Homeಮುಖಪುಟಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ರಾಬಿನ್‌ಗೆ ವಂಚನೆ: ಜಾಲತಾಣದಲ್ಲಿ ಚರ್ಚೆ

ಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ರಾಬಿನ್‌ಗೆ ವಂಚನೆ: ಜಾಲತಾಣದಲ್ಲಿ ಚರ್ಚೆ

ಆರಂಭಿಕ ಆಟಗಾರರಾಗಿ ಕ್ರಿಸ್‌ಗೆ ಬರುತ್ತಿದ್ದ ರಾಬಿನ್‌ ಉತ್ತಪ್ಪ ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ. ಕ್ರಮಾಂಕ ಬದಲಾದಾಗ ವಿಫಲರಾಗಿದ್ದಾರೆ

- Advertisement -
- Advertisement -

ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡಕ್ಕೆ ಆರಂಭದಲ್ಲಿ ರವೀಂದ್ರ ಜಡೇಜಾ ನಾಯಕರಾಗಿದ್ದರು. ಜಡೇಜಾ ನಾಯಕತ್ವ ತೊರೆದ ಬಳಿಕ ಮತ್ತೆ ಸಿಎಸ್‌ಕೆಗೆ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವ ವಹಿಸಿದರು. ನಂತರದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸಿಎಸ್‌ಕೆ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಆದರೆ ನಾಯಕ ಧೋನಿ ಧೋರಣೆ ಕುರಿತು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಜಡೇಜಾ ನಾಯಕತ್ವದಲ್ಲಿ ತಂಡ ಮುನ್ನಡೆಯುತ್ತಿದ್ದಾಗ ಆರಂಭಿಕ ಆಟಗಾರರಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಮಿಂಚುತ್ತಿದ್ದ, ಕೆಲವು ಪಂದ್ಯಗಳ ಗೆಲುವಿಗೂ ಕಾರಣರಾಗಿದ್ದ ಕೊಡಗಿನ ರಾಬಿನ್‌ ಉತ್ತಪ್ಪ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಕೆಳ ಕ್ರಮಾಂಕದಲ್ಲಿ ರಾಬಿ‌ನ್ ಅವರನ್ನು ಬ್ಯಾಟಿಂಗ್‌ಗೆ ಇಳಿಸುತ್ತಿರುವ ನಾಯಕ ಧೋನಿ, ‘ಕ್ರಿಕೆಟ್ ರಾಜಕಾರಣ’ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ ವಿರುದ್ಧ ಮಾರ್ಚ್ 26ರಂದು ಮೊದಲ ಪಂದ್ಯವನ್ನಾಡಿದ್ದ ಸಿಎಸ್‌ಕೆ ಕಡಿಮೆ ಮೊತ್ತವನ್ನು ಗಳಿಸಿತ್ತು. ಧೋನಿ ಅರ್ಧ ಶತಕ (50*/38) ಸಿಡಿಸಿದ್ದರು. 21 ಬಾಲ್‌ಗಳಲ್ಲಿ 28 ರನ್‌ ಗಳಿಸುವ ಮೂಲಕ ರಾಬಿನ್‌ ಉತ್ತಪ್ಪ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರರಾಗಿದ್ದರು.

ಮಾರ್ಚ್‌ 31ರಂದು ಎಲ್‌ಎಸ್‌ಜಿ ವಿರುದ್ಧ ನಡೆದ ಪಂದ್ಯದಲ್ಲಿ 27 ಬಾಲ್‌ಗಳಲ್ಲಿ 50 ರನ್‌ ಸಿಡಿಸಿದ್ದ ರಾಬಿ‌ನ್‌ ಉತ್ತಪ್ಪ ಸಿಎಸ್‌ಕೆ ಅತ್ಯುತ್ತಮ ಮೊತ್ತ ಗಳಿಸಲು ಕಾರಣವಾಗಿದ್ದರು. ಸಿಎಸ್‌ಕೆ ಪರ ಈ ಪಂದ್ಯದಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಆಟಗಾರರಾಗಿಯೂ ಹೊಮ್ಮಿದ್ದರು.

ಇದನ್ನೂ ಓದಿರಿ: ಐಪಿಎಲ್‌: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಕ್ವಿಂಟನ್ ಡಿಕಾಕ್‌

ಏಪ್ರಿಲ್‌ 12ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಪರ ಶಿವ ದುಬೆ 46 ಬಾಲ್‌ಗಳಲ್ಲಿ 95 ರನ್‌ ಸಿಡಿಸಿ ಅಜೇಯರಾಗಿ ಉಳಿದರೆ, ರಾಬಿನ್ ಉತ್ತಪ್ಪ 50 ಬಾಲ್‌ಗಳಲ್ಲಿ 88 ರನ್‌ ಗಳಿಸಿ ಪಂದ್ಯದ ಗೆಲುವಿನಲ್ಲೂ ಮುಖ್ಯಪಾತ್ರ ವಹಿಸಿದ್ದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಂಬಟಿ ರಾಯುಡು (40/35) ಬಿಟ್ಟರೆ ಅತಿ ಹೆಚ್ಚು ರನ್‌ ಗಳಿಸಿದ್ದು ರಾಬಿನ್ ಉತ್ತಪ್ಪ (30/25). ಇತರ ಆಟಗಾರರಂತೆಯೇ ರಾಬಿನ್‌ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವುದು ನಿಜ. ಆದರೆ ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ರಾಬಿನ್ ಉತ್ತಪ್ಪರನ್ನು ಕೆಳಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲೂ ಇದು ನಿಚ್ಚಳವಾಗಿ ಕಾಣುತ್ತಿದೆ ಎಂಬ ಆರೋಪಗಳು ಬಂದಿವೆ.

ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ನಡೆದ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಸಿಎಸ್‌ಕೆ ಗೆಲವು ಗಳಿಸಿತ್ತು. ಋತುರಾಜ್‌ ಗಾಯಕ್ವಾಡ್‌, ದೇವನ್‌ ಕಾನ್ವೆ ಉತ್ತಮ ಆರಂಭ ನೀಡಿದರು. 99 ರನ್‌ ಗಳಿಸಿ ಋತುರಾಜ್‌ ಔಟ್ ಆದ ಬಳಿಕ ಧೋನಿ ಕ್ರೀಸ್‌ಗೆ ಬಂದರು. 7 ಬಾಲ್‌ ಆಡಿ 8 ರನ್‌ ಗಳಿಸಿದರು. ಇನ್ನಿಂಗ್ಸ್‌ ಮುಗಿಯುವ ಹಂತದಲ್ಲಿದ್ದಾಗ ಧೋನಿ ಔಟ್ ಆದರು. ಆದರೆ ನಂತರದಲ್ಲಿ ಕ್ರೀಸ್‌ಗೆ ಬಂದಿದ್ದು ರವೀಂದ್ರ ಜಡೇಜಾ. ಈ ಭಾರಿಯ ಐಪಿಎಲ್‌ನಲ್ಲಿ ಜಡೇಜಾ ಉತ್ತಮ ಪ್ರದರ್ಶನವನ್ನೇನೂ ನೀಡಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿರಿ: IPL2022: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಜಡೇಜಾ – ಫಾಫ್ ಡು ಪ್ಲೆಸಿಸ್ ಕೂಡ ಅದೇ ಹಾದಿ ಹಿಡಿಯುವರೆ?

ಆರ್‌ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿ ರಾಬಿ‌ನ್‌  ಮೂರನೇ ಕ್ರಮಾಂಕದಲ್ಲಿ ಬಂದರೂ ಮೂರು ಬಾಲ್‌ಗಳಲ್ಲಿ ಒಂದು ರನ್‌ ಗಳಿಸಿ ಔಟ್‌ ಆದರು. ಆದರೆ ನಂತರದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ರಾಬಿನ್‌ ಅವರಿಗೆ ಬ್ಯಾಟಿಂಗ್ ನೀಡಲಾಗಿದೆ. ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದಿದೆ. ದೇವನ್ ಕಾನ್ವೆ, ಶಿವಂ ದೂಬೆ, ಋತುರಾಜ್‌ ಉತ್ತಮ ರನ್‌ ಗಳಿಸಿದ್ದರು. ಆದರೆ ಮೊಯಿನ್ ಅಲಿ ಬಳಿಕ ರಾಬಿನ್‌ ಅವರನ್ನು ಕ್ರೀಸ್‌ಗಿಳಿಸಲಾಗಿತ್ತು. ಇನ್ನಿಂಗ್ಸ್‌ ಅಂತ್ಯದಲ್ಲಿ ಆಡಲು ಬಂದ ರಾಬಿನ್‌ ಉತ್ತಪ್ಪ ಕೇವಲ 1 ಬಾಲ್‌ ಆಡಿ ಡಕ್‌ಔಟ್‌ ಆದರು.

ಉತ್ತಪ್ಪ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಲೇಖಕ ಅಲ್ಮೇಡಾ ಗ್ಲಾಡ್‌ಸನ್‌, “ಈತ ಭಾರತದ ಕ್ಯಾಪ್ಟನ್ ಆಗಿದ್ದಾಗಲೂ ಓಪನರ್ ಆಗಿರುವ ರಾಬಿನ್ ಉತ್ತಪ್ಪರನ್ನು ಆರನೇ, ಏಳನೇ ಕ್ರಮಾಂಕದಲ್ಲಾಡಿಸಿ ಆತನ ಕರಿಯರನ್ನೇ ಹಾಳು ಮಾಡಿದ್ದ. ಇದೀಗ ಸಿಎಸ್ಕೆಯಲ್ಲೂ ಅದೇ ಮಾಡುತ್ತಿದ್ದಾನೆ. ಜಡೇಜಾ ಕ್ಯಾಪ್ಟನ್ ಆಗಿರುವತನಕ ಓಪನರ್ ಆಗಿ ಚೆನ್ನಾಗಿಯೇ ಪರ್ಫಾಮ್ ಮಾಡಿದ್ದ ರಾಬಿನ್ಗೆ ಈತ ಕ್ಯಾಪ್ಟನ್ ಆಗುತ್ತಲೇ ಬ್ಯಾಟಿಂಗೇ ಸಿಗುತ್ತಿಲ್ಲ. ಮತ್ತದೇ ನಾಟಕ, ಆರು, ಏಳನೇ ಕ್ರಮಾಂಕ. ಇವರು ಕಳೆದ ಹದಿನೈದು ವರುಷಗಳಲ್ಲಿ ಒಬ್ಬನೇ ಒಬ್ಬ ವಿಕೆಟ್-ಕೀಪರ್‌ನ ಕರಿಯರ್ ಸೆಟ್ ಆಗಲು ಬಿಡಲಿಲ್ಲ. ರಾಬಿನ್, ಪಾರ್ಥೀವ್, ಕಾರ್ತಿಕ್ ಎಲ್ಲರ ಅಂತಾರಾಷ್ಟ್ರೀಯ ಕರಿಯರ್ ಬ್ಲಾಕ್ ಮಾಡ್ಬಿಟ್ಟ. Without doubt, he is by far the greatest politician to have ever played cricket” ಎಂದು ಆರೋಪಿಸಿದ್ದಾರೆ.

“ಉತ್ತಪ್ಪ ಅವರ ಸ್ಥಾನವನ್ನು ವಿದೇಶಿ ಆಟಗಾರನಿಗೆ ಬಿಟ್ಟುಕೊಟ್ಟಿದ್ದು ಏಕೋ ಸರಿ ಕಾಣಲಿಲ್ಲ. ನಮ್ಮಲ್ಲೆ ಪ್ರತಿಭೆಗಳಿರುವಾಗ ಹೊರಗಿನ ಪ್ರತಿಭೆಗಳಿಗೆ ಮಣೆ ಹಾಕುವುದು ಎಷ್ಟು ಸರಿ?” ಎಂದು ಹಕೀಂ ತೀರ್ಥಹಳ್ಳಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: IPL2022: ಸತತ ಮುಗ್ಗರಿಸುತ್ತಿರುವ ದಿಗ್ಗಜ ತಂಡಗಳು – ಗೆಲುವಿನ ಅಲೆಯಲ್ಲಿ ಹೊಸ ತಂಡಗಳು

“ರಾಬಿನ್ ಉತ್ತಪ್ಪ ಟಿಟ್ವೆಂಟಿ ಫಾರ್ಮಾಟಿಗೆ ಅತ್ಯುತ್ತಮ ಆರಂಭಿಕ ಆಟಗಾರ. ಕೊಟ್ಟ ಅವಕಾಶ ಕಡಿಮೆ; ಆಯ್ಕೆ ಮಾಡಿದರೂ, ಆತನನ್ನು ಸರಿಯಾಗಿ‌ ಬಳಸಿಕೊಳ್ಳಲಿಲ್ಲ. ರಾಬಿನ್ ತರಹ ಕೆಲವು ಉತ್ತಮ ಆಟಗಾರರಿಗೂ ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಲು ಸಾಕಷ್ಟು ಅವಕಾಶಗಳು ದೊರೆಯಲಿಲ್ಲ. ಇದಕ್ಕೆ ಧೋನಿ ಹೊಣೆಯೋ ಅಥವಾ ಬಿಸಿಸಿಐ ಮ್ಯಾನೇಜ್ಮೆಂಟ್ ಅವರ ತೀರ್ಮಾನವೋ ತಿಳಿಯದು. ಬಿಸಿಸಿಐ ಎಂಬ ವ್ಯಾಪಾರೀಕರಣದ ಸಂಸ್ಥೆಯ ಪಾರದರ್ಶಕತೆಯ ಕುರಿತು ಸಾಕಷ್ಟು ಅನುಮಾನಗಳಿವೆ” ಎಂದು ಪವನ್‌ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

“ಧೋನಿಯ ಬಗ್ಗೆ ಹಾಗೇ ಹೇಳುವುದನ್ನು ನಾನು ಒಪ್ಪಲಾರೆ, ಒಬ್ಬ ಅತ್ಯುತ್ತಮ ಕ್ರಿಕೆಟರ್ ನಾಯಕನ ಸ್ಥಾನ ಹೊತ್ತು ತನ್ನ ಟಾಪ್ ಆರ್ಡರ್ ಬ್ಯಾಟಿಂಗ್ ಅನ್ನೇ ಫಿನಿಷರ್ ಮಾಡಿಕೊಳ್ಳಲಿಲ್ಲವೇ? ತಂಡದ ಅಗತ್ಯಕ್ಕೆ ತಕ್ಕ ಹಾಗೆ ಆಡಿಸುವವರು ಸ್ವಾರ್ಥದ ಲೇಪ ಹಚ್ಚುವುದು ನಾನು ಒಪ್ಪಲಾರೆ” ಎಂದು ಆದರ್ಶ‌ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...