Homeಅಂಕಣಗಳುಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

- Advertisement -
- Advertisement -

ಎದುರು ಬರುತ್ತಿರುವವನು ಕಾಂಗ್ರೆಸ್ ಕಾರ್ಯಕರ್ತ ಎಂದು ಗೊತ್ತಾದರೆ ಸಾಕು ಭಕ್ತಿಯಿಂದ ಕೈ ಮುಗಿದು, ’ದಯಮಾಡಿ ನನ್ನನ್ನ ಕಾಂಗ್ರೆಸ್‌ಗೆ ಸೇರಿಸಿ’ ಎಂದು ಕೇಳಿಕೊಳ್ಳುತ್ತಿದ್ದ ಕಡೂರು ದತ್ತಣ್ಣ ಕಾಂಗ್ರೆಸ್ ಸೇರಿಯೂ ಆಯ್ತು; ಅದನ್ನು ಬಿಟ್ಟು ಮತ್ತೆ ಜೆಡಿಎಸ್ ಸೇರಿ ಕಡೂರಿನ ಕ್ಯಾಂಡೇಟ್ ಆಗಿಯೂ ಆಯ್ತು. ಕಡೂರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಂತಹ ವ್ಯತ್ಯಾಸವಿಲ್ಲ, ಹಾಗಾಗಿ ದತ್ತಣ್ಣ ಎಲ್ಲಿ ನಿಂತರೂ ಮೂರನೆ ಸ್ಥಾನ ಕಾಯಂ ಆಗಿದೆಯಂತಲ್ಲಾ, ಥೂತ್ತೇರಿ.

*****

ಸಿ.ಸೋಮಶೇಖರ ನೆನಪಿಸಿಕೊಳ್ಳಿ; ಅಧಿಕಾರಿಯಾಗಿ ಅಖಂಡ ಐಶ್ವರ್ಯ ಹೊಂದಿದ್ದವರು ಮತ್ತು ಲಂಕೇಶ್‌ರಿಂದ ಜನ್ಮಾಪಿ ನೆನೆಸಿಕೊಳ್ಳುವಂತೆ ಟೀಕಿಸಿಕೊಂಡಿದ್ದವರು. ಇದಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಅರೆದು ಕುಡಿಯಲು ಪ್ರಯತ್ನಿಸಿ, ಅರಗಿಸಿಕೊಳ್ಳಲಾಗದೆ ವಾಂತಿ ಮಾಡಿಕೊಂಡಿದ್ದರು. ಈತ ವಚನ ಹೇಳುತ್ತಿರುವುದು ಬಿಜೆಪಿ ಪಡಸಾಲೆಯಲ್ಲಿ, ಏಕೆಂದರೆ ಬಿಜೆಪಿ ಗರ್ಭಗುಡಿಗೆ ಆತ ಹೋಗುವಂತಿಲ್ಲ. ಬಿಜೆಪಿ ಲಿಂಗಾಯಿತರಿಗೆ ಗೌರವ ತಂದುಕೊಟ್ಟ ಪಕ್ಷ ಎಂದು ಹೇಳಿಕೊಂಡು ತಿರುಗುತ್ತಿರುವ ಈತ ತುಮಕೂರು ಜಿಲ್ಲೆಯ ಡಿ.ಸಿಯಾಗಿದ್ದಾಗ, ಇಂಥದೇ ಚುನಾವಣೆ ಬಂದು ಮೊದಲು ಆ ಡಿ.ಸಿಯನ್ನ ವರ್ಗಮಾಡಿ ಎಂದು ದೇವೇಗೌಡರು ಹಟ ಹಿಡಿದದ್ದು ಯಾಕೆ ಅಂತ ಈಗ ಗೊತ್ತಾಗುತ್ತಿದೆಯಲ್ಲಾ, ಥೂತ್ತೇರಿ.

*****

ಬಿಜೆಪಿ ಪರವಾಗಿ ಸಿ.ಸೋಮಶೇಖರ್ ನಂತಹವರು ಎಷ್ಟೇ ವಕಾಲತ್ತು ವಹಿಸಿದರೂ ಈಶ್ವರಪ್ಪನಿಗಿರುವ ಪಕ್ಷನಿಷ್ಠೆ ಇಡೀ ದೇಶದಲ್ಲಿಯೇ ಯಾರಿಗೂ ಇಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಅದಕ್ಕಾಗಿಯೇ ಪ್ರಧಾನಿಯವರೇ ಫೋನು ಮಾಡಿ ಅಭಿನಂದಿಸಿ, ’ಈಶ್ವರಪ್ಪಾಜಿ, ತು ಅಸಾಧಾರಣ ವ್ಯಕ್ತಿ ಹೈ. ಏಕ್ ಬಾರ್ ಇದರ್ ಆನ’ ಎಂದರಂತಲ್ಲಾ. ಆ ಕೂಡಲೇ ಕೇಸರಿ ಮೈದುಂಬಿದಂತಾದ ಈಶ್ವರಪ್ಪ, ’ಆ ಜಗದೀಶ್ ಶೆಟ್ಟರ್ ಕಾಂಗ್ರೆಸ್ಸಲ್ಲಿ ಸಾಯಿಲಿ, ನಾನು ಮಾತ್ರ ಬಿಜೆಪಿಲಿದ್ದೇ ಹೋಯ್ತಿನಿ’ ಎಂದರಂತಲ್ಲಾ. ಇಂತಹ ಕಠೋರ ಶಪಥ ಮಾಡಿದ ಈಶ್ವರಪ್ಪನನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಅಲ್ಲವೆ! ಅದಕ್ಕಾಗಿ ಫೋನು ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ..’

“ಹಲೋ ಯಾರೂ?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿಗೋದ್ರಿ, ಬನ್ರಿ ಮಾತಾಡನ”.

“ಡೆಡ್‌ಲೈನಿಗೆ ಒಂದೆರಡು ಮಾತ್ ಹೇಳಿ ಸಾರ್.”

“ಏನು ಮಾತಾಡದ್ರಿ.. ಯಾವುದ್ಕು ಉತ್ಸಾಹ ಇಲ. ಸುಮ್ಮನೆ ತೋರಿಕೆಗೆ ಏನೇನೋ ಮಾತಾಡ್ತಿನಿ.”

“ಅದು ಗೊತ್ತು ಸಾರ್, ನಿಮ್ಮತ್ರ ಸೇವಕನಂಗಿದ್ದ ಹುಡುಗನ ಪರ ಓಟು ಕೇಳಿದರಂತೆ. ಹಿಂಸೆ ನ್ಯನಿಸಿಗಳಕ್ಕಾಗಲ್ಲ.”

“ಆದ್ರು ಕೇಳಬೇಕಲ್ಲ ಹೇಳಿ.”

“ಯಾಕ್ಸರ್ ಬಿಜೆಪಿಗಳು ನಿಮಿಗೆ ಇಂತ ಅವುಮಾನ ಮಾಡಿದ್ರು. ಬಿಜೆಪಿ ಇತಿಹಾಸದಲ್ಲಿ ಯಾರಿಗೂ ಇಂತ ಅವುಮಾನಾಗಿಲ್ಲ ಸಾ.”

“ಶೆಟ್ಟರ್‌ಗಿಂತ ಅವುಮಾನಾಗಿಲ್ಲ ಬುಡ್ರಿ.”

“ಅಂಗಂತಿರಾ?”

ಇದನ್ನೂ ಓದಿ: ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

“ಊ ಮತ್ತೆ. ಮುಖ್ಯಮಂತ್ರಿಯಾಗಿದ್ದೋರಿಗೆ ಮಿಸ್ ಕಾಲ್ ಕೊಟ್ಟು, ಇವುರು ಪೋನ್ ಮಾಡಿದಾಗ ನಿಮಗೆ ಟಿಕೆಟ್ ಇಲ್ಲ ಅಂದುಬುಟ್ಟು ಕಟ್ ಮಾಡ್ಯವುರಲ್ಲ, ಇದವು ಅವಮಾನ ಅಲವೆ?”

“ನಿಮ್ಮ ಅವುಮಾನದ ಮುಂದೆ ಅವುರದೇನೂ ಅಲ್ಲ ಸಾರ್.”

“ಅದ್ಯಂಗರೀ?”

“ನೀವು ಬಿಜೆಪಿ ಕಟ್ಟಿ ಬೆಳೆಸಿದ ಮಹಾನಾಯಕ. ಶಿವಮೊಗ್ಗದಲ್ಲಿ ಪಾರ್ಟಿಗಾಗಿ ಬಂದ್, ಗೋಲಿಬಾರು, ಲೂಟಿ ಯಲ್ಲಾನು ಮಾಡಿಸಿದ್ದಿರಿ. ಕೆ.ಹೆಚ್.ಶ್ರೀನಿವಾಸ್ ಊರಾಬುಟ್ಟೋಗಂಗೆ ಮಾಡಿದ್ದಿರಿ, ಮುಸ್ಲಿಮರ ಮದುವೆಗೂ ದುಡ್ಡುಕೊಟ್ಟಿದ್ದಿರಿ. ತಮುಳು ಜನ ಸಂಘಟಿಸಿ ಅವುರನೆಲ್ಲಾ ಬಸ್ಸಲ್ಲಿ ಸರದಿ ಪ್ರಕಾರ ತುಂಬಿಕಂಡೋಗಿ ತಮುಳು ನಾಡಿನ ತಂಜಾವ್ಯೂರು, ರಾಮೇಶ್ವರ, ಚಿದಂಬರ, ಮದುರೆ, ಪಳನಿ ಯಲ್ಲಾನು ತೋರಿಸಿಗಂಡು ಬಂದು ಸುರದ್ದಿದ್ದಿರಿ. ಹಂಗೆ ನೋಡಿದ್ರೆ ಆ ಶಿವಮೊಗ್ಗದಲ್ಲಿ ನಿಮ್ಮನ್ನ ಸೋಲಸಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ. ಇದ್ಯಾವುದನ್ನು ಲೆಕ್ಕಕ್ಕೆ ತಗೊಳ್ದೆ, ಕೇವಲ ಸಿದ್ದರಾಮಯ್ಯನ ತಲೆ ಕಡಿತಿನಿ ಅಂದಿದ್ದ ಮಾತ್ರಕ್ಕೆ ನಿಮ್ಮ ಸೇವಕನಿಗೆ ಟಿಕೆಟ್ ಕೊಟ್ಟು ನಿಮಗಿಲ್ಲ ಅಂದರಲ್ಲಾ ಸಾರ್. ನನಗೇ ಇಷ್ಟು ಹಿಂಸೆ ಆಯ್ತಾ ಅದೆ. ನೀವ್ಯಂಗೆ ತಡ್ಕೋತಾ ಇದೀರಿ ಅನ್ನದೆ ಆಶ್ಚರ್ಯ ಸಾರ್.”

“ಅದು ಪಾರ್ಟಿ ನಿಷ್ಟೆ ಕಂಡ್ರಿ, ನನಿಗೆ ಇಲ್ಲಿವರಿಗೂ ಸಿಕ್ಕಿದೆಲ್ಲಾ ಪಾರ್ಟಿಯಿಂದ. ಪಾರ್ಟಿ ನಮ್ಮ ತಾಯಿಯಿದ್ದಂಗೆ.”

“ಪಾರ್ಟಿ ತಾಯಿಯಾದ್ರೆ, ತಂದೆ ಯಾರು ಸಾರ್?”

“ಪೊಲಿಟಿಕೆಲ್ ಪಾರ್ಟಿ ಅಂದ್ರೆ ತಾಯಿ, ಅಲ್ಲಿ ತಂದೆಯಿರಲ್ಲ”

“ಅಂದ್ರೆ ಪೊಲಿಟಿಕಲ್ ಪಾರ್ಟಿಗೆ ತಂದೆಯಿರಲ್ವ ಸಾರ್?”

“ರಿ ತಲೆಕೆಟ್ಟಂಗೆ ಮಾತಾಬ್ಯಾಡಿ. ನಮ್ಮನ್ನ ಬೆಳೆಸಿ ಸ್ಥಾನಮಾನ ಕೊಟ್ಟ ಪಾರ್ಟಿ ತಾಯಿಗೆ ಸಮಾನ ಅಂತ ನಾನು ಹೇಳಿದ್ದು.”

“ನನಿಗೇನೂ ಈ ಹೋಲಿಕೆನೆ ಸರಿಯಿಲ್ಲ ಸಾರ್. ಅಪ್ರಭುದ್ಧ ಮೂರ್ಖರು ಮಾತ್ರ ಇಂತ ಹೋಲಿಕೆ ಮಾಡಬಲ್ಲರು.”

“ಯಾಕ್ರಿ ಅಂಗಂತಿರಿ?”

“ಮತ್ತಿನ್ನೇನು ಸಾರ್, ಹೆತ್ತು ಹಾಲು ಕುಡಿಸಿ ಬೆಳೆಸೋ ತಾಯಿ ಎಲ್ಲೀ, ಹಾದಿ ಬೀದಿಲಿ ಸಿಕ್ಕಿದೋರ ಹಿಡಕಂಡು ಬಂದು, ಚಡ್ಡಿ ಇಕ್ಕಿ, ಲಾಟಿ ಕೊಟ್ಟು ಮಹೊಡಿ ಸಾಬರಿಗೆ ಅನ್ನೂ ಪಾರ್ಟಿ ಎಲ್ಲಿ? ಅಂಥ ಪಾರ್ಟಿನ ದೇವತೆಯಂತ ತಾಯಿಗೋಲುಸ್ತಿರಲ್ಲಾ. ಆಯ್ತು ನಿಮ್ಮ ಮಾತನ್ನ ಒಪ್ಪಿಗಳನ. ಇವತ್ತು ನಿಮ್ಮ ಕತೆ ಏನಾಗಿದೆ?”

“ಏನು ಆಗಬಾರದ್ದಾಗಿಲ್ಲ ಕಂಡ್ರೀ.”

“ಸಾರ್ ನಿಮಗೆ ಯಂಗೇಳಬೇಕು ಅಂತ ಗೊತ್ತಾಯ್ತಯಿಲ್ಲ. ಬಿಜೆಪಿಲಿ ಚುನಾವಣೆಗೆ ನಿಲ್ಲಕ್ಕೆ ನಿಮ್ಮಷ್ಟು ಯೋಗ್ಯ ಕ್ಯಾಂಡೇಟ್ ಇರಲಿಲ್ಲ. ಅವುರು ನಿರಾಕರಿಸಿದ ತಕ್ಷಣನೆ ಶೆಟ್ಟರ್ ತರ ತೀರ್ಮಾನ ತಗೊಬೇಕಿತ್ತು.”

“ಬ್ಯಾರೆ ಪಾರ್ಟಿಯೋರು ನನ್ನನ್ನ ಸೇರಿಸ್ರಿರಲಿಲ್ಲ ಕಂಡ್ರಿ.”

“ಜೆಡಿಎಸ್‌ನೋರು ಸೇರಿಸ್ತಿದ್ರು ಸಾರ್. ಜೆಡಿಎಸ್ ಟೀಮನ್ನ ದಂಡೂಪಾಳ್ಯದ ಗ್ಯಾಂಗು ಅಂದಿದ್ದ ಆಯನೂರ್ ಮಂಜುನಾಥನ್ನೆ ಸೇರಿಸಿಕೊಂಡ್ರು. ಅಂಥದರಲ್ಲಿ ಕುಮಾರಣ್ಣ ನಿಮ್ಮನ್ನ ಬುಡತಿದ್ರೆ..”

“ಬುಡತಿರಲಿಲ್ಲ ನಿಜ. ಅಂಗೆ ನೋಡಿದ್ರೆ ಕುಮಾರಣ್ಣ ಈ ಹಿಂದೆ ಎರಡು ಬಾರಿ ನಾನೇಳಿದೋರಿಗೆ ಟಿಕೆಟ್ ಕೊಟ್ಟವುರೆ. ಅಂಗಂತ ನಾನು ಪಾರ್ಟಿ ಬುಡಕ್ಕಾಗಲ್ಲ. ಈಗ ನಾನು ಚುನಾವಣಾ ರಾಜಕಾರಣದಿಂದ ದೂರ. ಮುಂದೆ ಪಾರ್ಟಿ ಕೆಲಸ ಮಾಡಿಕಂಡೋಯ್ತಿನಿ”

“ಪಾರ್ಟಿ ಕೆಲಸನ ನಿಮ್ಮಿಂದ ಯಾರೂ ನಿರೀಕ್ಷೆ ಮಾಡಿಲ್ಲ.”

“ಯಾಕ್ರಿ ಅಂಗಂತಿರಿ?”

“ನಿಮ್ಮ ಜಾಗಕ್ಕೆ ನಿಮಗಿಂತ್ಲೂ ಭೀಕರ ವ್ಯಕ್ತಿನ ತಂದಾಗ್ಯದೆ. ಮುಂದೆ ಅವುಂದೆ ರಾಜ್ಯಭಾರ. ಅವುರು ಆವರಿಸಿಕೊಂಡ ಜಾಗದಲ್ಲಿ ನೀವು ಅಪ್ಪಮಕ್ಕಳಿಗೇನೂ ಕೆಲಸಿಲ್ಲ. ನಿಮ್ಮ ಈ ನಿವೃತ್ತಿ ನಂತರ ನಿಮ್ಮ ಮಗ ನಿಮ್ಮ ಜೊತೆ ಬಂದು ಸೇರಿಕಳ್ತನೆ. ನೀವು ಮೂಲೆಗುಂಪಾಗದ್ರಲ್ಲಿ ಈಗಾಗ್ಲೆ ಮೂಲೆಗುಂಪಾಗಿರೊ ಎಡೂರಪ್ಪನ ಕೈವಾಡನೂ ಇದೆ.”

“ಅವುರ ಕೈವಾಡ ಯಾಕಿರತ್ರಿ?”

“ಸಾರ್ ನಿಜ ಹೇಳಿ. ನಿಮಗೆ ಎಡೂರಪ್ಪ ಅಂದ್ರೆ ಅಷ್ಟಕಷ್ಟೆ. ಇನ್ನ ರಾಘವೇಂದ್ರನ ಗೆಲುವು ನಿಮಗೆ ಬೇಕಿರಲಿಲ್ಲ. ಅಂಗೇನೆ ಆ ವಿಜಯೇಂದ್ರನ ಅಭ್ಯುದಯ ನಿಮಗೆ ಬೇಕಿಲ್ಲ, ಇದು ಗೊತ್ತಾಗಿ ಎಡೂರಪ್ಪ ನಮ್ಮ ಕತೆ ಮುಗದರಷ್ಟೆ ಹೋಯ್ತು, ಈಶ್ವರಪ್ಪನ ಕತೆನೂ ಮುಗಿಲಿ ಅಂತ ಕಾಯ್ತಿದ್ರು ಸಾರ್.”

“ಅದು ನನಿಗೂ ಗೊತ್ತು ಕಂಡ್ರಿ. ನಾನೇನು ಅಷ್ಟು ದಡ್ಡ ಅಲ್ಲ.”

“ಆದ್ರು ನೀವು ಅಸಹಾಯಕರಾಗಿ ಅಂತ್ಯವಾಗ್ತಿರಿ ಸಾರ್.”

“ಹ್ಯಂಗ್ರೀ?”

“ಎಡೂರಪ್ಪನ ಮಕ್ಕಳು ಎಂ.ಪಿ ಎಂ.ಎಲ್.ಎ ಆಯ್ತರೆ. ಸಿಟ್ಟು ಸ್ವಾಭಿಮಾನ ತೋರಿದ ಶೆಟ್ಟರ್ ಎಂ.ಎಲ್.ಎ ಆಯ್ತರೆ. ನೀವು ಅಪ್ಪಾ ಮಗ ಏನೂ ಆಗಲವಲ್ಲ ಸಾ.”

“ಆಗದಿದ್ರೆ ಕತ್ತೆ ಬಾಲ, ಸಂಘದ ಕಾರ್ಯಕರ್ತರಾಗಿರ್ತಿವಿ.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...