ಪಶ್ಚಿಮ ಬಂಗಾಳದ ಆಡಳಿತರೂಢ ಟಿಎಂಸಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಬಿಜೆಪಿ ಪಕ್ಷವು ಇಂದು ಕೋಲ್ಕತ್ತಾದಲ್ಲಿ ಭಾರೀ ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಉದ್ರಿಕ್ತ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನವನ್ನು ಜಖಂಗೊಳಿಸಿ, ಬೆಂಕಿ ಹಚ್ಚಿರುವ ಘಟನೆ ಜರುಗಿದೆ.
ಬಿಜೆಪಿಯು ‘ನಬನ್ನ ಅಬಿಜಾನ್’ ಹೆಸರಿನ (ಸೆಕ್ರಟೆರಿಯೇಟ್ ಚಲೋ) ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ಬಿಜೆಪಿ ಮುಖಂಡರಾದ ಸುವೇಂದು ಅಧಿಕಾರಿ, ದಿಲೀಪ್ ಘೋಷ್, ಲಾಕೆಟ್ ಚಟರ್ಜಿ ಸೇರಿ ಹಲವರು ದಕ್ಷಿಣ ಕೋಲ್ಕತ್ತಾ ಮತ್ತು ಉತ್ತರ ಕೋಲ್ಕತ್ತಾದಿಂದ ಸೆಕ್ರಟೇರಿಯೇಟ್ ಕಡೆಗೆ ಮೆರವಣಿಗೆ ಹೊರಟಿದ್ದರು. ಮೆರವಣಿಗೆ ಸೆಕ್ರಟೇರಿಯೆಟ್ ಬಳಿ ಬಂದಾಗ ಕೋಲ್ಕತ್ತಾ ಪೊಲೀಸರು ತಡೆದು ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಈ ವಿಷಯ ತಿಳಿದ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನಗಳಿಗೆ ಜಖಂ ಮಾಡಿ, ಬೆಂಕಿ ಹಚ್ಚಿ ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಆ ನಂತರ ಪೊಲೀಸರು ಗುಂಪು ಚದುರಿಸಲು ಲಾಠಿಚಾರ್ಜ್ ಮಾಡಿ, ಅಶ್ರವಾಯು ಸಿಡಿಸಿದ್ದಾರೆ.
ಹೌರಾ ಮತ್ತು ರಾಜ್ಯದ ಇತರ ಕಡೆಗಳಿಂದ ಬಿಜೆಪಿ ಕಾರ್ಯಕರ್ತರು ಕೋಲ್ಕತ್ತಾಗೆ ಆಗಮಿಸಿದ್ದರು. ಅದಕ್ಕಾಗಿ 7 ರೈಲುಗಳು ಮತ್ತು ನೂರಾರು ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ 24 ಪರಗಣದ ಬಳಿ ಬಸ್ಗಳನ್ನು ಪೊಲೀಸರು ತಡೆದಾಗ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿ ನಡೆಸಲಾಗಿದೆ.
Another video of PEACEFUL PROTEST by the BJP👇🏽 https://t.co/G2LoaEZ8uH pic.twitter.com/Eb7yuZ809B
— Bhartendu Sharma (@Bhar10duSharma) September 13, 2022
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುವೆಂದು ಅಧಿಕಾರಿ, “ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಜನಬೆಂಬಲ ಇಲ್ಲದ ಕಾರಣ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ದಕ್ಷಿಣ ಕೊರಿಯಾದ ಪರಿಸ್ಥಿತಿ ಬಂಗಾಳದಲ್ಲಿದೆ. ಲಾಠೀಚಾರ್ಜ್ ಮಾಡಿದ ಪೊಲೀಸರು ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ” ಎಂದು ಬೆದರಿಕೆಯೊಡ್ಡಿದ್ದಾರೆ.
ಟಿಎಂಸಿ ಮುಖಂಡರು ಬಿಜೆಪಿ ಶಾಂತಿಯುತ ಪ್ರತಿಭಟನೆ ಇದೆಯೇ ಎಂದು ಪ್ರಶ್ನಿಸಿ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದೆ. ಅದರಲ್ಲಿ ಬಿಜೆಪಿ ಕಾರ್ಯಕರ್ತರು ಹಿಂಸಾತ್ಮಕವಾಗಿ ಪ್ರತಿಭಟಿಸುತ್ತಿರುವುದು, ಪೊಲೀಸ್ ವಾಹನಗಳಿಗೆ ಕಲ್ಲು ತೂರುತ್ತಿರುವುದನ್ನು ಕಾಣಬಹುದಾಗಿದೆ.
.@BJP4Bengal karyakartas or HOOLIGANS?
Destroying & damaging government property, attacking police personnel, causing chaos and disrupting peace across the state – today's activities of BJP that brought shame upon the entire nation.
We STRONGLY CONDEMN such outrageous behavior! pic.twitter.com/De9c9o7nCx
— All India Trinamool Congress (@AITCofficial) September 13, 2022
ಇದನ್ನೂ ಓದಿ: ನೀಟ್ ಟಾಪರ್ ಮೂರು ಕೋಚಿಂಗ್ ಸೆಂಟರ್ಗಳಲ್ಲಿ ತರಬೇತಿ ಪಡೆದಿದ್ದು ನಿಜವೇ? ಜಾಹೀರಾತುಗಳ ಹಿಂದಿನ ಮರ್ಮವೇನು?