ಟ, ಬಯಲುಸೀಮೆ, ಕರಾವಳಿ ಇತ್ಯಾದಿ ಸಮೃದ್ಧಿಯಿಂದಿರಬೇಕು. 7) ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯ, ಭಾಷಾ ವೈವಿಧ್ಯ ಉಳಿದು ಬೆಳೆಯುತ್ತಿರಬೇಕು. ಒಟ್ಟಿನಲ್ಲಿ, ಕರ್ನಾಟಕದ ಪ್ರಜೆಗೆ ಘನತೆಯಿಂದ ತನ್ನ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿರಬೇಕು.

ಈ ಮೇಲ್ಕಾಣಿಸಿದ ಆಶಯಗಳ ರೀತಿಯಲ್ಲಿ ನಮ್ಮ ಕರ್ನಾಟಕ ರಾಜ್ಯವಿದ್ದರೆ ಆಗ ಪ್ರತಿ ಕನ್ನಡಿಗಳಿ/ನಿಗೂ ಘನತೆ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಈ ರೀತಿ ಭಾರತದ ಯಾವುದೇ ರಾಜ್ಯವನ್ನು ನಾವು ಒಂದು ಮಾದರಿ ರಾಜ್ಯವೆಂದು ಕರೆಯಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಒಂದು ನಿಜವಾದ ಮಾದರಿ ರಾಜ್ಯವೆ ಎಂದು ಕೇಳಿಕೊಂಡರೆ ಉತ್ತರ ಇಲ್ಲ ಎಂದೇ ಬರುತ್ತದೆ.

ಹಾಗಾದರೆ ಇಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ. ಕರ್ನಾಟಕ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿರುವಾಗ, ಮುಂದಿನ ವರ್ಷಗಳಲ್ಲಿ ಮೇಲ್ಕಾಣಿಸಿದ ರೀತಿಯ ಮಾದರಿ ರಾಜ್ಯವಾಗುವ ಸಾಧ್ಯತೆಯಿದೆಯಲ್ಲವೇ? ಹೌದು, ಕರ್ನಾಟಕ ಜಿಡಿಪಿಯಲ್ಲಿ 4ನೇ ಸ್ಥಾನದಲ್ಲಿದೆ, ತಲಾವಾರು ಆದಾಯದಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಮೇಲಿನೆರಡು ಸೂಚ್ಯಂಕಗಳಿಗಿಂತ ಸರ್ವತೋಮುಖ ಅಭಿವೃದ್ಧಿ ಅಳೆಯುವ ಮಾಪನವಾದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಹದಿನೈದಕ್ಕಿಂತ ಕೆಳಗಿನ ಸ್ಥಾನದಲ್ಲಿದೆ. ಈ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಒಂದು ಕ್ಷಣ ಕಡೆಗಣಿಸಿ ಮೇಲ್ನೋಟಕ್ಕೆ ಅಭಿವೃದ್ಧಿ ಅಳೆಯುವ ಮಾಪಕವಾದ ಜಿಡಿಪಿಯ ಪ್ರಕಾರವೇ ಕರ್ನಾಟಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ ಎಂದುಕೊಂಡರೂ ಕೂಡ, ನಮ್ಮ ಕನಸಿನ ಮಾದರಿ ರಾಜ್ಯವಾಗಲು ಕರ್ನಾಟಕಕ್ಕೆ ಹೆಚ್ಚಿನ ಆರ್ಥಿಕ ಬಲ ಬೇಕಾಗುವುದು ನಿಚ್ಚಳ.

ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಕೊಡಲು, ಮೂಲ ಸೌಲಭ್ಯ ಒದಗಿಸಲು ಮತ್ತು ಒಟ್ಟಾರೆಯಾಗಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ಅತಿಮುಖ್ಯವಾಗಿ ಹೆಚ್ಚಿನ ಆರ್ಥಿಕ ಬಲ ಕರ್ನಾಟಕಕ್ಕೆ ಬೇಕಾಗುತ್ತದೆ. ಕಠೋರ ವಾಸ್ತವ ಏನೆಂದರೆ, ಕರ್ನಾಟಕವೂ ಸೇರಿದಂತೆ ಭಾರತದ ಯಾವುದೇ ರಾಜ್ಯಕ್ಕೂ ಕೂಡ ತನ್ನ ಸಾಮರ್ಥ್ಯಕ್ಕನುಗುಣವಾಗಿ ತನ್ನ ಆರ್ಥಿಕತೆಯನ್ನು ವೃದ್ಧಿ ಮಾಡಿಕೊಳ್ಳುವ ಅವಕಾಶ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಇಲ್ಲವಾಗಿದೆ.

ಏಕೆಂದರೆ, ವಿವಿಧ ಕೇಂದ್ರ ಸರ್ಕಾರಗಳು ಸಂವಿಧಾನದಲ್ಲಿನ ಕೆಲ ಅಂಶಗಳನ್ನೇ ಬಳಸಿಕೊಂಡು ರೂಪಿಸಿದಂತಹ ಆರ್ಥಿಕ ನೀತಿಗಳ ಮೂಲಕ ರಾಜ್ಯ ಸರ್ಕಾರಗಳು ಆರ್ಥಿಕವಾಗಿ ಕೇಂದ್ರದ ಮೇಲೆಯೇ ಬಹುತೇಕ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡುತ್ತಾ ಬಂದಿವೆ. ಅದರಲ್ಲೂ ಕಡೆಯ ಐದಾರು ವರ್ಷಗಳಿಂದೀಚೆಗಂತೂ ಕೇಂದ್ರದಿಂದ ರಾಜ್ಯಗಳಿಗೆ ಬರುವ ಆರ್ಥಿಕ ಅನುದಾನ ಗಣನೀಯವಾಗಿ ಕಡಿಮೆಯಾಗಿದೆ.

2017ರ ಜುಲೈನಲ್ಲಿ ಜಿಎಸ್‍ಟಿ ಜಾರಿಯಾದ ಮೇಲೆ ಅಬಕಾರಿ, ಪೆಟ್ರೋಲ್ ಮತ್ತು ಇತರೆ ಒಂದೆರಡು ವಿಷಯ ಹೊರತುಪಡಿಸಿ ಇನ್ಯಾವ ವಸ್ತುವಿನ ಮೇಲೂ ತೆರಿಗೆ ಹಾಕುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಕಳೆದು ಕೊಂಡಿವೆ. ಹಾಗಾಗಿ, ತಮ್ಮ ರಾಜ್ಯದಲ್ಲಿ ಜಿಎಸ್‍ಟಿ ಸಂಗ್ರಹಿಸಿ ಕೇಂದ್ರಕ್ಕೆ ಕೊಟ್ಟು ಅಲ್ಲಿಂದ ಅವರು ಕೊಟ್ಟಷ್ಟು ತೆಗೆದುಕೊಳ್ಳುವ ಅನಿವಾರ್ಯತೆಗೆ ರಾಜ್ಯ ಸರ್ಕಾರಗಳು ಬಿದ್ದಿವೆ.

ಐದಾರು ವರ್ಷಗಳಿಂದೀಚೆಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರದ ಆರ್ಥಿಕ ಅನುದಾನ ಹೇಗೆ ಕಡಿಮೆಯಾಗುತ್ತಾ ಬಂದಿದೆ ಎಂದು ನೋಡುವುದಾದರೆ,

1) ಜಿಎಸ್‍ಟಿ ಜಾರಿಗೊಳಿಸುವ ಸಮಯದಲ್ಲಿ ರಾಜ್ಯಗಳಿಗೆ ನಷ್ಟವುಂಟಾಗದಿರಬೇಕಾದರೆ ಜಿಎಸ್‍ಟಿಯಲ್ಲಿ ರಾಜ್ಯ ಮತ್ತು ಕೇಂದ್ರ 60:40 ಅನುಪಾತದಲ್ಲಿ ಜಿಎಸ್‍ಟಿ ತೆರಿಗೆ ಹಂಚಿಕೆ ಮಾಡಬೇಕಿತ್ತು. ಆದರೆ, ಅದನ್ನು 50:50 ಅನುಪಾತದಲ್ಲಿ ಹಂಚಿಕೆ ಮಾಡುವ ಒಪ್ಪಂದದ ಮೂಲಕ ಜಿಎಸ್‍ಟಿ ಜಾರಿಯ ವೇಳೆಯೇ ರಾಜ್ಯಗಳಿಗೆ ಆರ್ಥಿಕ ನಷ್ಟ ಉಂಟುಮಾಡಲಾಗಿದೆ.

2) 14ನೇ ಹಣಕಾಸು ಆಯೋಗ ರಾಜ್ಯಗಳ ಅವಶ್ಯಕತೆ ಮನಗಂಡು ಹಂಚಿಕೆಯಾಗುವ ತೆರಿಗೆ ಹಣದಲ್ಲಿ ರಾಜ್ಯಗಳ ಪಾಲನ್ನು 32%ನಿಂದ 42%ಗೆ ಹೆಚ್ಚಿಸಿತು. ಆದರೆ, ಕೇಂದ್ರ ಸರ್ಕಾರವು ಹಲವು ವಸ್ತುಗಳು ಮತ್ತು ಸೇವೆಗಳಿಗೆ ಸೆಸ್ ಮತ್ತು ಸರ್‌ಚಾರ್ಜ್ ವಿಧಿಸುವ ಮೂಲಕ ರಾಜ್ಯಗಳಿಗೆ ಹಂಚಿಕೆಯಾಗುವ ಹಣದ ಮೊತ್ತವನ್ನೇ ಕಡಿಮೆ ಮಾಡುತ್ತಾ ಬಂತು (ಸೆಸ್ ಮೂಲಕ ಸಂಗ್ರಹವಾದ ಹಣವನ್ನು ರಾಜ್ಯಗಳಿಗೆ ಹಂಚುವ ಕಡ್ಡಾಯವಿಲ್ಲ). ಉದಾಹರಣೆಗೆ 2018-19ರಲ್ಲಿ ಸೆಸ್ ಮೂಲಕ ಸಂಗ್ರಹವಾದ ಹಣವೇ ರೂ 2,78,028 ರಷ್ಟು. ಇದು ಒಟ್ಟು ಸಂಗ್ರಹವಾದ ತೆರಿಗೆಯ ಶೇ 12.24 ರಷ್ಟು. (ಪಟ್ಟಿ 1 ನೋಡಿ)

3) ಈ ಸೆಸ್ ಮತ್ತು ಸರ್‌ಚಾರ್ಜ್‍ಗಳಿಂದಾಗಿ ರಾಜ್ಯಗಳಿಗೆ 2015ರಿಂದ 2019ರವರೆಗೆ ಉಂಟಾದ ಒಟ್ಟು ನಷ್ಟ ಸುಮಾರು ಐದು ಲಕ್ಷ ಕೋಟಿಯಷ್ಟು. ಇದು ನಮ್ಮ ದೇಶದ ಜಿಡಿಪಿಯ ಶೇ.3 ರಷ್ಟಾಗುತ್ತದೆ. (ಪಟ್ಟಿ 2 ನೋಡಿ)

4) ಜೊತೆಗೆ ಕೇಂದ್ರವು ಪಾರದರ್ಶಕತೆಯಿಲ್ಲದ ಲೆಕ್ಕಾಚಾರ ಬಳಸಿ ಸೆಸ್ ಮತ್ತು ಸರ್‌ಚಾರ್ಜ್ ಕಳೆದ ಮೇಲೆ ಹಂಚಿಕೊಳ್ಳಬೇಕಾದ ತೆರಿಗೆಯನ್ನು ಕಡಿಮೆ ತೋರಿಸಿ ಪ್ರತಿವರ್ಷ ಕನಿಷ್ಟ ಐವತ್ತರಿಂದ ಅರವತ್ತು ಸಾವಿರ ಕೋಟಿಗಳಷ್ಟು ಕಡಿಮೆ ಹಣವನ್ನು ರಾಜ್ಯಗಳಿಗೆ ಕೊಡುತ್ತಾ ಬಂದಿದೆ. (ಪಟ್ಟಿ 3 ನೋಡಿ)

5) ಇಷ್ಟೆಲ್ಲದರ ಜೊತೆಗೆ ಹದಿನೈದನೇ ಹಣಕಾಸು ಆಯೋಗವು ಪ್ರತಿ ರಾಜ್ಯವು ಆರ್ಥಿಕ ಶಿಸ್ತಿಗೆ ಬದ್ಧವಾಗಿದ್ದರೆ ಮಾತ್ರ ಕೇಂದ್ರದ ಅನುದಾನ ಕೊಡುವ ನಿಬಂಧನೆ ಮುಂದಿಟ್ಟಿದೆ. (ಈ ನಿಬಂಧನೆ ಕೇಂದ್ರ ಸರ್ಕಾರಕ್ಕಿಲ್ಲ). ಅಂದರೆ, ಕೇಂದ್ರ ಸರ್ಕಾರದ ಆರ್ಥಿಕ ಆಶಯಗಳನ್ನು ಜಾರಿಗೊಳಿಸುವ ರಾಜ್ಯಗಳಿಗೆ ಮಾತ್ರ ಅವುಗಳಿಗೆ ಸೇರಬೇಕಾದ ಅನುದಾನ ಕೊಡುವ ಸೂಚನೆ ಇದರಲ್ಲಿದೆ. ಇದು ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಹೆಜ್ಜೆಯಾಗಿದೆ.

6) ಹದಿನೈದನೇ ಹಣಕಾಸು ಆಯೋಗ 2011ರ ಜನಸಂಖ್ಯೆ ಅನುಸರಿಸಿ ಅನುದಾನ ನಿಗದಿಪಡಿಸುವ ನಿಯಮ ಮುಂದಿಟ್ಟಿದ್ದು ಇದರಿಂದ ಕರ್ನಾಟಕದಂಥ ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಅನುದಾನ ಕಡಿತವಾಗಲಿದೆ.

ಒಟ್ಟಾರೆಯಾಗಿ, ಮೇಲ್ಕಾಣಿಸಿದ ಕೆಲವೇ ಅಂಶಗಳನ್ನು ಕರ್ನಾಟಕಕ್ಕೆ ಅನ್ವಯಿಸಿ ಅರ್ಥ ಮಾಡಿಕೊಳ್ಳುವುದಾದರೆ, ಒಂದು ಸುಭಿಕ್ಷ ಮತ್ತು ಮಾದರಿ ರಾಜ್ಯವಾಗಿ ಕರ್ನಾಟಕ ಕಟ್ಟಲು ಅತ್ಯಗತ್ಯವಾಗಿ ಬೇಕಾದ ಆರ್ಥಿಕ ಬಲವನ್ನು ಈಗಿನ ಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯಲ್ಲಿ ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಕಳೆದ ವರ್ಷ ಕರ್ನಾಟಕದ ಭೀಕರ ನೆರೆಗೆ ಕೇಂದ್ರ ಕೊಟ್ಟಂತಹ ಪರಿಹಾರ ಎಷ್ಟಿತ್ತು ಮತ್ತು ರಾಜ್ಯ ಸರ್ಕಾರಕ್ಕೂ ಇನ್ಯಾವುದೇ ಮೂಲದಿಂದ ಹಣ ಹೊಂದಿಸಲಾಗದೆ ಹೇಗೆ ನಮ್ಮದೇ ಬಂಧುಗಳನ್ನು ನಡುನೀರಲ್ಲಿ ಕೈಬಿಡಬೇಕಾಯಿತು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಹಾಗೆಯೇ, ಕರ್ನಾಟಕಕ್ಕೆ ಬರಬೇಕಾದ ಜಿಎಸ್‍ಟಿ ಹಣವನ್ನು ಕೇಂದ್ರ ಕೊಡದಿದ್ದರೂ ಕೇಂದ್ರದ ಮುಂದೆ ಭಿಕ್ಷೆ ಬೇಡುವುದನ್ನು ಬಿಟ್ಟು ಬೇರೆ ಏನೂ ಮಾಡಲಿಕ್ಕಾಗದೆ ಇರುವುದನ್ನೂ ನೋಡುತ್ತಿದ್ದೇವೆ. ಗಾಯದ ಮೇಲೆ ಬರೆ ಎಳೆದಂತೆ, ಹದಿನೈದನೇ ಹಣಕಾಸು ಆಯೋಗ ಹೇಳಿದ 5345 ಕೋಟಿ ರೂಪಾಯಿಗಳನ್ನು ಕೇಂದ್ರ ಕೊಡದೆ ಕೈಎತ್ತಿದರೂ ಗಟ್ಟಿಯಾಗಿ ಕೇಳದ ಸ್ಥಿತಿಯಲ್ಲಿ ಇದ್ದೇವೆ. ನಮ್ಮದೇ ತೆರಿಗೆ ಹಣ ಬಳಸಿ ಕರ್ನಾಟಕದ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದನ್ನೂ ನೋಡುತ್ತಿದ್ದೇವೆ.

ಪರಿಸ್ಥಿತಿ ಹೀಗೇ ಮುಂದುವರಿದರೆ, ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಮತ್ತು ನಿವೃತ್ತಿ ವೇತನ ಬಿಟ್ಟು ಬೇರಾವ ಅಭಿವೃದ್ಧಿ ಕಾರ್ಯ ಮಾಡಲೂ ಹಣವಿಲ್ಲದ ಸ್ಥಿತಿಯನ್ನು ರಾಜ್ಯ ಸರ್ಕಾರಗಳು ತಲುಪುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದುದರಿಂದ, ಶೀಘ್ರವಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ (ಬೇರೆ ರಾಜ್ಯಗಳ ಪರಸ್ಪರ ಸಹಕಾರ ಕೂಡ ಪಡೆದು) ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಿ ಒಂದು ಮಟ್ಟಿಗಿನ ಆರ್ಥಿಕ ಸ್ವಾಯತ್ತತೆಯನ್ನಾದರೂ ಪಡೆದರೆ ಮಾತ್ರ ನಮ್ಮ ಕನಸಿನ ಮಾದರಿ ಕರ್ನಾಟಕ ಕಟ್ಟಲು ಸಾಧ್ಯ.

  • ಬಸವರಾಜು ಬಿ.ಸಿ

ಎಂಜಿನಿಯರಿಂಗ್ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬಸವಾರಾಜು ಅವರಿಗೆ ಅರ್ಥಶಾಸ್ತ್ರದ ಮೇಲೆ ಆಸಕ್ತಿ. ಅತ್ಯುತ್ತಮ ಹಾಡುಗಾರರೂ ಆಗಿರುವ ಬಸು ಅವರು ಪ್ರಚಲಿತ ವಿದ್ಯಮಾನಗಳಿಗೆ ಲೇಖನಗಳು ಮತ್ತು ವಿಡಿಯೋಗಳ ಮೂಲಕ ನಿರಂತರವಾಗಿ ಪ್ರತಿಕ್ರಿಯಿಸುತ್ತಾರೆ


ಇದನ್ನೂ ಓದಿ: 3-4ನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಋಣಾತ್ಮಕವಾಗಿಯೇ ಇರಲಿದೆ: ನಿರ್ಮಲಾ ಸೀತಾರಾಮನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...