Homeಕರ್ನಾಟಕಬೆನ್ನು ಬಿಡದ ಅಪರಾಧ

ಬೆನ್ನು ಬಿಡದ ಅಪರಾಧ

- Advertisement -
- Advertisement -

ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸುಮಲತಾ ಅಂಬರೀಶರ ಚುನಾವಣಾ ಪ್ರಚಾರ ಮಾಡಿ ಸುಸ್ತಾಗಿ ಬಂದು ಮನೆ ಮುಂದೆ ನಿಂತಿದ್ದೆ. ಆಗ ನಾಗಮಂಗಲದಲ್ಲಿ ನಡೆದ ದೇವೇಗೌಡರ ಸಭೆಯ ಬಗ್ಗೆ ಮನಸ್ಸು ಒಂದಿಷ್ಟು ಘಾಸಿಗೊಂಡಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ದಳದ ಘಟಾನುಘಟಿ ಲೀಡರುಗಳ ಸಮ್ಮುಖದಲ್ಲಿ ಮಾತನಾಡುತ್ತಿದ್ದ ಗೆಳೆಯ ಶಿವರಾಮೇಗೌಡ ಸುಮಲತಾರನ್ನು ‘ಮಾಯಾಂಗನೆ’ ಎಂದು ಮೂದಲಿಸಿದ್ದಲ್ಲದೆ, ‘ಕರ್ನಾಟಕದ ಜಯಲಲಿತ ಆಗಲು ಬಂದಿದ್ದಾಳೆ’ ಎಂದುಬಿಟ್ಟಿದ್ದ. ಇದು ಅವನ ವ್ಯಕ್ತಿತ್ವಕ್ಕೆ ಸರಿಯಾದ ಮಾತು, ಆದರೆ ಆ ಸಭೆಯಲ್ಲಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡರು ಸಭ್ಯತೆಯ ಎಲ್ಲೆ ಮೀರಿದ್ದ ಶಿವರಾಮೇಗೌಡನ ಮಾತಿಗೆ ಆಕ್ಷೇಪವೆತ್ತಿರಲಿಲ್ಲ. ಬದಲಿಗೆ ದೇವೇಗೌಡರ ಮಾತಿಗೆ ಅವಕಾಶ ದೊರೆತಾಗ ‘ನಾನು ಭಾಷಣ ಮಾಡಲ್ಲ. ಶಿವರಾಮೇಗೌಡರ ಮಾತೇ ಅಂತಿಮ’ ಎಂದು ಹೇಳಿ ದಂಗುಬಡಿಸಿದ್ದರು. ಅಂತು ಇವರಿಗೇನೂ ಕೇಡುಗಾಲ ಎಂದುಕೊಂಡು ಸುಮ್ಮನೆ ಊರಿಗೆ ಬಂದಿದ್ದೆ.

ಆ ದಿನ ಸಾಯಂಕಾಲ ಮನೆ ಮುಂದೆ ಒಂದು ಬೈಕ್ ಬಂದು ನಿಂತಿತು. ಅಲ್ಲದೆ ‘ನಮಸ್ಕಾರ ಕಣಣ್ಣಾ’ ಎಂದಿತು. ನಸುಗತ್ತಲಾದ್ದರಿಂದ ಯಾರೆಂದು ಅರಿವಾಗಲಿಲ್ಲ ಹತ್ತಿರ ಹೋದೆ. ‘ನಾನು ಕಣಣ್ಣ ಎಂದ’. ‘ನಾನು ಮತ್ತೂ ಅನುಮಾನಿಸಿ ಗೊತ್ತಾಗಲಿಲ್ಲ’ ಎಂದೆ. ‘ನಾನು ಕಣಣ್ಣ, ಅದೇ ಗಂಗಾಧರಮೂರ್ತಿ’ ಎಂದ. ಆಗ ತಿಳಿಯಿತು. ನಮ್ಮೂರ ಮಗಳ ಮಗನಾದ ಈತ ತನ್ನ ಪರಿಚಯ ಹೇಳಿಕೊಳ್ಳಲು ‘ನಾನು ಗಂಗಾಧರ ಮೂರ್ತಿ ಕೊಂದವನು’ ಎಂದು ಹೇಳಿಕೊಳ್ಳುತ್ತಿದ್ದಾನೆ’ ಎಂಬುದು ಅರಿವಿಗೆ ಬಂತು. ಒಂದುಕ್ಷಣ ಅಳುಕಾಗಿ ‘ಏನಪ್ಪ ಸಮಾಚಾರ’ ಎಂದೆ. ‘ಏನಿಲ್ಲ ಕಣಣ್ಣ ನಿಮ್ಮತ್ರ ಏನೋ ಹೇಳಬೇಕಾಗ್ಯದೆ’ ಎಂದ. ‘ಏನು ವಿಷಯ’ ಎಂದೆ. ‘ಅದೆ ಶಿವರಾಮೇಗೌಡನ ವಿಷಯ ಕಣಣ್ಣ’ ಎಂದೆ. ‘ಅಯ್ಯೊ ಅವುನ ವಿಷಯ ಬಂದೂ ಬಂದೂ ಸಾಕಾಗ್ಯದೆ ಕಣಪ್ಪ. ಈಗವುನ್ನೇನು ಮುಟ್ಟಂಗಿಲ್ಲ. ದೇವೇಗೌಡ್ರು ಕರಕಂಡು ಬಂದು ಎಂ.ಪಿ ಮಾಡ್ಯವುರೆ’ ಎಂದೆ. ಆದ್ರು ಬರಿಬೇಕು ಬುಡಬಾರ್ದು ಕಣಣ್ಣ’ ಎಂದ. ‘ಆಯ್ತು ಬರಿಯನ ಅದೇನೇಳು’ ಎಂದೆ. ನೀವೊಂದೆರಡು ದಿನ ಬಿಡುವಾಗಿ ಸಿಕ್ಕಬೇಕಲ್ಲಣ್ಣ’ ಎಂದ. ‘ಸಿಗನ ತಗೊ ನನಿಗೇನು ಕ್ಯಲ್ಸಿಲ್ಲ’ ಎಂದೆ. ಶಿವರಾಮೇಗೌಡ ಕೋರ್ಟಿಗೋಗಬಹುದು’ ಎಂದ. ‘ಯಾಕೆ!’ ಎಂದೆ. ‘ಗಂಗಾಧರ ಮೂರ್ತಿ ಕೊಲೇಲಿ ನಮ್ಮನ್ನ ಹ್ಯಂಗೆ ಬಳಸಿಗಂಡ ಅನ್ನದನ್ಯಲ್ಲ ಹೇಳತಿನಿ’ ಎಂದ.

‘ನೋಡ್ರಪ್ಪ ಈಚೆಗೆ ನಮ್ಮ ಕೋರ್ಟಿಗೆ ಯಾರೂ ಹೆದರತಾಯಿಲ್ಲ. ಕೇಸಿನ ತೀರ್ಪು ಬರಕ್ಕೆ ಕನಿಷ್ಟ ಇಪ್ಪತ್ತು ವರ್ಷ ಆಯ್ತಾ ಅದೆ. ಅಷ್ಟೊತ್ತಿಗೆ ಶಿವರಾಮ ನೀನು ನಾನು ಯಾರೂ ಇರದಿಲ್ಲ ಆದ್ರಿಂದ ಧೈರ್ಯವಾಗಿ ಹೇಳು ಬರಿಯನ’ ಎಂದೆ. ಬರಿಬೇಕು ಕಣಣ್ಣ. ಇವತ್ತು ನಾನು ಬಾಳ ಯಾತನೇಲಿದ್ದಿನಿ’ ಎಂದ. ಒಂದಿಷ್ಟು ಸುಮ್ಮನಾದ. ನಾನು ಗಂಗಾಧರ ಮೂರ್ತಿ ಕೊಲೆ ಕಾಡಿಸುತ್ತಿರಬಹುದೆ. ಈತ ಹೊಡೆದ ಮಚ್ಚಿನೇಟಿಗೆ ಮರು ಮಾತನಾಡದೆ ಬೈಕ್ ಸಮೇತ ಭೂಮಿಗೊರಗಿದ. ಆ ದೃಶ್ಯ ಜೀವ ಹಿಂಡುತ್ತಿರಬಹುದೆ. ಎಂದು ಒಂದುಕ್ಷಣ ಯೋಚಿಸಿ ‘ಯಾಕಪ್ಪ ಏನಾಯ್ತು’ ಎಂದೆ. ‘ನನಿಗೆ ಜೀವಾವಧಿ ಆಯ್ತು ಕಣಣ್ಣ. ಅದೇ ಟೈಮಿಗೆ ನನಿಗೆ ಮಗ ಹುಟ್ಟಿದ. ಇತ್ತಗೆ ಹೆರಿಗೆ ಆದ್ರೆ ಅತ್ತಗೆ ನಾನು ಜೈಲಿಗೋದೆ. ಹೋಗುವಾಗ ನನ್ನೆಡ್ತಿಗೆ ಧೈರ್ಯ ಹೇಳಿ ಹೋಗಿದ್ದೆ. ಪೆರೋಲ್ ಮ್ಯಾಲೆ ಬಿಡುಗಡೆ ಆಯ್ತು ಸಾ… ಅದು ಎಂಟು ದಿನಕ್ಕೆ ಮಾತ್ರ. ಊರಿಗೆ ಬಂದು ನೋಡ್ತಿನಿ. ಮಗನಿಗಾಗ್ಲೆ ಹನ್ನೆರಡೊರ್ಸ. ಅವುನ ಜೊತೆ ಅರಾಮಾಗಿದ್ದು ಪುನಃ ಜೈಲಿಗೋದೆ ಕಣಣ್ಣ. ಒಳ್ಳೆ ನಡವಳಿಕೆ ಕಾರಣಕ್ಕೆ ಬೇಗ ಬಿಡುಗಡೆಯಾಗಕ್ಕೆ ಕುಮಾರಸ್ವಾಮಿಗೆ ಹೇಳೋದಕ್ಕೆ ಯವಸ್ಥೆ ಮಾಡಿದ್ದೆ ಕಣಣ್ಣ. ಅಷ್ಟರಲ್ಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಅನ್ನ ಸುದ್ದಿ ಬಿತ್ತು ಕಣಣ್ಣ’ ಎಂದು ಹೇಳುವಷ್ಟರಲ್ಲಿ, ಲೋಕೇಶನ ಗಂಟಲು ಬಿಗಿದು ಬಂದು ಕಣ್ಣು ತುಂಬಿಕೊಂಡವು. ‘ಅಯ್ಯೊ ಯಂತ ದುರಂತನಯ್ಯ’ ಎಂದು ಉದ್ಘಾರ ತೆಗೆದ. ನಾನು, ಬರೋಬ್ಬರಿ 26 ವರ್ಷಕ್ಕೆ ಮಗುಚಿಕೊಂಡೆ. ಆಗ ಇದೇ ಲೋಕೇಶ್‍ನಂತೆ ನನಗೂ ದುಃಖ ಒತ್ತರಿಸಿ ಬಂದು ಗೆಳೆಯರು ಸುಮ್ಮನಿರಿಸಿದರೂ ಆಗದೇ ಗೊಳೋ ಎಂದು ಅತ್ತು ಬಿಟ್ಟಿದ್ದೆ. ಎದೆಯ ದುಃಖ ಬಸಿದ ನಂತರ ಸಮಾಧಾನ ಮಾಡಿಕೊಂಡು ಆಲಿಸಿದೆ. ನನ್ನ ಅಳುವಿಗೆ ಕಾರಣನಾಗಿದ್ದ ಗಂಗಾಧರ ಮೂರ್ತಿ ಮಗ ರವಿವರ್ಮನ ಅಳು ನಿಂತಿತ್ತು. ತನ್ನ ತಂದೆಯ ಶವಸಂಸ್ಕಾರ ಮುಗಿದ ಮೇಲೆ ಇದ್ದಕ್ಕಿದ್ದಂತೆ ಅಪ್ಪನನ್ನ ನೆನೆಸಿಕೊಂಡು ಯಾರೂ ಸುಮ್ಮನಿರಿಸಲಾಗದ ಅಳುವಿಗೆ ತುತ್ತಾಗಿತ್ತು. ಈಗ ಸುಸ್ತಾಗಿ ಸುಮ್ಮನಾಗಿತ್ತು. ಆ ದಾರುಣ ಸಂದರ್ಭ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಆವತ್ತು ಅಪ್ಪನನ್ನು ಕಳೆದುಕೊಂಡು ಮಗು ರವಿವರ್ಮ ಅಳುತ್ತಿದ್ದರೆ, ಈಗ ಮಗನನ್ನು ಕಳೆದುಕೊಂಡು ಲೋಕೇಶ್ ದುಃಖಿತನಾಗಿದ್ದ. ಬಹುಶಃ ಇಂತಹ ದುಃಖವೇ ಆತನನ್ನ ಶಿವರಾಮೇಗೌಡನ ವಿರುದ್ಧ ಸೇಡಿಗೆ ಪ್ರಚೋದಿಸಿರಬಹುದು ಎಂದುಕೊಳ್ಳುತ್ತಿರುವಾಗ, ಲೋಕೇಶ್ ‘ಮಗನ ಸಾವಿನ ದುಃಖ ಮರಿಯಕ್ಕೆ ಆಗಾಗ್ಗೆ ಕುಡಿತಿನಿ ಕಣಣ್ಣ’ ಎಂದ. ಈ ಬಗ್ಗೆ ನಾನು ಏನೂ ಹೇಳಲಾಗಲಿಲ್ಲ. ಆದರೆ, ಜೈಲಿನಲ್ಲಿದ್ದ ಅಪ್ಪ ಪೆರೋಲ್ ಮೇಲೆ ಬಂದು ಮಗನನ್ನ ಮಾತನಾಡಿಸಿ ಮುದ್ದಾಡಿ ಮತ್ತೆ ಜೈಲಿಗೆ ಹೋದಾಗ, ಆ ಹುಡುಗ ಏನು ಯೋಚಿಸಿರಬಹುದು. ಶಾಲೆಯಲ್ಲಿ ಯಾರಾದರೂ ಹಂಗಿಸಿರಬಹುದೇ ಎಂದೆಲ್ಲ ಆ ಯೋಚಿಸುತ್ತಿರುವಾಗ ‘ಬರ್ತಿನಿ ಕಣಣ್ಣ ಬಿಡುವು ಮಾಡಿಕೊಂಡು ಸಿಕ್ಕಿ ಯಲ್ಲನು ಹೇಳ್ತಿನಿ’ ಎಂದು ಹೊರಟ. ಈಗ ಅದ್ಯಾವುದರಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡರೂ, ಗಂಗಾಧರ ಮೂರ್ತಿ ಕೊಲೆ ನಡೆದು ಇಪ್ಪತ್ತಾರು ವರ್ಷಗಳಾಗಿವೆ. ಈ ನಡುವೆ ರಾಜಕೀಯವಾಗಿ ಮತ್ತು ಮತೀಯವಾಗಿ ನೂರಾರು ಕೊಲೆಗಳಾಗಿವೆ. ಆದರೂ ಇದೊಂದು ಕೊಲೆಗೆ ಸಂಬಂಧಿಸಿದವರು ಅಶಾಂತಿ ಮತ್ತು ದುಃಖದಿಂದ ತತ್ತರಿಸುತ್ತಿರುವುದು ಗೋಚರವಾಗುತ್ತಿದ್ದಂತೆ ಆಶ್ಚರ್ಯವಾಗತೊಡಗಿತು. ನಿಜಕ್ಕೂ ಅದೊಂದು ಅಮಾಯಕನ ಕೊಲೆಯಾಗಿತ್ತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...