Homeಅಂಕಣಗಳುಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

- Advertisement -
- Advertisement -

ಎದುರು ಬರುತ್ತಿರುವವನು ಕಾಂಗ್ರೆಸ್ ಕಾರ್ಯಕರ್ತ ಎಂದು ಗೊತ್ತಾದರೆ ಸಾಕು ಭಕ್ತಿಯಿಂದ ಕೈ ಮುಗಿದು, ’ದಯಮಾಡಿ ನನ್ನನ್ನ ಕಾಂಗ್ರೆಸ್‌ಗೆ ಸೇರಿಸಿ’ ಎಂದು ಕೇಳಿಕೊಳ್ಳುತ್ತಿದ್ದ ಕಡೂರು ದತ್ತಣ್ಣ ಕಾಂಗ್ರೆಸ್ ಸೇರಿಯೂ ಆಯ್ತು; ಅದನ್ನು ಬಿಟ್ಟು ಮತ್ತೆ ಜೆಡಿಎಸ್ ಸೇರಿ ಕಡೂರಿನ ಕ್ಯಾಂಡೇಟ್ ಆಗಿಯೂ ಆಯ್ತು. ಕಡೂರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಂತಹ ವ್ಯತ್ಯಾಸವಿಲ್ಲ, ಹಾಗಾಗಿ ದತ್ತಣ್ಣ ಎಲ್ಲಿ ನಿಂತರೂ ಮೂರನೆ ಸ್ಥಾನ ಕಾಯಂ ಆಗಿದೆಯಂತಲ್ಲಾ, ಥೂತ್ತೇರಿ.

*****

ಸಿ.ಸೋಮಶೇಖರ ನೆನಪಿಸಿಕೊಳ್ಳಿ; ಅಧಿಕಾರಿಯಾಗಿ ಅಖಂಡ ಐಶ್ವರ್ಯ ಹೊಂದಿದ್ದವರು ಮತ್ತು ಲಂಕೇಶ್‌ರಿಂದ ಜನ್ಮಾಪಿ ನೆನೆಸಿಕೊಳ್ಳುವಂತೆ ಟೀಕಿಸಿಕೊಂಡಿದ್ದವರು. ಇದಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಅರೆದು ಕುಡಿಯಲು ಪ್ರಯತ್ನಿಸಿ, ಅರಗಿಸಿಕೊಳ್ಳಲಾಗದೆ ವಾಂತಿ ಮಾಡಿಕೊಂಡಿದ್ದರು. ಈತ ವಚನ ಹೇಳುತ್ತಿರುವುದು ಬಿಜೆಪಿ ಪಡಸಾಲೆಯಲ್ಲಿ, ಏಕೆಂದರೆ ಬಿಜೆಪಿ ಗರ್ಭಗುಡಿಗೆ ಆತ ಹೋಗುವಂತಿಲ್ಲ. ಬಿಜೆಪಿ ಲಿಂಗಾಯಿತರಿಗೆ ಗೌರವ ತಂದುಕೊಟ್ಟ ಪಕ್ಷ ಎಂದು ಹೇಳಿಕೊಂಡು ತಿರುಗುತ್ತಿರುವ ಈತ ತುಮಕೂರು ಜಿಲ್ಲೆಯ ಡಿ.ಸಿಯಾಗಿದ್ದಾಗ, ಇಂಥದೇ ಚುನಾವಣೆ ಬಂದು ಮೊದಲು ಆ ಡಿ.ಸಿಯನ್ನ ವರ್ಗಮಾಡಿ ಎಂದು ದೇವೇಗೌಡರು ಹಟ ಹಿಡಿದದ್ದು ಯಾಕೆ ಅಂತ ಈಗ ಗೊತ್ತಾಗುತ್ತಿದೆಯಲ್ಲಾ, ಥೂತ್ತೇರಿ.

*****

ಬಿಜೆಪಿ ಪರವಾಗಿ ಸಿ.ಸೋಮಶೇಖರ್ ನಂತಹವರು ಎಷ್ಟೇ ವಕಾಲತ್ತು ವಹಿಸಿದರೂ ಈಶ್ವರಪ್ಪನಿಗಿರುವ ಪಕ್ಷನಿಷ್ಠೆ ಇಡೀ ದೇಶದಲ್ಲಿಯೇ ಯಾರಿಗೂ ಇಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಅದಕ್ಕಾಗಿಯೇ ಪ್ರಧಾನಿಯವರೇ ಫೋನು ಮಾಡಿ ಅಭಿನಂದಿಸಿ, ’ಈಶ್ವರಪ್ಪಾಜಿ, ತು ಅಸಾಧಾರಣ ವ್ಯಕ್ತಿ ಹೈ. ಏಕ್ ಬಾರ್ ಇದರ್ ಆನ’ ಎಂದರಂತಲ್ಲಾ. ಆ ಕೂಡಲೇ ಕೇಸರಿ ಮೈದುಂಬಿದಂತಾದ ಈಶ್ವರಪ್ಪ, ’ಆ ಜಗದೀಶ್ ಶೆಟ್ಟರ್ ಕಾಂಗ್ರೆಸ್ಸಲ್ಲಿ ಸಾಯಿಲಿ, ನಾನು ಮಾತ್ರ ಬಿಜೆಪಿಲಿದ್ದೇ ಹೋಯ್ತಿನಿ’ ಎಂದರಂತಲ್ಲಾ. ಇಂತಹ ಕಠೋರ ಶಪಥ ಮಾಡಿದ ಈಶ್ವರಪ್ಪನನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಅಲ್ಲವೆ! ಅದಕ್ಕಾಗಿ ಫೋನು ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ..’

“ಹಲೋ ಯಾರೂ?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿಗೋದ್ರಿ, ಬನ್ರಿ ಮಾತಾಡನ”.

“ಡೆಡ್‌ಲೈನಿಗೆ ಒಂದೆರಡು ಮಾತ್ ಹೇಳಿ ಸಾರ್.”

“ಏನು ಮಾತಾಡದ್ರಿ.. ಯಾವುದ್ಕು ಉತ್ಸಾಹ ಇಲ. ಸುಮ್ಮನೆ ತೋರಿಕೆಗೆ ಏನೇನೋ ಮಾತಾಡ್ತಿನಿ.”

“ಅದು ಗೊತ್ತು ಸಾರ್, ನಿಮ್ಮತ್ರ ಸೇವಕನಂಗಿದ್ದ ಹುಡುಗನ ಪರ ಓಟು ಕೇಳಿದರಂತೆ. ಹಿಂಸೆ ನ್ಯನಿಸಿಗಳಕ್ಕಾಗಲ್ಲ.”

“ಆದ್ರು ಕೇಳಬೇಕಲ್ಲ ಹೇಳಿ.”

“ಯಾಕ್ಸರ್ ಬಿಜೆಪಿಗಳು ನಿಮಿಗೆ ಇಂತ ಅವುಮಾನ ಮಾಡಿದ್ರು. ಬಿಜೆಪಿ ಇತಿಹಾಸದಲ್ಲಿ ಯಾರಿಗೂ ಇಂತ ಅವುಮಾನಾಗಿಲ್ಲ ಸಾ.”

“ಶೆಟ್ಟರ್‌ಗಿಂತ ಅವುಮಾನಾಗಿಲ್ಲ ಬುಡ್ರಿ.”

“ಅಂಗಂತಿರಾ?”

ಇದನ್ನೂ ಓದಿ: ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

“ಊ ಮತ್ತೆ. ಮುಖ್ಯಮಂತ್ರಿಯಾಗಿದ್ದೋರಿಗೆ ಮಿಸ್ ಕಾಲ್ ಕೊಟ್ಟು, ಇವುರು ಪೋನ್ ಮಾಡಿದಾಗ ನಿಮಗೆ ಟಿಕೆಟ್ ಇಲ್ಲ ಅಂದುಬುಟ್ಟು ಕಟ್ ಮಾಡ್ಯವುರಲ್ಲ, ಇದವು ಅವಮಾನ ಅಲವೆ?”

“ನಿಮ್ಮ ಅವುಮಾನದ ಮುಂದೆ ಅವುರದೇನೂ ಅಲ್ಲ ಸಾರ್.”

“ಅದ್ಯಂಗರೀ?”

“ನೀವು ಬಿಜೆಪಿ ಕಟ್ಟಿ ಬೆಳೆಸಿದ ಮಹಾನಾಯಕ. ಶಿವಮೊಗ್ಗದಲ್ಲಿ ಪಾರ್ಟಿಗಾಗಿ ಬಂದ್, ಗೋಲಿಬಾರು, ಲೂಟಿ ಯಲ್ಲಾನು ಮಾಡಿಸಿದ್ದಿರಿ. ಕೆ.ಹೆಚ್.ಶ್ರೀನಿವಾಸ್ ಊರಾಬುಟ್ಟೋಗಂಗೆ ಮಾಡಿದ್ದಿರಿ, ಮುಸ್ಲಿಮರ ಮದುವೆಗೂ ದುಡ್ಡುಕೊಟ್ಟಿದ್ದಿರಿ. ತಮುಳು ಜನ ಸಂಘಟಿಸಿ ಅವುರನೆಲ್ಲಾ ಬಸ್ಸಲ್ಲಿ ಸರದಿ ಪ್ರಕಾರ ತುಂಬಿಕಂಡೋಗಿ ತಮುಳು ನಾಡಿನ ತಂಜಾವ್ಯೂರು, ರಾಮೇಶ್ವರ, ಚಿದಂಬರ, ಮದುರೆ, ಪಳನಿ ಯಲ್ಲಾನು ತೋರಿಸಿಗಂಡು ಬಂದು ಸುರದ್ದಿದ್ದಿರಿ. ಹಂಗೆ ನೋಡಿದ್ರೆ ಆ ಶಿವಮೊಗ್ಗದಲ್ಲಿ ನಿಮ್ಮನ್ನ ಸೋಲಸಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ. ಇದ್ಯಾವುದನ್ನು ಲೆಕ್ಕಕ್ಕೆ ತಗೊಳ್ದೆ, ಕೇವಲ ಸಿದ್ದರಾಮಯ್ಯನ ತಲೆ ಕಡಿತಿನಿ ಅಂದಿದ್ದ ಮಾತ್ರಕ್ಕೆ ನಿಮ್ಮ ಸೇವಕನಿಗೆ ಟಿಕೆಟ್ ಕೊಟ್ಟು ನಿಮಗಿಲ್ಲ ಅಂದರಲ್ಲಾ ಸಾರ್. ನನಗೇ ಇಷ್ಟು ಹಿಂಸೆ ಆಯ್ತಾ ಅದೆ. ನೀವ್ಯಂಗೆ ತಡ್ಕೋತಾ ಇದೀರಿ ಅನ್ನದೆ ಆಶ್ಚರ್ಯ ಸಾರ್.”

“ಅದು ಪಾರ್ಟಿ ನಿಷ್ಟೆ ಕಂಡ್ರಿ, ನನಿಗೆ ಇಲ್ಲಿವರಿಗೂ ಸಿಕ್ಕಿದೆಲ್ಲಾ ಪಾರ್ಟಿಯಿಂದ. ಪಾರ್ಟಿ ನಮ್ಮ ತಾಯಿಯಿದ್ದಂಗೆ.”

“ಪಾರ್ಟಿ ತಾಯಿಯಾದ್ರೆ, ತಂದೆ ಯಾರು ಸಾರ್?”

“ಪೊಲಿಟಿಕೆಲ್ ಪಾರ್ಟಿ ಅಂದ್ರೆ ತಾಯಿ, ಅಲ್ಲಿ ತಂದೆಯಿರಲ್ಲ”

“ಅಂದ್ರೆ ಪೊಲಿಟಿಕಲ್ ಪಾರ್ಟಿಗೆ ತಂದೆಯಿರಲ್ವ ಸಾರ್?”

“ರಿ ತಲೆಕೆಟ್ಟಂಗೆ ಮಾತಾಬ್ಯಾಡಿ. ನಮ್ಮನ್ನ ಬೆಳೆಸಿ ಸ್ಥಾನಮಾನ ಕೊಟ್ಟ ಪಾರ್ಟಿ ತಾಯಿಗೆ ಸಮಾನ ಅಂತ ನಾನು ಹೇಳಿದ್ದು.”

“ನನಿಗೇನೂ ಈ ಹೋಲಿಕೆನೆ ಸರಿಯಿಲ್ಲ ಸಾರ್. ಅಪ್ರಭುದ್ಧ ಮೂರ್ಖರು ಮಾತ್ರ ಇಂತ ಹೋಲಿಕೆ ಮಾಡಬಲ್ಲರು.”

“ಯಾಕ್ರಿ ಅಂಗಂತಿರಿ?”

“ಮತ್ತಿನ್ನೇನು ಸಾರ್, ಹೆತ್ತು ಹಾಲು ಕುಡಿಸಿ ಬೆಳೆಸೋ ತಾಯಿ ಎಲ್ಲೀ, ಹಾದಿ ಬೀದಿಲಿ ಸಿಕ್ಕಿದೋರ ಹಿಡಕಂಡು ಬಂದು, ಚಡ್ಡಿ ಇಕ್ಕಿ, ಲಾಟಿ ಕೊಟ್ಟು ಮಹೊಡಿ ಸಾಬರಿಗೆ ಅನ್ನೂ ಪಾರ್ಟಿ ಎಲ್ಲಿ? ಅಂಥ ಪಾರ್ಟಿನ ದೇವತೆಯಂತ ತಾಯಿಗೋಲುಸ್ತಿರಲ್ಲಾ. ಆಯ್ತು ನಿಮ್ಮ ಮಾತನ್ನ ಒಪ್ಪಿಗಳನ. ಇವತ್ತು ನಿಮ್ಮ ಕತೆ ಏನಾಗಿದೆ?”

“ಏನು ಆಗಬಾರದ್ದಾಗಿಲ್ಲ ಕಂಡ್ರೀ.”

“ಸಾರ್ ನಿಮಗೆ ಯಂಗೇಳಬೇಕು ಅಂತ ಗೊತ್ತಾಯ್ತಯಿಲ್ಲ. ಬಿಜೆಪಿಲಿ ಚುನಾವಣೆಗೆ ನಿಲ್ಲಕ್ಕೆ ನಿಮ್ಮಷ್ಟು ಯೋಗ್ಯ ಕ್ಯಾಂಡೇಟ್ ಇರಲಿಲ್ಲ. ಅವುರು ನಿರಾಕರಿಸಿದ ತಕ್ಷಣನೆ ಶೆಟ್ಟರ್ ತರ ತೀರ್ಮಾನ ತಗೊಬೇಕಿತ್ತು.”

“ಬ್ಯಾರೆ ಪಾರ್ಟಿಯೋರು ನನ್ನನ್ನ ಸೇರಿಸ್ರಿರಲಿಲ್ಲ ಕಂಡ್ರಿ.”

“ಜೆಡಿಎಸ್‌ನೋರು ಸೇರಿಸ್ತಿದ್ರು ಸಾರ್. ಜೆಡಿಎಸ್ ಟೀಮನ್ನ ದಂಡೂಪಾಳ್ಯದ ಗ್ಯಾಂಗು ಅಂದಿದ್ದ ಆಯನೂರ್ ಮಂಜುನಾಥನ್ನೆ ಸೇರಿಸಿಕೊಂಡ್ರು. ಅಂಥದರಲ್ಲಿ ಕುಮಾರಣ್ಣ ನಿಮ್ಮನ್ನ ಬುಡತಿದ್ರೆ..”

“ಬುಡತಿರಲಿಲ್ಲ ನಿಜ. ಅಂಗೆ ನೋಡಿದ್ರೆ ಕುಮಾರಣ್ಣ ಈ ಹಿಂದೆ ಎರಡು ಬಾರಿ ನಾನೇಳಿದೋರಿಗೆ ಟಿಕೆಟ್ ಕೊಟ್ಟವುರೆ. ಅಂಗಂತ ನಾನು ಪಾರ್ಟಿ ಬುಡಕ್ಕಾಗಲ್ಲ. ಈಗ ನಾನು ಚುನಾವಣಾ ರಾಜಕಾರಣದಿಂದ ದೂರ. ಮುಂದೆ ಪಾರ್ಟಿ ಕೆಲಸ ಮಾಡಿಕಂಡೋಯ್ತಿನಿ”

“ಪಾರ್ಟಿ ಕೆಲಸನ ನಿಮ್ಮಿಂದ ಯಾರೂ ನಿರೀಕ್ಷೆ ಮಾಡಿಲ್ಲ.”

“ಯಾಕ್ರಿ ಅಂಗಂತಿರಿ?”

“ನಿಮ್ಮ ಜಾಗಕ್ಕೆ ನಿಮಗಿಂತ್ಲೂ ಭೀಕರ ವ್ಯಕ್ತಿನ ತಂದಾಗ್ಯದೆ. ಮುಂದೆ ಅವುಂದೆ ರಾಜ್ಯಭಾರ. ಅವುರು ಆವರಿಸಿಕೊಂಡ ಜಾಗದಲ್ಲಿ ನೀವು ಅಪ್ಪಮಕ್ಕಳಿಗೇನೂ ಕೆಲಸಿಲ್ಲ. ನಿಮ್ಮ ಈ ನಿವೃತ್ತಿ ನಂತರ ನಿಮ್ಮ ಮಗ ನಿಮ್ಮ ಜೊತೆ ಬಂದು ಸೇರಿಕಳ್ತನೆ. ನೀವು ಮೂಲೆಗುಂಪಾಗದ್ರಲ್ಲಿ ಈಗಾಗ್ಲೆ ಮೂಲೆಗುಂಪಾಗಿರೊ ಎಡೂರಪ್ಪನ ಕೈವಾಡನೂ ಇದೆ.”

“ಅವುರ ಕೈವಾಡ ಯಾಕಿರತ್ರಿ?”

“ಸಾರ್ ನಿಜ ಹೇಳಿ. ನಿಮಗೆ ಎಡೂರಪ್ಪ ಅಂದ್ರೆ ಅಷ್ಟಕಷ್ಟೆ. ಇನ್ನ ರಾಘವೇಂದ್ರನ ಗೆಲುವು ನಿಮಗೆ ಬೇಕಿರಲಿಲ್ಲ. ಅಂಗೇನೆ ಆ ವಿಜಯೇಂದ್ರನ ಅಭ್ಯುದಯ ನಿಮಗೆ ಬೇಕಿಲ್ಲ, ಇದು ಗೊತ್ತಾಗಿ ಎಡೂರಪ್ಪ ನಮ್ಮ ಕತೆ ಮುಗದರಷ್ಟೆ ಹೋಯ್ತು, ಈಶ್ವರಪ್ಪನ ಕತೆನೂ ಮುಗಿಲಿ ಅಂತ ಕಾಯ್ತಿದ್ರು ಸಾರ್.”

“ಅದು ನನಿಗೂ ಗೊತ್ತು ಕಂಡ್ರಿ. ನಾನೇನು ಅಷ್ಟು ದಡ್ಡ ಅಲ್ಲ.”

“ಆದ್ರು ನೀವು ಅಸಹಾಯಕರಾಗಿ ಅಂತ್ಯವಾಗ್ತಿರಿ ಸಾರ್.”

“ಹ್ಯಂಗ್ರೀ?”

“ಎಡೂರಪ್ಪನ ಮಕ್ಕಳು ಎಂ.ಪಿ ಎಂ.ಎಲ್.ಎ ಆಯ್ತರೆ. ಸಿಟ್ಟು ಸ್ವಾಭಿಮಾನ ತೋರಿದ ಶೆಟ್ಟರ್ ಎಂ.ಎಲ್.ಎ ಆಯ್ತರೆ. ನೀವು ಅಪ್ಪಾ ಮಗ ಏನೂ ಆಗಲವಲ್ಲ ಸಾ.”

“ಆಗದಿದ್ರೆ ಕತ್ತೆ ಬಾಲ, ಸಂಘದ ಕಾರ್ಯಕರ್ತರಾಗಿರ್ತಿವಿ.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...