‘‘ರಾತ್ರಿ ರಾಜಕಾರಣದ ಸಂಸ್ಕೃತಿ ತಿಳಿದಿರುವುದರಿಂದಲೆ ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ” ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್, ಯಾವುದೇ ಪಕ್ಷದ ಮಹಿಳಾ ರಾಜಕಾರಣಿಯು ಈ ರೀತಿಯ ಕೀಳುಮಟ್ಟದ ಮಾತುಗಳನ್ನು ಕೇಳಲು ಅರ್ಹರಲ್ಲ. ಪಕ್ಷದ ಸದಸ್ಯರು ಕ್ಷಮೆ ಕೇಳುವಂತೆ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಆಗ್ರಹಿಸಬೇಕು ಎಂದಿದ್ದಾರೆ.
“ಮಾಜಿ ಬಿಜೆಪಿ ಶಾಸಕರೊಬ್ಬರು ಬೆಳಗಾವಿ ಗ್ರಾಮೀಣ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರೆಡೆಗೆ ಸಂಶಯಾಸ್ಪದ ಟೀಕೆಗಳನ್ನು ಮಾಡುತ್ತಾ, ಆಕೆ “ನೈಟ್ ಪಾಲಟಿಕ್ಸ್” ಮೂಲಕ ಶಾಸಕರಾಗಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಪಕ್ಷದ ಮಹಿಳಾ ರಾಜಕಾರಣಿಯು ಈ ರೀತಿಯ ಕೀಳುಮಟ್ಟದ ಮಾತುಗಳನ್ನು ಕೇಳಲು ಅರ್ಹರಲ್ಲ. ಕರ್ನಾಟಕದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು, ಅವರ ಪಕ್ಷದ ಸದಸ್ಯರಿಂದ ಕ್ಷಮೆ ಕೇಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್
“ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಆಡಿರುವ ಮಾತು ಅಸಹ್ಯದ ಪರಮಾವಧಿ. ಇದು ಬಿಜೆಪಿಯವರ ಕೀಳು ಮನಸ್ಥಿತಿಯ ಅನಾವರಣ. ಸಿ.ಟಿ ರವಿಯವರು RSS ಎಂಬುವುದು ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಗರಡಿ ಮನೆ ಎಂದಿದ್ದಾರೆ. ಹಾಗಾದರೆ RSS ಗರಡಿ ಮನೆಯಲ್ಲಿ ಬಿಜೆಪಿ ನಾಯಕರು ಕಲಿಯುವುದು ಈ ಸಂಸ್ಕಾರವನ್ನೇ..? ಹೇಳಿ ಸಿ.ಟಿ ರವಿಯವರೆ..?” ಎಂದು ಪ್ರಶ್ನಿಸಿದ್ದಾರೆ.
1@laxmi_hebbalkar ಬಗ್ಗೆ BJPಯ ಮಾಜಿ ಶಾಸಕ ಸಂಜಯ್ ಪಾಟೀಲ್ ಆಡಿರುವ ಮಾತು ಅಸಹ್ಯದ ಪರಮಾವಧಿ.
ಇದು BJPಯವರ ಕೀಳು ಮನಸ್ಥಿತಿಯ ಅನಾವರಣ. @CTRavi_BJP ಯವರು RSS ಎಂಬುವುದು ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಗರಡಿ ಮನೆ ಎಂದಿದ್ದಾರೆ.
ಹಾಗಾದರೆ RSS ಗರಡಿ ಮನೆಯಲ್ಲಿ BJP ನಾಯಕರು ಕಲಿಯುವುದು ಈ ಸಂಸ್ಕಾರವನ್ನೇ?ಹೇಳಿ C.T.ರವಿಯವರೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 30, 2021
ಸಾಮಾಜಿಕ ಹೋರಾಟಗಾರ್ತಿ, ಬರಹಗಾರ್ತಿ ಪಲ್ಲವಿ ಐದೂರು, ಬಿಜೆಪಿಯ ಸಂಜಯ ಪಾಟೀಲ ವಿರುದ್ಧ ಕಿಡಿಕಾರಿದ್ದಾರೆ.
“ಹಗಲೆಲ್ಲ ನಾಯಕರ ಮನೆ ಮುಂದೆ ಗೇಟ್ ಕೀಪರ್ಗಳ ತರ, ನಾಯಿಯ ತರ ಕಾವಲು ಕಾಯ್ಕೊಂಡು ಒಂದೇ ಒಂದು ಸೀಟಿಗೆ, ಅವಕಾಶಕ್ಕೆ ತಲೆ ಹಿಡಿಯೋದಕ್ಕೂ ಹಿಂದೆ ಮುಂದೆ ನೋಡದ ಇಂಥ ನಾಯಕರು ಹೆಣ್ಣುಮಕ್ಕಳು ಏನಾದರೂ ಸಾಧಿಸಿದರೆ, ಬೆಳೆದರೆ ಮಾತ್ರ ನಾಲಿಗೆಯನ್ನು ಮೋರಿಗಿಂತ ಗಲೀಜಾಗಿ ಹರಿಬಿಡ್ತಾರೆ!!” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲೆಲ್ಲ ನಾಯಕರ ಮನೆ ಮುಂದೆ ಗೇಟ್ ಕೀಪರ್ ಗಳ ತರ, ನಾಯಿಯ ತರ ಕಾವಲು ಕಾಯ್ಕೊಂಡು ಒಂದೇ ಒಂದು ಸೀಟಿಗೆ, ಅವಕಾಶಕ್ಕೆ ತಲೆ ಹಿಡಿಯೋದಕ್ಕೂ ಹಿಂದೆ ಮುಂದೆ ನೋಡದ ಇಂಥ ನಾಯಕರು ಹೆಣ್ಣುಮಕ್ಕಳು ಏನಾದರೂ ಸಾಧಿಸಿದರೆ, ಬೆಳೆದರೆ ಮಾತ್ರ ನಾಲಿಗೆಯನ್ನು ಮೋರಿಗಿಂತ ಗಲೀಜಾಗಿ ಹರಿಬಿಡ್ತಾರೆ!! pic.twitter.com/2TciwZEmp8
— Pallavi Idoor (@pallaviidoor) October 1, 2021
ಸಂಜಯ ಪಾಟೀಲ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ. ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ 2 ನೇ ಅವತಾರವಾಗಿರುವ ಸಂಜಯ ಪಾಟೀಲರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ತಿರುಗೇಟು ನೀಡಿದ್ದರು.
ಇದನ್ನೂ ಓದಿ: ರಾತ್ರಿ ರಾಜಕಾರಣದ ಸಂಸ್ಕೃತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿದ್ದಾರೆ: ಬಿಜೆಪಿ ಮಾಜಿ ಶಾಸಕ ವಿವಾದ