ಕರ್ನಾಟಕ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರಾಜ್ಯದ 65 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕರ್ನಾಟಕ ರಾಜ್ಯೋತ್ಸವದಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸಚಿವ ಸಿ.ಟಿ.ರವಿ ಇಂದು ಬಿಡುಗಡೆಗೊಳಿಸಿದ್ದಾರೆ.
2020ರ ಸಾಲಿನ "ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕೃತರ ಪಟ್ಟಿಯನ್ನು ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. #ರಾಜ್ಯೋತ್ಸವಪ್ರಶಸ್ತಿ pic.twitter.com/DVWeCivibZ
— C T Ravi ?? ಸಿ ಟಿ ರವಿ (@CTRavi_BJP) October 28, 2020
ಈ ಬಾರಿಯ ರಾಜ್ಯೋತ್ಸವ ಪುರಸ್ಕೃತರು
ಸಾಹಿತ್ಯ ಕ್ಷೇತ್ರ: ಪ್ರೊ.ಸಿ.ಪಿ.ಸಿದ್ಧಾಶ್ರಮ (ಧಾರವಾಡ), ವಿ.ಮುನಿ ವೆಂಕಟಪ್ಪ (ಕೋಲಾರ), ರಾಮಣ್ಣ ಬ್ಯಾಟಿ (ಗದಗ), ವಲೇರಿಯನ್ ಡಿಸೋಜ (ವಲ್ಲಿವಗ್ಗ, ದಕ್ಷಿಣ ಕನ್ನಡ), ಡಿ.ಎನ್.ಅಕ್ಕಿ (ಯಾದಗಿರಿ).
ಸಂಗೀತ ಕ್ಷೇತ್ರ: ಹಂಬಯ್ಯ ನೂಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ), ಬಿ.ವಿ.ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ (ಬೆಂಗಳೂರು ನಗರ), ಕೆ.ಲಿಂಗಪ್ಪ ಶೇರಿಗಾರ (ದಕ್ಷಿಣ ಕನ್ನಡ)
ನ್ಯಾಯಾಂಗ ವಿಭಾಗ: ಕೆ.ಎನ್.ಭಟ್ (ಬೆಂಗಳೂರು), ಎಂ.ಕೆ.ವಿಜಯಕುಮಾರ (ಉಡುಪಿ)
ಮಾಧ್ಯಮ ಕ್ಷೇತ್ರ: ಸಿ.ಮಹೇಶ್ವರನ್ (ಮೈಸೂರು), ಟಿ.ವೆಂಕಟೇಶ್ (ಬೆಂಗಳೂರು ನಗರ)
ಯೋಗ: ಡಾ.ಎ.ಎಸ್.ಚಂದ್ರಶೇಖರ (ಮೈಸೂರು)
ಶಿಕ್ಷಣ ಕ್ಷೇತ್ರ: ಎಂ.ಎನ್.ಷಡಕ್ಷರಿ (ಚಿಕ್ಕಮಗಳೂರು), ಡಾ.ಆರ್.ರಾಮಕೃಷ್ಣ (ಚಾಮರಾಜನಗರ), ಡಾ.ಎಂ.ಜಿ.ಈಶ್ವರಪ್ಪ (ದಾವಣಗೆರೆ), ಡಾ.ಪುಟ್ಟಸಿದ್ದಯ್ಯ (ಮೈಸೂರು), ಅಶೋಕ್ ಶೆಟ್ಟರ್ (ಬೆಳಗಾವಿ), ಡಿ.ಎಸ್.ದಂಡಿನ್ (ಗದಗ)
ಸಂಕೀರ್ಣ: ಡಾ ಕೆ.ವಿ.ರಾಜು (ಕೋಲಾರ), ನಂ.ವೆಂಕೋಬರಾವ್ (ಹಾಸನ), ಡಾ.ಕೆ.ಎಸ್.ರಾಜಣ್ಣ (ಮಂಡ್ಯ), ವಿ.ಲಕ್ಷ್ಮಿನಾರಾಯಣ (ಮಂಡ್ಯ).
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕದಿರಲು ಹೋರಾಟಗಾರ ರಾಮಕೃಷ್ಣಪ್ಪ ನೀಡಿದ ಒಂಬತ್ತು ಕಾರಣಗಳು
ಕ್ರೀಡಾ ಕ್ಷೇತ್ರ: ಹೆಚ್.ಬಿ.ನಂಜೇಗೌಡ (ತುಮಕೂರು), ಉಷಾರಾಣಿ (ಬೆಂಗಳೂರು ನಗರ)
ಸಂಘ-ಸಂಸ್ಥೆ: ಯೂತ್ ಫಾರ್ ಸೇವಾ, ಬೆಟರ್ ಇಂಡಿಯಾ (ಬೆಂಗಳೂರು ನಗರ), ದೇವದಾಸಿ ಸ್ವಾವಲಂಬನ ಕೇಂದ್ರ (ಬಳ್ಳಾರಿ), ಯುವ ಬ್ರಿಗೇಟ್ (ಬೆಂಗಳೂರು ಗ್ರಾಮಾಂತರ), ಧರ್ಮೋತ್ಥಾನ ಟ್ರಸ್ಟ್ (ಧರ್ಮಸ್ಥಳ)
ಸಮಾಜಸೇವೆ: ಎನ್.ಎಸ್.ಕುಂದರಗಿ ಹೆಗಡೆ (ಉತ್ತರ ಕನ್ನಡ, ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಮೋಹಿನಿ ಸಿದ್ದೇಗೌಡ (ಚಿಕ್ಕಮಗಳೂರು), ಮಣೆಗಾರ ಮಿರಾನ್ ಸಾಹೇಬ್ (ಉಡುಪಿ).
ವೈದ್ಯಕೀಯ: ಡಾ.ಅಶೋಕ್ ಸೊನ್ನದ್ (ಬಾಗಲಕೋಟೆ), ಡಾ.ಬಿ.ಎಸ್.ಶ್ರೀನಾಥ (ಶಿವಮೊಗ್ಗ), ಡಾ.ಎ.ನಾಗರತ್ನ (ಬಳ್ಳಾರಿ), ಡಾ.ವೆಂಕಟಪ್ಪ (ರಾಮನಗರ)
ಕೃಷಿ: ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್ (ಬೀದರ್), ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ (ಚಿತ್ರದುರ್ಗ), ಡಾ.ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ (ಕಲಬುರ್ಗಿ).
ಪರಿಸರ: ಅಮರ ನಾರಾಯಣ (ಚಿಕ್ಕಬಳ್ಳಾಪುರ), ಎನ್.ಡಿ. ಪಾಟೀಲ್ (ವಿಜಯಪುರ)
ವಿಜ್ಞಾನ/ತಂತ್ರಜ್ಞಾನ: ಪ್ರೋ ಉಡುಪಿ ಶ್ರೀನಿವಾಸ, ಡಾ.ಚಿಂದಿ ವಾಸುದೇವಪ್ಪ (ಶಿವಮೊಗ್ಗ)
ಸಹಕಾರ: ಡಾ.ಸಿ.ಎನ್.ಮಂಚೇಗೌಡ (ಬೆಂಗಳೂರು ನಗರ)
ಯಕ್ಷಗಾನ: ಬಂಗಾರ್ ಆಚಾರಿ (ಚಾಮರಾಜನಗರ), ಎಂ.ಕೆ. ರಮೇಶ್ ಆಚಾರ್ಯ (ಶಿವಮೊಗ್ಗ)
ರಂಗಭೂಮಿ: ಅನಸೂಯಮ್ಮ (ಹಾಸನ), ಎಚ್.ಷಡಕ್ಷರಪ್ಪ (ದಾವಣಗೆರೆ), ತಿಪ್ಪೇಸ್ವಾಮಿ (ಚಿತ್ರದುರ್ಗ).
ಚಲನಚಿತ್ರ: ಬಿ.ಎಸ್.ಬಸವರಾಜ್ (ತುಮಕೂರು), ಆಪಾಢಾಂಡ ತಿಮ್ಮಯ್ಯ ರಘು (ಕೊಡಗು).
ಚಿತ್ರಕಲೆ: ಎಂ.ಜೆ.ವಾಚೇದ್ಮಠ (ಧಾರವಾಡ)
ಜಾನಪದ: ಗುರುರಾಜ ಹೊಸಕೋಟೆ (ಬಾಗಲಕೋಟೆ), ಡಾ.ಹಂಪನಹಳ್ಳಿ ತಿಮ್ಮೇಗೌಡ (ಹಾಸನ).
ಇದನ್ನೂ ಓದಿ: ಕನ್ನಡಿಗರು ಎಂದೂ ಮರೆಯದ ಡಾ.ರಾಜ್ ಅವರ ಟಾಪ್-5 ಚಿತ್ರಗಳು!
ಶಿಲ್ಟಕಲೆ: ಎನ್.ಎಸ್.ಜನಾರ್ದನಮೂರ್ತಿ (ಮೈಸೂರು).
ನೃತ್ಯ: ವಿದುಷಿ ಜ್ಯೋತಿ ಪಟ್ಟಾಭಿರಾಮ್
ಜಾನಪದ/ತೊಗಲು ಗೊಂಬೆಯಾಟ: ಕೇಶಪ್ಪ ಶಿಳ್ಳೇಕ್ಯಾತರ (ಕೊಪ್ಪಳ)
ಈ 65 ಸಾಧಕರಿಗೆ ನವೆಂಬರ್ ಒಂದರಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.