Homeಮುಖಪುಟಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

ಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

- Advertisement -
- Advertisement -

ಆಂಡ್ರಿ ಜ್ಯಾಗಿಂಟ್ಸೆವ್‌ನ ‘The Return’ (2003) ಸಿನಿಮಾ ನೋಡಿದ್ದು ನಾನು 2006ರಲ್ಲಿ. ಈ ಸಿನಿಮಾ ನೋಡಲು ನನಗೆ ಯಾರ ಶಿಫಾರಸ್ಸು ಇರಲಿಲ್ಲ. ಬೆಂಗಳೂರು ಗಾಂಧಿನಗರದಲ್ಲಿದ್ದ ನ್ಯಾಷನಲ್ ಮಾರ್ಕೆಟ್‌ಗೆ ಹೋಗಿ ಈಗಾಗಲೆ ಪರಿಚಿತವಿದ್ದ ನಿರ್ದೇಶಕರ ಒಂದೆರಡು ಸಿನಿಮಾಗಳ ಡಿವಿಡಿ ಜೊತೆ ಇದನ್ನ ರ್‍ಯಾಂಡಮ್ ಆಗಿ ಸೆಲೆಕ್ಟ್ ಮಾಡಿ ತಂದು ನೋಡಿದ್ದೆ. ಇದು ನೋಡಿದ ಕಾಲಕ್ಕೆ ಒಂದು ಸಿನಿಮಾವನ್ನು ಕಾಲ-ದೇಶ, ಅಲ್ಲಿನ ಸಾಮಾಜಿಕ, ರಾಜಕೀಯ, ಧರ್ಮ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಗ್ರಹಿಸುವ ತಿಳಿವಳಿಕೆ ಕೂಡ ಇರಲಿಲ್ಲ. ‘The Return’ ಅನ್ನು ಒಂದು ಕೌಟುಂಬಿಕ ಸಿನಿಮಾವಾಗಿ ಮಾತ್ರ ನೋಡಿ ಇಷ್ಟಪಟ್ಟಿದ್ದೆ. ಅದು ಇತ್ತೀಚಿಗೆ ನೆನಪಾಗಿ ಇಡೀ ಸಿನಿಮಾ ನಮ್ಮ ದೇಶದ ರಾಜಕೀಯ ಸನ್ನಿವೇಶದೊಂದಿಗೆ ತಳಕು ಹಾಕಿಕೊಂಡುಬಿಡ್ತು.

ಆಂಡ್ರಿ ಜ್ಯಾಗಿಂಟ್ಸೆವ್‌ನ ಕುರಿತ ನನ್ನ ಅನುಭವ ಸ್ವಲ್ಪ ಸ್ವಾರಸ್ಯಕರ. ಹಿಂದೆಲ್ಲಾ ಸಿನಿಮಾ ಅಂದ್ರೆ ಅದರಲ್ಲಿ ನಟಿಸಿದ ನಟ-ನಟಿಯರು ಮಾತ್ರ. ಆ ಸಿನಿಮಾದ ನಿರ್ದೇಶಕ ಯಾರು ಎಂಬ ಕೂತೂಹಲ ಇರಲಿಲ್ಲ. ತಿಳಿವಳಿಕೆ ಬಂದ ಹಾಗೆ ನಿರ್ದೇಶಕ ಯಾರು ಅಂತ ತಿಳ್ಕೊಂಡು ಸಿನಿಮಾ ನೋಡುವ ಅಭ್ಯಾಸ ರೂಢಿ ಆಯ್ತು. The Return, The Banishment (2007), Elena (2011) ನೋಡಿದಾಗ, ಅದರಲ್ಲೂ The Banishment (2007) ಸಿನಿಮಾ ಎಷ್ಟು ಇಷ್ಟವಾಗಿತ್ತು ಅಂದ್ರೆ ಎರಡೆರಡು ಸಲ ನೋಡಿಬಿಟ್ಟಿದ್ದೆ. ಆಗಲೂ ಈ ಸಿನಿಮಾಗಳ ನಿರ್ದೇಶಕ ಆಂಡ್ರಿ ಜ್ಯಾಗಿಂಟ್ಸೆವ್ ಎಂದು ತಿಳಿದಿರಲಿಲ್ಲ. 2014ರ ಅವನ Leviathan ಸಿನಿಮಾಗೆ ಕಾನ್‌ನ ಪ್ರತಿಷ್ಠಿತ ಪ್ರಶಸ್ತಿ Palme d’Or ಸಿಕ್ಕಾಗ, ಈ ನಿರ್ದೇಶಕ ಯಾರು? ಇವನ ಹಿಂದಿನ ಸಿನಿಮಾಗಳು ಯಾವುವು? ಎಂದು ಹುಡುಕಿದಾಗ ಆಶ್ಚರ್ಯದ ಜೊತೆ ಸಂತೋಷವಾಯಿತು.

ಆಂಡ್ರಿ ಜ್ಯಾಗಿಂಟ್ಸೆವ್ ಸಿನಿಮಾಗಳು ಮತ್ತು ಅವುಗಳ ಹಿಂದಿನ ತಾತ್ವಿಕತೆ.

ಪ್ರಪಂಚದ ಹಲವಾರು ಸಿನಿಮಾ ನಿರ್ದೇಶಕರಿಗೆ ಅವರದೇ ನೆಲದಲ್ಲಿ ಬಹಳ ವಿರೋಧವಿದೆ. ಅವರ ಕಲೆಯನ್ನ ಆರಾಧಿಸುತ್ತಲೆ ಆ ಕಲೆಯ ಮುಖಾಂತರ ಪ್ರಸ್ತುತ ಪಡಿಸುವ ಸಂಗತಿಗಳ ಬಗ್ಗೆ ಇರುವ ತಕರಾರು ಅದು. ಇರಾನಿನ ಜಫಾರ್ ಫನ್ಹಾಹಿ, ಅಬ್ಬಾಸ್ ಕಿರೊಸ್ತಾಮಿ, ಮಕ್ಬುಲ್ ಬಫ್ ಮುಂತಾದವರಿಗೆ ಅವರದೇ ದೇಶದಲ್ಲಿ ತೀವ್ರ ವಿರೋಧ ಇದೆ. ಆಂಡ್ರಿಗೂ ಕೂಡ. ಆಂಡ್ರಿ ಪಶ್ಚಿಮ ದೇಶದ ಕಲೆ ಮತ್ತು ಸಂಸ್ಕೃತಿಯಿಂದ ಪ್ರಭಾವಿತನಾಗಿದ್ದಾರೆ. ಅವರಿಗೆ ರಷ್ಯಾದ ಕುರಿತು ಒಳ್ಳೆಯ ಅಭಿಪ್ರಾಯಗಳಿಲ್ಲ ಮತ್ತು ರಷ್ಯಾ ಪರಿಸ್ಥಿತಿಯನ್ನು ಬಹಳ ಕೆಟ್ಟದಾಗಿ ತಮ್ಮ ಸಿನಿಮಾಗಳಲ್ಲಿ ಪ್ರಸ್ತುತಪಡಿಸುತ್ತಾರೆ ಎಂಬುದು ಅಲ್ಲಿನವರ ತಕರಾರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಂಡ್ರಿ ತನ್ನ ವೃತ್ತಿ ಜೀವನದ ಇಪ್ಪತ್ತು ವರ್ಷಗಳಲ್ಲಿ ಇದುವರೆಗೂ ಮಾಡಿರುವುದು ಕೇವಲ ಐದು ಸಿನಿಮಾಗಳು ಮಾತ್ರ. ಪ್ರತಿ ಸಿನಿಮಾಗೂ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಅಂತರವಿದೆ. ಆಂಡ್ರಿಯ ಬಹುತೇಕ ಎಲ್ಲಾ ಸಿನಿಮಾಗಳ ಕೇಂದ್ರ ವಸ್ತು ಕುಟುಂಬ ಮತ್ತು ಕುಟುಂಬ ಸದಸ್ಯರ ಸಾವು ಅಥವಾ ಅವರಲ್ಲಿ ಯಾರಾದರೂ ಅದೃಶ್ಯವಾಗುವುದು. ಈ ಕುಟುಂಬಗಳು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿವೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಕುಟುಂಬದ ಮಕ್ಕಳು ಅನಾಥರಾಗುತ್ತಿದ್ದಾರೆ ಇಲ್ಲಾ ಕಾಣೆಯಾಗುತ್ತಿದ್ದಾರೆ. ಈ ಕುಟುಂಬಗಳಲ್ಲಿ ಮಾನಸಿಕ ಕ್ಷೋಭೆ ನೆಲೆಯೂರಿದೆ. ಇದು ಕೇವಲ ಒಂದು ಕುಟುಂಬದ ಸಮಸ್ಯೆ ಅಲ್ಲ, ಇದು ಸಮಕಾಲೀನ ರಷ್ಯಾದ ಬಿಕ್ಕಟ್ಟು ಮತ್ತು ಮಾನಸಿಕ ಕ್ಷೋಭೆಯೂ ಹೌದು. ಒಂದು ಕುಟುಂಬದ ಕಥೆಯ ಜೊತೆಜೊತೆಯಲ್ಲೆ ತನ್ನ ದೇಶದ ಸಮಕಾಲೀನ ವಾಸ್ತವಗಳನ್ನ ಬಹಳ ಸೂಕ್ಷ್ಮವಾಗಿ ದಾಟಿಸುವುದು ಅಂಡ್ರಿ ಸಿನಿಮಾಗಳ ಹೆಚ್ಚುಗಾರಿಕೆ. The Return, The Banishment, Elena ಸಿನಿಮಾಗಳಲ್ಲಿ ಕುಟುಂಬದ ಕಥೆಯೊಂದಿಗೆ ಸಮಕಾಲೀನ ರಷ್ಯಾದ ಪರಿಸ್ಥಿತಿ ಬಹಳ subtle ಆಗಿ ಕಾಣಿಸಿಕೊಂಡರೆ Leviathan ಮತ್ತು Loveless ಸಿನಿಮಾಗಳಲ್ಲಿ ಬಹಳ Loud ಆಗಿ ಕೇಳಿಸುತ್ತದೆ.

ಆಂಡ್ರಿ ಸಿನಿಮಾಗಳ ಮೂಲ ತಂತು ’ಮನುಷ್ಯತ್ವ’. ತಮ್ಮ ಸಿನಿಮಾಗಳು ಜಾರ್ಜಿಯಾ ಮೂಲದ ಸೋವಿಯತ್ ಫಿಲಾಸಫರ್ ಮೆರಬ್ ಮಮರ್ದಾಶವಿಲಿಯ ಆಲೋಚನೆಯಿಂದ ಪ್ರಭಾವಿತವಾಗಿವೆ ಎಂದು ಆಂಡ್ರಿ ಕೂಡ ಕೆಲವು ಕಡೆ ಇದನ್ನ ಪ್ರಸ್ತಾಪ ಮಾಡಿದ್ದಾರೆ. Alyssa Deblasio ತನ್ನ ‘The Filmmaker’s Philosopher’ ಎಂಬ ಪುಸ್ತಕದಲ್ಲಿ ಹೇಗೆ ಮಮರ್ದಾಶವಿಲಿ ಆಲೋಚನೆಗಳು ರಷ್ಯಾದ ಕೆಲವು ನಿರ್ದೇಶಕರ ಸಿನಿಮಾಗಳ ಮೇಲೆ ಪ್ರಭಾವ ಬೀರಿವೆ ಎಂದು ಚರ್ಚಿಸುತ್ತಾರೆ.

’ಮನುಷ್ಯ ಅಂದರೆ ಅದು ಮನುಷ್ಯತ್ವದ ಕಡೆ ಚಲಿಸುವ ಪ್ರಯತ್ನ’; ಮಮರ್ದಾಶವಿಲಿಯ ಈ ಒಂದು ಮಾತನ್ನು ಪ್ರಸ್ತಾಪಿಸುವ ಆಂಡ್ರಿ ’ಈ ಮನುಷ್ಯತ್ವದ ಮಾನದಂಡವನ್ನು ಅರ್ಥೈಸುವುದು ಕೇವಲ ನಮ್ಮೊಳಗಿನ ಮನುಷ್ಯ ಪ್ರಯತ್ನದಿಂದ ಮಾತ್ರವೆ ಹೊರತು ಯಾವುದೇ ಹೊರಗಿನ ಒತ್ತಡ, ವ್ಯಕ್ತಿ, ಪ್ರಾಧಿಕಾರ ಅಥವಾ ಷರತ್ತುಗಳಿಂದ ಅಲ್ಲ’ ಎಂದು ಹೇಳುತ್ತಾರೆ. ಪ್ರಸ್ತುತ ರಷ್ಯಾದ ರಾಜಕೀಯ, ಐತಿಹಾಸಿಕ ಸಂಗತಿಗಳು ಮತ್ತು ಆಧುನಿಕತೆಯ ಸಂಕೀರ್ಣ ಬದುಕು ಇವೆಲ್ಲಾ ಮನುಷ್ಯ ಮನುಷ್ಯನ ನಡುವಿನ ಸಂಪರ್ಕ-ಸಂವಹನವನ್ನು ಹೇಗೆ ದುರ್ಬಲಗೊಳಿಸಿವೆ; ಈ ದುರ್ಬಲಗೊಂಡ ಸಂವಹನದಿಂದ ಮನುಷ್ಯ ಮನುಷ್ಯತ್ವದ ಕಡೆ ಚಲಿಸುವ ಪ್ರಯತ್ನದಲ್ಲಿ ಹೇಗೆ ಸೋಲುತ್ತಿದ್ದಾನೆ; ಈ ದುರ್ಬಲದ ಸಂವಹನ ಪೀಳಿಗೆಯಿಂದ ಪೀಳಿಗೆಗೆ ಹೇಗೆ ವರ್ಗಾವಣೆಯಾಗುತ್ತಿರುತ್ತದೆ ಎಂಬುದನ್ನು ತನ್ನ ಸಿನಿಮಾದ ಪಾತ್ರಗಳ ಮೂಲಕ ಆಂಡ್ರಿ ಚರ್ಚಿಸುತ್ತಾನೆ.

The Return ಸಿನಿಮಾದಲ್ಲಿ 12 ವರ್ಷದಿಂದ ಕಾಣೆಯಾಗಿದ್ದ ತಂದೆ ಒಂದು ದಿನ ದಿಢೀರ್ ಎಂದು ಪ್ರತ್ಯಕ್ಷನಾಗುತ್ತಾನೆ. ಈ ಹನ್ನೆರಡು ವರ್ಷ ತಂದೆ ಮಕ್ಕಳ ನಡುವೆ ಯಾವುದೇ ಸಂವಹನ ಇಲ್ಲ. ತಂದೆ ತನ್ನ ಮಕ್ಕಳ ಯಾವ ಜವಾಬ್ದಾರಿಯನ್ನು ನಿರ್ವಹಿಸಿಲ್ಲ. ಆದರೆ ಆ ತಂದೆಗೆ ತನ್ನ ಪಿತೃತ್ವದ ಅಧಿಕಾರ ಮಾತ್ರ ಚಲಾಯಿಸಬೇಕು. Loveless ಸಿನಿಮಾದಲ್ಲಿ ಝೆನಿಯಾಗೆ ತನ್ನ ಮಗನ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಮಕ್ಕಳನ್ನು ಹೆರೋದು ಮತ್ತು ಸಾಕುವುದು, ಒಂದು ರೀತಿಯ ದುಡಿಮೆ ಎಂಬುದು ಅವಳ ಭಾವನೆ. ಈ ತರಹದ ಭಾವನೆ ತಾನಾಗಿ ಬಂದದ್ದಲ್ಲ. ಝೆನಿಯಾಳ ಬಾಲ್ಯದಲ್ಲಿ ಅವಳ ತಾಯಿ ಆ ರೀತಿ ನಡೆದುಕೊಂಡಿರುತ್ತಾಳೆ. ಈ ರೀತಿ ಸಂಬಂಧಗಳ ನಡುವಿನ ಸಂವಹನದ ಸೋಲುಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಿರುತ್ತವೆ.

ಈ ರೀತಿಯ ಸಂವಹನದ ಬಿರುಕು ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಹೇಗೆ ಪ್ರಮುಖವಾದ ಪಾತ್ರ ವಹಿಸಿದೆ ಎಂಬುದನ್ನು ಆಂಡ್ರಿ ತನ್ನ ಸಿನಿಮಾದಲ್ಲಿ ಬಹಳ ಸೂಚ್ಯವಾಗಿ ತೋರಿಸುತ್ತಾರೆ. Elena ಮತ್ತು Loveless ಸಿನಿಮಾಗಳಲ್ಲಿ ಬರುವ ಪಾತ್ರಗಳು ತನ್ನೊಳಗಿನ ಸಹಜ ಆಲೋಚನೆಯಿಂದ ನೈತಿಕವಾಗಿ ಸುಧಾರಿಸಲು ಸಾಧ್ಯವಿದ್ದರೂ, ಅವರ ಏಕಾಗ್ರತೆಯನ್ನ ಹೇಗೆ ಟಿ.ವಿಯ ಕೆಟ್ಟ-ಭ್ರಷ್ಟ ಕಾರ್ಯಕ್ರಮಗಳು ಮತ್ತು ಇಂಟರ್ನೆಟ್‌ನಲ್ಲಿ ಸಂಗತಿಗಳು ದಿಕ್ಕು ತಪ್ಪಿಸುತ್ತಿವೆ ಮತ್ತು ಇವು ಮನುಷ್ಯನ ಸಹಜ ಮಾನಸಿಕ ಬೆಳವಣಿಗೆ ಮತ್ತು ಸಾಮರ್ಥ್ಯವನ್ನ ಕುಂಠಿತಗೊಳಿಸಿವೆ ಎಂಬುದನ್ನು ಹಿಡಿದಿಡುತ್ತಾರೆ.

ಆಂಡ್ರಿ ಸಿನಿಮಾಗಳಲ್ಲಿ ಕಲಾವಂತಿಕೆ ಅದ್ಭುತವಾಗಿರುತ್ತದೆ. ಪ್ರತಿ ಸಿನಿಮಾದ ಪ್ರಾರಂಭದಲ್ಲಿನ Long ಮತ್ತು Wide ಸಂಯೋಜಿತ ಸ್ಥಿರ ದೃಶ್ಯಗಳ Montageಗಳು ಸಿನಿಮಾದಲ್ಲಿ ಮುಂದೆ ಬರುವ ಕಥೆಗೆ ಸಿದ್ಧತೆಯನ್ನು ಒದಗಿಸಿ, ಪ್ರೇಕ್ಷಕನನ್ನು ಆಂಡ್ರಿ ತನ್ನ ಜಗತ್ತಿಗೆ ಸೆಳೆದುಬಿಡುತ್ತಾರೆ ಆಂಡ್ರಿ ಮೂಲತಃ ರಂಗಕರ್ಮಿಯಾಗಿದ್ದರಿಂದಲೋ ಏನೋ ಪ್ರತಿ ದೃಶ್ಯ, mise-en-scene ಬಹಳ ಕಲಾವಂತಿಕೆಯಿಂದ ಕೂಡಿರುತ್ತವೆ. ಸಿನಿಮಾದಲ್ಲಿ ಬರುವ ರಷ್ಯಾದ ಹಳೆಯ ಕಟ್ಟಡಗಳಾಗಲೀ, ಭೂದೃಶ್ಯ, ಋತುಮಾನ, ಮನೆಯೊಳಗಿನ ದೃಶ್ಯಗಳಾಗಲೀ, ಇವೆಲ್ಲಾ ಕಥೆಗೆ ಪೂರಕವಾಗಿ ಸಂಯೋಜಿತಗೊಂಡಿರುತ್ತವೆ. ಈ ಕಾರಣದಿಂದಲೇ ಇರಬಹುದು, ರಷ್ಯಾ ರಾಜಕೀಯ ಮತ್ತು ಸಮಾಜದ ಬಗ್ಗೆ ಆಂಡ್ರಿಯ ಕಟು ವಿಮರ್ಶೆಗೆ ತಕರಾರುಗಳನ್ನು ಇಟ್ಟುಕೊಂಡೇ ಆ ದೇಶದ ವಿಮರ್ಶಕರು ಆಂಡ್ರಿ ಕಲಾವಂತಿಕೆಯನ್ನು ಆರಾಧಿಸುತ್ತಾರೆ.

ಮನುಷ್ಯತ್ವವನ್ನೆ ತಮ್ಮ ಸಿನಿಮಾದ ಮೂಲ ಆಶಯವಾಗಿಟ್ಟುಕೊಂಡು ತಮ್ಮ ಸುತ್ತಲಿನ ಸಮಾಜವನ್ನು ಬಹಳ ಆಳವಾಗಿ ನೋಡುವ-ವಿಶ್ಲೇಷಿಸುವ, ಸಮಾಜದ ನಡುವಿರುವ ಅಮಾನುಷತೆಯನ್ನು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಪ್ರಸ್ತುತಪಡಿಸುವ, ಅಧಿಕಾರ ಕೇಂದ್ರಗಳಾದ ಪ್ರಭುತ್ವ ಮತ್ತು ಧರ್ಮವನ್ನು ಕಟು ವಿಮರ್ಶೆಗೆ ಒಳಪಡಿಸುವ, ಮನುಷ್ಯ ಮತ್ತು ಸಮಾಜದ ಪ್ರಸ್ತುತದ ಸ್ಥಿತಿಗೆ ಪ್ರಾಮಾಣಿಕವಾದ ಕಾರಣಗಳನ್ನು ತಮ್ಮ ಸಿನಿಮಾಗಳ ಮೂಲಕ ಹುಡುಕುವ ಮತ್ತು ಸಿನಿಮಾ ಎಂಬ ಕಲಾ ಮಾಧ್ಯಮವನ್ನು ಅದರ ಎಲ್ಲಾ ಸಾಧ್ಯತೆಗಳೊಂದಿಗೆ ಅಷ್ಟೆ ಅದ್ಭುತವಾಗಿ ಬಳಸಿಕೊಳ್ಳುವ ಸಮಕಾಲೀನದ ಕೆಲವೇ ಕೆಲವು ಸಿನಿಮಾ ನಿರ್ಮಾತೃಗಳಲ್ಲಿ ಆಂಡ್ರಿ ಜ್ಯಾಗಿಂಟ್ಸೆವ್ ಪ್ರಮುಖರು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...